ಕಡಬ : ಕೊಂಬಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಿರಿಬಾಗಿಲು ಗ್ರಾಮದ ಪಿಲಿಕಜೆ ಪ್ರದೇಶದಲ್ಲಿ ರಾತ್ರಿ ಪ್ರತಿನಿತ್ಯ ಕಾಡಾನೆಗಳು ದಾಳಿ ನಡೆಸಿ ಕೃಷಿ ತೋಟಗಳಿಗೆ ಹಾನಿ ಮಾಡುತ್ತಿದ್ದು, ಇದೀಗ ಹಗಲು ವೇಳೆಯೇ ಕಾಡಾನೆ ಕೃಷಿ ನಾಶ ಮಾಡಿದೆ.
ಪಿ.ಎಸ್.ಹೊನ್ನಪ್ಪ ಗೌಡರ ತೋಟಕ್ಕೆ ದಾಳಿ ನಡೆಸಿ ಬಾಳೆ, ಅಡಿಕೆ ಸಸಿ ಸಹಿತ ಇತರ ಕೃಷಿಯನ್ನು ಹಾಳು ಮಾಡಿದೆ ಎಂದು ವರದಿಯಾಗಿದೆ.