ಪುತ್ತೂರು : ‘ಗದ್ದಿಗೆ ಕರಾವಳಿ ಮರಾಟಿ ಸಮಾವೇಶ-2024’ ನ.10 ರಂದು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ. ಖಾದರ್, ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಹೆಚ್.ಸಿ. ಮಹದೇವಪ್ಪ, ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹಿತ ಹಲವು ರಾಜಕೀಯ ಪ್ರಮುಖರು, ಸಾಮಾಜಿಕ ಧುರೀಣರು ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪುತ್ತೂರಿನಿಂದಲೂ ಕಾರ್ಯಕ್ರಮಕ್ಕೆ ತೆರಳಲು ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಹಾಲಿಂಗ ನಾಯ್ಕ್ ವಿನಂತಿಸಿದ್ದಾರೆ.
ಗದ್ದಿಗೆ ಕರಾವಳಿ ಮರಾಟಿ ಸಮಾವೇಶ-2024 ಇದರ ಆಮಂತ್ರಣ ಪತ್ರಿಕೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ರವರಿಗೆ ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಶಾಸಕರ ಟ್ರಸ್ಟ್ ಕಚೇರಿಯಲ್ಲಿ ವಿತರಿಸಿ ಗೌರವ ಪೂರ್ವಕವಾಗಿ ಆಮಂತ್ರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಪೂವಪ್ಪ ನಾಯ್ಕ ಕಾವು, ಪ್ರಧಾನ ಕಾರ್ಯದರ್ಶಿ ಶೀನಪ್ಪ ನಾಯ್ಕ ನೆಲ್ಯಾಡಿ, ಮಾಜಿ ಅಧ್ಯಕ್ಷರಾದ ಸುಂದರ ನಾಯ್ಕ ಕೆ., ಮಹಾಲಿಂಗ ನಾಯ್ಕ ನರಿಮೊಗರು, ಪರಮೇಶ್ವರ ನಾಯ್ಕ ಪಾಂಗ್ಲಾಯಿ, ಕರುಣಾಕರ ನಾಯ್ಕ ಪಾಂಗ್ಲಾಯಿ, ರಾಮಚಂದ್ರ ನಾಯ್ಕ ಕೇಪುಳು. ವೆಂಕಪ್ಪ ನಾಯ್ಕ ನೆಹರೂನಗರ, ಪಂಚಾಯತ್ ಸದಸ್ಯರಾದ ಶೀನಪ್ಪನಾಯ್ಕ, ವಿಮಲ ನಾಯ್ಕ, ವಿನುತ, ಮಹಿಳಾ ಘಟಕದ ಕಾರ್ಯದರ್ಶಿ ವಸಂತಿ ಪಿ.ಕೆ, ವೀಣಾ ದೇವಪ್ಪ ನಾಯ್ಕ, ವಿಠಲ ನಾಯ್ಕ ಅರಿಯಡ್ಕ ಉಪಸ್ಥಿತರಿದ್ದರು.