ಪುತ್ತೂರು: ಡಿ.11ರಿಂದ 13ರ ವರೆಗೆ ನಡೆಯಲಿರುವ ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಿಯ ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಡಿ.5ರಂದು ಬೆಳಿಗ್ಗೆ 8.15ಕ್ಕೆ ಜರಗಿತು.
![](https://zoomintv.online/wp-content/uploads/2020/12/IMG-20201205-WA0016-461x1024.jpg)
ದೇವಸ್ಥಾನ ದ ಹತ್ತಿರದ ಗೋಪಾಲಕೃಷ್ಣ ಅವರ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಗೊನೆ ಮುಹೂರ್ತ ಮಾಡಲಾಯಿತು. ದೇವಳದ ತಂತ್ರಿ ಕುಕ್ಕಾಡಿ ಪ್ರೀತಮ್ ಪುತ್ತೂರಾಯರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ದೇವಸ್ಥಾನದ ಅರ್ಚಕರಾದ ವತ್ಸ ಭಟ್ ಸಹಕರಿಸಿದರು.
![](https://zoomintv.online/wp-content/uploads/2020/12/IMG-20201205-WA0015-461x1024.jpg)
ದೇವಸ್ಥಾನದ ಅಧ್ಯಕ್ಷ ಗಂಗಾಧರ ಅಮೀನ್ ಹೊಸಮನೆ, ಕಾರ್ಯದರ್ಶಿ ಜಯಂತ ಶೆಟ್ಟಿ ಕಂಬಳತಡ್ಡ ಹಾಗೂ ಗಣ್ಯರು ಉಪಸ್ಥಿತರಿದ್ದರು.
![](https://zoomintv.online/wp-content/uploads/2020/12/IMG-20201205-WA0014-1024x461.jpg)