ಶಾಲೆಯು ಒಂದು ಗ್ರಾಮ ದ ಅಭಿವೃದ್ಧಿ ಗೆ ಹಿಡಿದ ಕನ್ನಡಿ ಆಗಿರುತ್ತದೆ. ಎಲ್ಲಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತವೆಯೋ ಆಗ ಆ ಊರೇ ಅಭಿವೃದ್ಧಿ ಹೊಂದುವುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಮೊದಲ ಮೆಟ್ಟಿಲು ಶಾಲಾ ಶಿಕ್ಷಕರು ಮತ್ತು ಉತ್ತಮ ಶಾಲಾಭಿವೃದ್ಧಿ ಸಮಿತಿ. ಆದ್ದರಿಂದ ಉತ್ತಮ ಶಾಲಾ ಅಭಿವೃದ್ಧಿ ಸಮಿತಿ ರಚನೆ ಎಲ್ಲಾ ಪೋಷಕರ ಜವಾಬ್ದಾರಿ ಆಗಿರುತ್ತದೆ ಎಂದು ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಶಾಲಾ ಮಕ್ಕಳ ಪೋಷಕರ ಸಭೆ ಹಾಗೂ ನೂತನ ಶಾಲಾ ಅಭಿವೃದ್ಧಿ ಸಮಿತಿಯ ರಚನೆಯ ಅಧ್ಯಕ್ಷತೆ ವಹಿಸಿ ಹಾಗೂ ಸರಕಾರದಿಂದ ಉಚಿತವಾಗಿ ನೀಡಲ್ಪಟ್ಟ ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು.

ಪಂಚಾಯತ್ ಉಪಾಧ್ಯಕ್ಷೆ ಶೀಲಾ ವೇಗಸ್ ಹಾಗೂ ಸದಸ್ಯರಾದ ಜಯಂತಿ ಜನಾರ್ಧನ್, ಗೀತಾ ಜಯಶೀಲ ಗಾಂಭೀರ್, ಮೀನಾಕ್ಷಿ ಸುನಿಲ್, ಉಮಾವತಿ ಸಪಲ್ಯ, ಜಯಪ್ರಸಾದ್ ಇವರ ಉಪಸ್ಥಿತಿಯಲ್ಲಿ ನಡೆದ ನೂತನ ಶಾಲಾಭಿವೃದ್ಧಿ ಸಮಿತಿಯ ರಚನೆಯ ರೂಪರೇಷೆಗಳನ್ನು ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಅವರು ಮಾಹಿತಿ ನೀಡಿದಾಗ ಈಗ ಪ್ರಸ್ತುತ ಇರುವ ಶಾಲಾಭಿವೃದ್ಧಿ ಸಮಿತಿಯ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಮಜಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವಲ್ಲಿ ಬಹಳ ಶ್ರಮಪಟ್ಟಿದ್ದಾರೆ ಹಾಗೂ ಎಂ ಆರ್ ಪಿ ಎಲ್ ಇದರ ಸಿ ಆರ್ ಎಸ್ ಫಂಡ್ ನಿಂದ ಈಗಾಗಲೇ 10 ಶಾಲಾ ಕೊಠಡಿಗಳು ಪೂರ್ತಿ ಕೆಲಸವಾಗಿ ಕೇವಲ ಉದ್ಘಾಟನೆಗೆ ಬಾಕಿ ಇರುವಂತ ಸಂದರ್ಭದಲ್ಲಿ ಈಗಿರುವ ಶಾಲಾಭಿವೃದ್ಧಿ ಸಮಿತಿ ಮುಂದುವರಿಸಿ ಅದಕ್ಕೆ ಬಾಕಿ ಇರುವ ವಿವಿಧ ಮೀಸಲಾತಿ ಅನುಪಾತದ ಸದಸ್ಯರನ್ನು ಸೇರಿಸಿಕೊಂಡು ಮುಂದುವರಿಸುವಂತೆ ತಮ್ಮ ವೈಯಕ್ತಿಕ ಸಲಹೆಯನ್ನು ನೀಡಿದಾಗ ಪೋಷಕರ ಎಲ್ಲರೂ ಸಂಪೂರ್ಣ ಒಕ್ಕೊರಲಿನ ಅನುಮೋದನೆ ನೀಡಿದರು .

ಅದರಂತೆ ಮುಂದಿನ ಅವಧಿಗೆ ನೂತನ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಸಂಜೀವ ಮೂಲ್ಯ ಮಜಿ, ಉಪಾಧ್ಯಕ್ಷರಾಗಿ ವಿಜಯ ಶೇಖರ್ ಬೆತ್ತಸರವು ಅವಿರೋಧವಾಗಿ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ಗೋಪಾಲಕೃಷ್ಣ ಭಟ್ ದಿವಾನ, ಕೊರಗಪ್ಪ ನಾಯ್ಕ ಸಿಂಗೇರಿ, ವಾಮನ ಬಂಗೇರ ನೆಕ್ಕರಾಜೆ, ವಿಶ್ವನಾಥ್ ಎಮ್ಮೆ೯ಮಜಲು, ಸಾವಿತ್ರಿ ಬೋಳಂಗಡಿ, ಉಮಾವತಿ ಮಜಿ, ವೀಣಾ ಮೈರ, ವನಿತಾ ತಾಳಿತ್ತನೂಜಿ ,ಉಮ್ಮರ್ ಫಾರೂಕ್ ಕೊಡಪದವು ಮದಕ ,ಬಿಕೆ ಅಬ್ದುಲ್ ಮಜೀದ್ ವೀರಕಂಬ, ಸುರೇಶ್ ನಾಯ್ಕ ಬೆತ್ತಸರವು ಲಕ್ಷ್ಮಣಗೌಡ ನಂದನತಿಮಾರು, ಅಸ್ಲಿಮಾ ಕಂಪದಬೈಲು, ಮತಿ ರಂಜಿತಾ ಮಜಿ, ಹರಿಣಾಕ್ಷಿ ಕೇಪುಲಕೊಡಿ, ಸರಿತಾಪ್ರಾಂಕ್ ಮಜಿ, ಆಯ್ಕೆಯಾದರು.
ಸಮಿತಿಯ ಕಾರ್ಯದರ್ಶಿಯಾಗಿ ಮುಖ್ಯಶಿಕ್ಷಕ ನಾರಾಯಣ ಪೂಜಾರಿ ಪದನಿಮಿತ್ತ ಸದಸ್ಯರಾಗಿ ಸಹಶಿಕ್ಷಕಿ ಶಕುಂತಲಾ ಎಂ ಬಿ, ಕಿರಿಯ ಆರೋಗ್ಯ ಸಹಾಯಕಿ ಜ್ಯೋತಿ ಎನ್ ಕೆ ,ಪಂಚಾಯತ್ ಸದಸ್ಯೆ ಜಯಂತಿ ಜನಾರ್ಧನ್, ಅಂಗನವಾಡಿ ಶಿಕ್ಷಕಿ ಸುಮತಿ ,ಹಾಗೂ ಶಾಲಾ ವಿದ್ಯಾರ್ಥಿನಿ ಶ್ರೇಯ ಳನ್ನು ಆಯ್ಕೆ ಮಾಡಲಾಯಿತು.
ಶಾಲಾ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ರಾಘವೇಂದ್ರ ಶಿಕ್ಷಕಿಯರಾದ ಸಿಸಿಲಿಯ, ಶಕುಂತಲಾ, ಅನುಷಾ, ಮುಷೀ೯ದಾಬಾನು ಸಹಕರಿಸಿದರು.


























