ಪುತ್ತೂರು : ಕೊರೊನಾ ತಡೆಗಟ್ಟುವ ಕಾರಣದಿಂದಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಎಸ್ ಐ ಜಂಬೂರಾಜ್ ರವರ ನೇತೃತ್ವದಲ್ಲಿ ಪೊಲೀಸರು ಬಿಗಿ ತಪಾಸಣೆ ನಡೆಸುತ್ತಿದ್ದಾರೆ.
ಭಾನುವಾರ ಬಂತೆಂದರೆ ಸಾಕು ಎಲ್ಲಾ ಕೆಲಸಗಳಿಗೆ ವಿರಾಮ ನೀಡಿ ಸುತ್ತಾಡುತ್ತಿದ್ದ ಸಮಯವಿತ್ತು. ಆದರೆ ಇದು ಕಠಿಣ ಕ್ರಮ ಜಾರಿಯಲ್ಲಿರುವ ಲಾಕ್ ಡೌನ್ ದಿನಗಳು. ಆದರೂ ಜನ ಇವತ್ತೂ ಕೂಡ ಗಂಭೀರತೆಯ ನಡುವೆಯೂ ಅನಾವಶ್ಯಕವಾಗಿ ಪೇಟೆಗೆ ಬರುತ್ತಿದ್ದರು.. ಭಾನುವಾರ ಪೇಟೆಗೆ ಬಂದವರಿಗೆ ಕಾದಿತ್ತು ಶಾಕ್..ಪುತ್ತೂರಿನಲ್ಲಿ ಈ ಕುರಿತಂತೆ ಬಿಗಿ ನಿಯಮಗಳು ಜಾರಿಯಾಗಿದೆ. ಆರಕ್ಷಕ ಸಿಬ್ಬಂದಿಗಳು ಅನಾವಶ್ಯಕವಾಗಿ ಪೇಟೆಗೆ ಬರುವವರನ್ನು ದರ್ಬೆ ಸರ್ಕಲ್ ನಲ್ಲಿ ತಪಾಸಣೆ ನಡೆಸಿ, ದಂಡ ವಿಧಿಸಿ ಎಚ್ಚರಿಕೆ ನೀಡಿ ವಾಪಾಸ್ ಕಳುಹಿಸುತ್ತಿರುವ ಘಟನೆ ನಡೆಯಿತು.