Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

    ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

    ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಕ್ರೀಡೆ

ಲೇ.. ಪಂಗಾ..!! ಕಬಡ್ಡಿ ಹಬ್ಬ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ..!!

December 22, 2021
in ಕ್ರೀಡೆ, ರಾಜ್ಯ
0
ಲೇ.. ಪಂಗಾ..!! ಕಬಡ್ಡಿ ಹಬ್ಬ ಪ್ರೊ ಕಬಡ್ಡಿ ಲೀಗ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ..!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬೆಂಗಳೂರು: ಕಬಡ್ಡಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ ದಿನ ಇನ್ನೇನು ಬಂದೇ ಬಿಟ್ಟಿದೆ. ಕೊರೋನಾ ಸೋಂಕಿನಿಂದಾಗಿ (Coronavirus) 2 ವರ್ಷ ನಡೆಯದ ಪ್ರೊ ಕಬಡ್ಡಿ ಲೀಗ್‌ಗೆ (Pro Kabaddi League) ಬುಧವಾರ ಚಾಲನೆ ಸಿಗಲಿದೆ. 8ನೇ ಆವೃತ್ತಿಯ ಎಲ್ಲಾ 137 ಪಂದ್ಯಗಳಿಗೆ ಬೆಂಗಳೂರಿನ (Bengaluru) ವೈಟ್‌ಫೀಲ್ಡ್‌ನಲ್ಲಿರುವ ಶೆರಟಾನ್‌ ಗ್ರ್ಯಾಂಡ್‌ ಹೋಟೆಲ್‌ ಮತ್ತು ಕನ್ವೆನ್ಷನ್‌ ಸೆಂಟರ್‌ ಆತಿಥ್ಯ ವಹಿಸಲಿದೆ. ಬರೋಬ್ಬರಿ 3 ತಿಂಗಳುಗಳ ಕಾಲ ಬಯೋಬಬಲ್‌ನೊಳಗೆ (Bio-Bubble) ಉಳಿಯಲಿರುವ 12 ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

Advertisement
Advertisement
Advertisement

ಟೂರ್ನಿಯ ಮೊದಲಾರ್ಧ(66 ಪಂದ್ಯಗಳು)ದ ವೇಳಾಪಟ್ಟಿಯನ್ನಷ್ಟೇ ಆಯೋಜಕರು ಪ್ರಕಟಿಸಿದ್ದು, ಉಳಿದ 66 ಲೀಗ್‌ ಪಂದ್ಯಗಳ ಹಾಗೂ 5 ಪ್ಲೇ-ಆಫ್ಸ್‌ಗೆ ಪಂದ್ಯಗಳ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದಾರೆ.

Advertisement

ನಿತ್ಯ ಕೋವಿಡ್‌ ಪರೀಕ್ಷೆ:

Advertisement
Advertisement

ಆಟಗಾರರು, ಸಹಾಯಕ ಸಿಬ್ಬಂದಿ, ರೆಫ್ರಿಗಳು ಸೇರಿ ಬಯೋಬಬಲ್‌ನೊಳಗೆ ಇರುವ ಪ್ರತಿಯೊಬ್ಬರೂ ಪ್ರತಿ ನಿತ್ಯ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಜೊತೆಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಿಯೇ ಇರಬೇಕು ಎಂದು ಸೂಚಿಸಲಾಗಿದೆ. ರೂಂನೊಳಗೆ, ಆಹಾರ ಸೇವನೆ, ಜಿಮ್‌/ಅಭ್ಯಾಸ ಹಾಗೂ ಪಂದ್ಯದ ಸಮಯದಲ್ಲಿ ಮಾತ್ರ ಮಾಸ್ಕ್‌ ತೆಗೆಯಲು ಅವಕಾಶ ನೀಡಲಾಗಿದೆ. ಆಟಗಾರರು, ಸಿಬ್ಬಂದಿ ಉಳಿದುಕೊಂಡಿರುವ ಮಹಡಿಗಳಲ್ಲಿ ಪ್ರತ್ಯೇಕ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, ಬಯೋಬಬಲ್‌ ನಿಮಯ ಉಲ್ಲಂಘನೆಯಾಗದಂತೆ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಟೂರ್ನಿಯ ಮಾದರಿ ಹೇಗೆ..?

ಡಬಲ್‌ ರೌಂಡ್‌ ರಾಬಿನ್‌ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪ್ರತಿ ತಂಡ ಉಳಿದ 11 ತಂಡದ ವಿರುದ್ಧ ತಲಾ 2 ಬಾರಿ ಸೆಣಸಲಿದೆ. ಅಂದರೆ ಲೀಗ್‌ ಹಂತದಲ್ಲಿ ಪ್ರತಿ ತಂಡ ತಲಾ 22 ಪಂದ್ಯಗಳನ್ನು ಆಡಲಿವೆ. ಅಗ್ರ 6 ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ-ಆಫ್ಸ್‌ಗೆ ಪ್ರವೇಶಿಸಲಿವೆ.ಪ್ಲೇ-ಆಫ್ಸ್‌ನಲ್ಲಿ ಒಟ್ಟು 5 ಪಂದ್ಯಗಳು ನಡೆಯಲಿದ್ದು, ಲೀಗ್‌ ಹಂತದ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳನ್ನು ಪಡೆಯುವ ತಂಡಗಳು ನೇರವಾಗಿ ಸೆಮಿಫೈನಲ್‌ಗೇರಲಿವೆ. ಇನ್ನುಳಿದ 4 ತಂಡಗಳು ಎಲಿಮಿನೇಟರ್‌ ಪಂದ್ಯಗಳನ್ನು ಆಡಲಿವೆ. ಎಲಿಮಿನೇಟರ್‌ ಪಂದ್ಯಗಳಲ್ಲಿ ಗೆಲ್ಲುವ ತಂಡಗಳು ಸೆಮಿಫೈನಲ್‌ನಲ್ಲಿ ಸೆಣಸಲಿದ್ದು, ಸೋಲುವ ತಂಡಗಳು ಟೂರ್ನಿಯಿಂದ ಹೊರಬೀಳಲಿವೆ. ಸೆಮೀಸ್‌ನಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.

ಲೀಗ್‌ನಲ್ಲಿ 10ಕ್ಕೂ ಹೆಚ್ಚು ಕನ್ನಡಿಗರು ಕಣಕ್ಕೆ:

8ನೇ ಆವೃತ್ತಿಯಲ್ಲಿ ಕರ್ನಾಟಕದ ಅನುಭವಿ ಹಾಗೂ ಯುವ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಹಾಲಿ ಚಾಂಪಿಯನ್‌ ಬೆಂಗಾಲ್‌ ವಾರಿಯ​ರ್‍ಸ್ನಲ್ಲಿ ಸುಕೇಶ್‌ ಹೆಗ್ಡೆ, ಸಚಿನ್‌ ವಿಠ್ಠಲ, ಮನೋಜ್‌ ಗೌಡ, ದರ್ಶನ್‌.ಜೆ ಇದ್ದಾರೆ. ಈ ತಂಡಕ್ಕೆ ಹಿರಿಯ ಕೋಚ್‌ ಬಿ.ಸಿ.ರಮೇಶ್‌ ಮಾರ್ಗದರ್ಶನ ನೀಡಲಿದ್ದಾರೆ. ಇನ್ನು ಜೈಪುರ ತಂಡದಲ್ಲಿ ಪವನ್‌ ಟಿ.ಆರ್‌ ಸ್ಥಾನ ಪಡೆದಿದ್ದಾರೆ. ಪಾಟ್ನಾ ಪೈರೇಟ್ಸ್‌ ತಂಡವನ್ನು ಪ್ರಶಾಂತ್‌ ರೈ ಮುನ್ನಡೆಸಲಿದ್ದು, ತೆಲುಗು ಟೈಟಾನ್ಸ್‌ ತಂಡದಲ್ಲಿ ರಾಕೇಶ್‌ ಗೌಡ ಸ್ಥಾನ ಗಳಿಸಿದ್ದಾರೆ. ಹಿರಿಯ ಡಿಫೆಂಡರ್‌ ಜೀವ ಕುಮಾರ್‌ ಡೆಲ್ಲಿ ಪರ ಆಡಲಿದ್ದಾರೆ.

ಟೂರ್ನಿಯ ಚುಟುಕು ಪರಿಚಯ:

137 ಪಂದ್ಯ: ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಫೈನಲ್‌ ಸೇರಿ ಒಟ್ಟು 137 ಪಂದ್ಯಗಳು ನಡೆಯಲಿವೆ.

22 ಪಂದ್ಯ: ಪ್ರತಿ ತಂಡ ರೌಂಡ್‌ ರಾಬಿನ್‌ ಮಾದರಿಯಲ್ಲಿ ಒಟ್ಟು 22 ಪಂದ್ಯಗಳನ್ನು ಆಡಲಿವೆ.

03 ಬಾರಿ: ಪಾಟ್ನಾ ಪೈರೇಟ್ಸ್‌ ಅತಿಹೆಚ್ಚು ಎಂದರೆ 3 ಬಾರಿ ಚಾಂಪಿಯನ್‌ ಆಗಿದೆ.

03 ಕೋಟಿ ರುಪಾಯಿ: ಚಾಂಪಿಯನ್‌ ಆಗುವ ತಂಡಕ್ಕೆ 3 ಕೋಟಿ ರುಪಾಯಿ ಬಹುಮಾನ ಮೊತ್ತ ಸಿಗಲಿದೆ. ರನ್ನರ್‌-ಅಪ್‌ಗೆ 1.8 ಕೋಟಿ ರುಪಾಯಿ ಸಿಗಲಿದೆ.

https://youtu.be/0z8ZHx14IQQ

Advertisement
Advertisement
Previous Post

ರಾಜ್ಯ ಕಂದಾಯ ಇಲಾಖೆಯಲ್ಲಿ 3000 ಹುದ್ದೆಗಳಿಗೆ ಅರ್ಜಿ ಆಹ್ವಾನ

Next Post

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ‘ಪ್ರಫುಲ್’ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕಬಡ್ಡಿ ತಂಡಕ್ಕೆ ಆಯ್ಕೆ

OtherNews

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!
Featured

ಪುತ್ತೂರು: ಬಾವಿಗೆ ಬಿದ್ದು ಮಹಿಳೆ ಮೃತ್ಯು..!!

August 15, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!
Featured

ಬಂಟ್ವಾಳ: ಹೇಮಂತ್ ನಾಪತ್ತೆ ಪ್ರಕರಣ: 3ನೇ ದಿನವೂ ಪತ್ತೆಯಾಗದ ಸುಳಿವು..!!

July 31, 2025
(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

(ಆ.10) : ವಿಟ್ಲದ ಅರಮನೆ ಗದ್ದೆಯಲ್ಲಿ ಕೆಸರ್ಡೊಂಜಿ ದಿನ: ಆಮಂತ್ರಣ ಪತ್ರಿಕೆ ಬಿಡುಗಡೆ..!!

July 29, 2025
ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!
ಕ್ರೀಡೆ

ವಿಟ್ಲ : ಜೋಗಿ ಯುವ ಬ್ರಿಗೇಡ್ ಇದರ 2 ನೇ ವರ್ಷದ ಕ್ರೀಡಾ ಸಂಗಮ : ಆಮಂತ್ರಣ ಪತ್ರಿಕೆ ಬಿಡುಗಡೆ..!!

July 23, 2025

Leave a Reply Cancel reply

Your email address will not be published. Required fields are marked *

Recent News

ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

ಚಾರ್ಮಾಡಿ ಘಾಟ್‌ನಲ್ಲಿ ಕಾರು ಪಲ್ಟಿ : ಮೂವರು ಪ್ರಾಣಾಪಾಯದಿಂದ ಪಾರು..!

October 27, 2025
ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

October 27, 2025
ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

October 27, 2025
ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

October 27, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page