ದುಬೈ: ಬ್ಯಾಡ್ಮಿಂಟನ್ ಪ್ರೇಮಿಗಳಿಗಾಗಿ ಸ್ಫೂರ್ತಿದಾಯಕ ಕ್ಷಣಗಳು!
ಡಿಸೆಂಬರ್ 14 ರಂದು ಸ್ಪೋರ್ಟ್ಸ್ ಬೇ, ಅಬುಹೈಲ್, ದುಬೈನಲ್ಲಿ ಬಿಲ್ಲವಾಸ್ ಫ್ಯಾಮಿಲಿ ದುಬೈ ಬ್ಯಾಡ್ಮಿಂಟನ್ ಟೂರ್ನಮೆಂಟ್ ಸೀಸನ್ 3 ಯಶಸ್ವಿಯಾಗಿ ಆಯೋಜಿಸಲಾಯಿತು.
160ಕ್ಕೂ ಹೆಚ್ಚು ಪ್ರತಿಭಾವಂತ ಆಟಗಾರರು ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದರು.
ಉದ್ಘಾಟನಾ ಸಮಾರಂಭ:
ಅಧ್ಯಕ್ಷ ದೀಪಕ್ ಎಸ್ ಪಿ, ಮಾಜಿ ಅಧ್ಯಕ್ಷರು ಮೋಹನ್ ಅತ್ತಾವರ್, ಸತೀಶ್ ಪೂಜಾರಿ, ಉಪಾಧ್ಯಕ್ಷರು ಪ್ರೇಮ್ ನಾಥ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ ನೇತೃತ್ವದಲ್ಲಿ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಆಟಗಾರರಿಗೆ ಶುಭ ಹಾರೈಕೆ ಸಲ್ಲಿಸಲಾಯಿತು.
ವಿಭಾಗಗಳ ವಿಜೇತರು:
• ಸೀನಿಯರ್ ಬಾಯ್ಸ್: ಪ್ರಥಮ ಅಹನ್ ದಿನೇಶ್ ಕರುವೊಲು, ದ್ವಿತೀಯ ರಿಷಿತ್ ಪೂಜಾರಿ, ತೃತೀಯ ಶ್ರೇಯ್ ಪೂಜಾರಿ
• ಸೀನಿಯರ್ ಗರ್ಲ್ಸ್: ಪ್ರಥಮ ರಿದ್ಧಿ ರೋಹನ್, ದ್ವಿತೀಯ ಶ್ರಿಯಾ ಹರಿರಾಜ್, ತೃತೀಯ ದ್ವಿತಿ ದೀಪಕ್
• ಜೂನಿಯರ್ ಬಾಯ್ಸ್: ಪ್ರಥಮ ಹೃಧಾನ್ ಸಾಲಿಯಾನ್, ದ್ವಿತೀಯ ಪ್ರತ್ಯುಶ್ ಉಮೇಶ್ ಪೂಜಾರಿ, ತೃತೀಯ ವಿವಾನ್ ಸುವರ್ಣ ಕುಳೂರು
• ಜೂನಿಯರ್ ಗರ್ಲ್ಸ್: ಪ್ರಥಮ ದಿಯಾ ವಲ್ಲಭನ್, ದ್ವಿತೀಯ ಪಾಹಲ್ ಪ್ರಸಾದ್ ರಾಜ್, ತೃತೀಯ ಆಥಿರ ಸಂತೋಷ್ ಪೂಜಾರಿ
ಪುರುಷರ ವಿಭಾಗಗಳು:
• ಸಿಂಗಲ್ಸ್: ಪ್ರಥಮ ಮನ್ವಿತ್ ಬಿ ಕೊಟ್ಯಾನ್, ದ್ವಿತೀಯ ರಾಹುಲ್ ರಘುವೀರ್, ತೃತೀಯ ಪ್ರಣೀತ್ ಪೆರ್ಪುಂಜ
• ಡಬಲ್ಸ್: ಪ್ರಥಮ ಸುಜನ್ ವಿ ಉಳ್ಳಾಲ್ ಮತ್ತು ಮನ್ವಿತ್ ಬಿ ಕೊಟ್ಯಾನ್, ದ್ವಿತೀಯ ರಾಕೇಶ್ ಸುವರ್ಣ ಮತ್ತು ಅರುಣ್ ಬಂಗೇರ, ತೃತೀಯ ಪ್ರಖ್ಯಾತ್ ಆರ್ ಪೂಜಾರಿ ಮತ್ತು ಆದರ್ಶ್ ಕಪ್ಪೆಟ್ಟು
• ಕಪಲ್ಸ್: ಪ್ರಥಮ ಆದರ್ಶ್ ಕಪ್ಪೆಟ್ಟು ಮತ್ತು ಶ್ರೇಯ್ ಚಂದನ್, ದ್ವಿತೀಯ ಸಂದೇಶ್ ಪೂಜಾರಿ ಮತ್ತು ಕವಿತಾ ಸಂದೇಶ್, ತೃತೀಯ ವಿನೂಥ್ ಆರ್ ಕೋಟ್ಯಾನ್ ಮತ್ತು ಮಿತ್ರಾಕ್ಷಿ ವಿ ಕೋಟ್ಯಾನ್
ಮಹಿಳೆಯರ ವಿಭಾಗಗಳು:
• ಸಿಂಗಲ್ಸ್: ಪ್ರಥಮ ಮಧುರ ಪೂಜಾರಿ, ದ್ವಿತೀಯ ಸ್ನೇಹ ಪೂಜಾರಿ, ತೃತೀಯ ದೀಪಿಕಾ ಪೂಜಾರಿ
• ಡಬಲ್ಸ್: ಪ್ರಥಮ ಶ್ರುತಿ ಸುವರ್ಣ ಮತ್ತು ಮಿತ್ರಾಕ್ಷಿ ವಿ ಕೋಟ್ಯಾನ್, ದ್ವಿತೀಯ ಅಕ್ಷತಾ ಯಸ್ ಅಂಚನ್ ಮತ್ತು ಕವಿತಾ ಸಂದೇಶ್, ತೃತೀಯ ಸರಿತಾ ವಿನ್ಯಾಸ್ ಮತ್ತು ಪ್ರತಿಕ್ಷಾ ಡಿ ಬಂಗೇರ
• ಮಿಶ್ರ ಡಬಲ್ಸ್: ಪ್ರಥಮ ಸುಶಾಂತ್ ಪೂಜಾರಿ ಮತ್ತು ಕವಿತಾ, ದ್ವಿತೀಯ ಪ್ರಖ್ಯಾತ್ ಆರ್ ಪೂಜಾರಿ ಮತ್ತು ಶ್ರುತಿ ಸುವರ್ಣ, ತೃತೀಯ ಆದರ್ಶ್ ಸುವರ್ಣ ಮತ್ತು ಪ್ರತಿಕ್ಷಾ ಡಿ ಬಂಗೇರ
ಟೂರ್ನಮೆಂಟ್ ನಿರ್ವಹಣೆ:
• ಮುಖ್ಯ ಉಸ್ತುವಾರಿಗಳು: ಕ್ರೀಡಾ ಕಾರ್ಯದರ್ಶಿ ಅಶೋಕ್ ಪೂಜಾರಿ ಮುಳಿಯ, ಜ್ಯೋತಿ ದೀಪಕ್, ಶ್ಯಾಮಲಾ ಕೃಷ್ಣ ಪೂಜಾರಿ, ರೋಶನ್ ಆರ್ ಕೋಟ್ಯಾನ್, ರವಿ ಕೋಟ್ಯಾನ್
• ಅಂಕಣ ಉಸ್ತುವಾರಿಗಳು: ಸುವರ್ಣ ಸತೀಶ್ ಪೂಜಾರಿ, ಅಶೋಕ್ ತೋನ್ಸೆ, ಸ್ಮಿತಾ ಅಶೋಕ್, ಜಗನ್ನಾಥ್ ಬೆಳ್ಳಾರೆ, ಶುಭ ಮನೋಜ್ ಬೋಳಾರ್, ಶ್ಯಾಮಲಾ ಕೃಷ್ಣ ಪೂಜಾರಿ, ರಘು ಜತನ್, ರೂಪೇಶ್ ಪೂಜಾರಿ
• ಡಿಜಿಟಲ್ ಸಮಿತಿಯ ಕಾರ್ಯದರ್ಶಿಗಳು: ಚಂದ್ರು ಪೂಜಾರಿ, ಅಶ್ವಿನ್ ಕುಮಾರ್, ಶಿವದೀಪ್
ಪ್ರಾಯೋಜಕರು ಮತ್ತು ಗೌರವ:
ಮುಖ್ಯ ಪ್ರಾಯೋಜಕರು ಬಾರ್ಕೋಡ್ ಆಟೋ ಕೇರ್, ಸಹ-ಪ್ರಾಯೋಜಕರು ಮತ್ತು ತೀರ್ಪುಗಾರರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಮಾರೋಪ ಸಮಾರಂಭ:
ಅಧ್ಯಕ್ಷ ದೀಪಕ್ ಎಸ್ ಪಿ, ಉಪಾಧ್ಯಕ್ಷರು ಪ್ರೇಮ್ ನಾಥ್ ಕೋಟ್ಯಾನ್, ಜಗನ್ನಾಥ್ ಬೆಳ್ಳಾರೆ, ಮಾಜಿ ಅಧ್ಯಕ್ಷರು ಪ್ರಭಾಕರ್ ಸುವರ್ಣ, ಸತೀಶ್ ಪೂಜಾರಿ, ಖಚಾಂಚಿ ಪ್ರಭಾಕರ್ ಪೂಜಾರಿ, ಕಾರ್ಯದರ್ಶಿಗಳು ರವಿ ಕೋಟ್ಯಾನ್, ಯತಿರಾಜ್ ಕೋಟ್ಯಾನ್, ಹಿರಿಯ ಸದಸ್ಯರು ಕೃಷ್ಣ ಪೂಜಾರಿ, ಪ್ರಕಾಶ್ ಪೂಜಾರಿ, ದೇವದಾಸ್ ಸುವರ್ಣ, ರಘು ಜತನ್, ಮನೋಜ್ ಬೋಳಾರ್, ವೇಣುಗೋಪಾಲ್ ಕೋಟ್ಯಾನ್, ಚರಣ್ ಪೂಜಾರಿ, ಮತ್ತು ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾಗವಹಿಸಿದ ಎಲ್ಲಾ ಆಟಗಾರರು ತಮ್ಮ ಪ್ರತಿಭೆ, ಶ್ರಮದಿಂದ ಟೂರ್ನಮೆಂಟ್ ಸೀಸನ್ 3 ಅನ್ನು ಅದ್ಭುತ, ಸ್ಫೂರ್ತಿದಾಯಕ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರವನ್ನಾಗಿ ಮಾಡಿದರು. ಹಾಗು ಭಾಗವಹಿಸಿದ ಎಲ್ಲರಿಗೂ ಸ್ಮರಣೀಯ ಅನುಭವ ನೀಡಿತು


























