ಪುತ್ತೂರು: ಮುಂಡೂರು ಗ್ರಾಮದ ಮರ್ತಡ್ಕ-ನಾಡಾಜೆ-ನಡುಬೈಲು-ಕೊಡಿಬೈಲು ನಿವಾಸಿಗಳ ಕಾಲೋನಿಗೆ ಬರುವ ಪಂಚಾಯತ್ ರಸ್ತೆಯನ್ನು ಮುಚ್ಚಿದ್ದು, ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಅಭಿವೃದ್ಧಿ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಪಂಚಾಯತ್ ಅನುದಾನದಿಂದ ನಿರ್ಮಾಣವಾದ ಕಾಲೋನಿಗೆ ಬರುವ ರಸ್ತೆಯನ್ನು ನಳಿನಿ ಲೋಕಪ್ಪ ಎಂಬವರು ನ.13 ರಂದು ಮುಚ್ಚಿದ್ದು, ಇದರಿಂದಾಗಿ ಹಲವು ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪಂಚಾಯತ್ ನಿಂದ ಸೂಕ್ತ ನಿರ್ದೇಶನ ನೀಡಿ ರಸ್ತೆಯನ್ನು ತೆರವುಗೊಳಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾಧವ ಮಡಿವಾಳ, ಶ್ರೀಧರ ಮಡಿವಾಳ, ಪುಷ್ಪರಾಜ್, ದೇರಣ್ಣ ಶೆಟ್ಟಿ, ಗಣೇಶ್ ನಾಯ್ಕ್, ವಿಜಯ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.