ಪುತ್ತೂರು: ಕಬಕದಲ್ಲಿ ೭೫ನೇ ಸ್ವಾತಂತ್ರ್ಯ ಉತ್ಸವದ ಹಿನ್ನೆಲೆ ಸರಕಾರಿ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಗ್ರಾಮ ಸ್ವರಾಜ್ಯ ರಥಯಾತ್ರೆ ಹೊರಟ್ಟಿದ್ದ ಸಂದರ್ಭದಲ್ಲಿ ವೀರ ಸಾವರ್ಕರ್ ಭಾವ ಚಿತ್ರ ತೆರವು ಮಾಡಲು ಆಗ್ರಹಿಸಿ ಎಸ್ಡಿಪಿಐ ವತಿಯಿಂದ ರಥಕ್ಕೆ ಅಡ್ಡಿ ಪಡಿಸಿ ವಿಚಾರಕ್ಕೆ ಸಂಬಂಧಿಸಿ ಆ.೧೭ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕಬಕದ ತನಕ ಜಾಗೃತಿಯಾತ್ರೆ ಹಮ್ಮಿಕೊಂಡಿದ್ದು, ವೀರ ಸಾವರ್ಕರ್ ಭಾವ ಚಿತ್ರ ಹೊತ್ತ ಜಾಗೃತಿ ರಥಯಾತ್ರೆಯು ಈಗಾಗಲೇ ಕಬಕ ತಲುಪಿದ್ದು, ಕಬಕದಲ್ಲಿ ಸಾವರ್ಕರ್ ಭಾವ ಚಿತ್ರ ಹೊತ್ತ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಭಾರತದ ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ, ಉತ್ಸಾಹಭರಿತ ದಾರ್ಶನಿಕ ಮತ್ತು ಸಕ್ರಿಯ ಸುಧಾರಣಾವಾದಿ ಎಂದು ಹೆಸರು ಗಳಿಸಿರುವ ವಿನಾಯಕ್ ದಾಮೋದರ್ ಸಾವರ್ಕರ್ ಅವರಿಗೆ ಕಬಕದಲ್ಲಿ ಅಪಮಾನ ಮಾಡಲಾಗಿದೆ. ಅಪಮಾನ ಮಾಡಿರುವಂತಹ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ರಥಯಾತ್ರೆಯನ್ನು ಕೈಗೊಂಡಿದ್ದು, ಹಿಂದೂ ಕಾರ್ಯಕರ್ತರು ಭಗವಾಧ್ವಜವನ್ನು ಹಿಡಿದುಕೊಂಡು ವಾಹನಗಳ ಮೂಲಕ ಕಬಕ ಕಡೆಗೆ ತೆರಳುತ್ತಿರುವ ದೃಶ್ಯವೂ ಕಂಡು ಬಂದಿತು. ಹಲವಾರು ಹಿಂದೂ ಕಾರ್ಯಕರ್ತರು ಈ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ.