ಪುತ್ತೂರು: ಶಾಲೆ ಕಾಲೇಜು ಆರಂಭ ಆಗದೆ ಮಕ್ಕಳು ಮನೆಯಲ್ಲೇ ಇರುವ ವಾತಾವರಣ ಈಗಾಲೂ ಇದೆ. ೨೦೨೧-೨೨ನೇ ವರ್ಷ ಅಧ್ಯಾಪಕರಿಗೆ ಭಿನ್ನವಾದ ವಾಲಿನ ದಿನವಾಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
![](https://zoomintv.online/wp-content/uploads/2021/01/WhatsApp-Image-2021-01-09-at-11.56.56-AM-1024x768.jpeg)
ಇಲ್ಲಿನ ತಾ.ಪಂ ಸಭಾಂಗಣದಲ್ಲಿ ಜ.೯ರಂದು ಪಡಿ ಸಂಸ್ಥೆ ವತಿಯಿಂದ ನಡೆದ ತಾಲೂಕು ಮಟ್ಟದ ಮಕ್ಕಳ ರಕ್ಷಣೆ, ಶಿಕ್ಷಣ, ಕೋವಿಡ್ -೧೯ ಕುರಿತು ಜಾಗೃತಿ ಅಭಿಯಾನದಲ್ಲಿ ಅವರು ಮಕ್ಕಳ ರಕ್ಷಣೆ ಕುರಿತ ಜಾಗೃತಿ ಮೂಡಿಸುವ ಕ್ಯಾಲೇಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಕೋವಿಡ್ನಿಂದಾಗಿ ಒಂದು ವರ್ಷದ ಶೈಕ್ಷಣಿಕ ವ್ಯವಸ್ಥೆಯಿಂದ ಮಕ್ಕಳು ಮಾನಸಿಕವಾಗಿ ಶಾಲೆಯಿಂದ ದೂರ ಉಳಿಯುವಂತಾಗಿದೆ. ಈ ಸಂದರ್ಭದಲ್ಲಿ ಒಂದಷ್ಟು ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದರೆಂಬ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಮಕ್ಕಳ ಕೈಯಲ್ಲಿ ಹಣ ಚಾಲಾವಣೆ ಆದರೆ ಅವರು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಭಿನ್ನವಾದ ಸವಾಲು ಎದುರಾಗಲಿದೆ ಎಂದ ಅವರು ಮಕ್ಕಳಿಗೆ ಕಾನೂನಿನಂದಲೇ ನೂರಕ್ಕೆ ನೂರು ರಕ್ಷಣೆ ಸಾಧ್ಯವಿಲ್ಲ. ಆದರೆ ಸಮಾಜ ಮುಂದೆ ಬಂದರೆ ರಕ್ಷಣೆ ಸಾಧ್ಯ ಎಂದು ಅವರು ಹೇಳಿದರು.
![](https://zoomintv.online/wp-content/uploads/2021/01/WhatsApp-Image-2021-01-09-at-11.56.55-AM-1024x768.jpeg)
ಪೋಷಕರಿಗೆ ಧೈರ್ಯ ಕೊಡುವ ಕೆಲಸ ಆಗಬೇಕು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ಕೋವಿಡ್ನಿಂದಾಗಿ ಮಕ್ಕಳು ಶಾಲೆಗೆ ಬರುವುದು ಕಡಿಮೆ ಆಗಿದೆ. ಪ್ರಸ್ತುತ ದಿನಗಳಲ್ಲಿ ಶಾಲೆಗಳು ಆರಂಭಗೊಳ್ಳುತ್ತಿದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ದರಿಲ್ಲ. ಇಂತಹ ಸಂದರ್ಭದಲ್ಲಿ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ನಿರ್ದೇಶಕ ರೆನ್ನಿ ಡಿಸೋಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ರಕ್ಷಣೆ ಮತ್ತು ಪೋಷಣೆ ಕುರಿತು ಪರಿಚಯ ಮಾಡುವುದು ಇವತ್ತಿನ ನಮ್ಮ ಮುಖ್ಯ ಉದ್ದೇಶ. ಬಿಡುಗಡೆಗೊಂಡ ಕ್ಯಾಲೆಂಡರ್ ಶಿಕ್ಷಕರಿಗೆ, ಎಸ್ಡಿಎಂಸಿ ಗಳಿಗೆ ಮಕ್ಕಳ ರಕ್ಷಣೆ ಕುರಿತು ಮಾಹಿತಿ ನೀಡುವ ಮೂಲಕ ವರ್ಷವಿಡಿ ಗೈಡ್ ನಂತೆ ಇರುತ್ತದೆ. ಶಿಕ್ಷಣ ಸಂಪ್ಮೂನಲ ಕೇಂದ್ರದ ಅಧ್ಯಕ್ಷೆ ನಯನಾ ರೈ, ಸರಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಮಹಮ್ಮದ್ ರಫೀಕ್ ದರ್ಬೆ, ಪಡಿ ಸಂಸ್ಥೆ ತರಬೇತಿ ಸಂಯೋಜಕಿ ಕಸ್ತೂರಿ ಬೊಳುವಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವತ್ಸಲಾ ನಾಯಕ್ ಆಶಯಗೀತೆ ಹಾಡಿದರು. ರಾಯಲ್ ಕ್ರಿಯೇಷನ್ಸ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.