ಪುತ್ತೂರು: ನಿವೃತ್ತ ಅಧ್ಯಾಪಕ , ಸಂಗೀತ ವಿದ್ವಾನ್ ಮುಕ್ರಂಪಾಡಿ ನಿವಾಸಿ ರಾಮಕೃಷ್ಣ ಭಟ್ ಯು. ಎಸ್ ( 72) ಸೆ.30 ರಂದು ಬೆಳಿಗ್ಗೆ ನಿಧನರಾದರು.
ಇಂದು ಬೆಳಿಗ್ಗೆ ಜಾಗಿಂಗ್ ಹೋಗಿದ್ದ ವೇಳೆ ಹೃದಯಾಘಾತಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದಾರೆ. ಬಳಿಕ ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯಪದವು ಸರ್ವೋದಯ ಪ್ರೌಢಶಾಲೆಯ ಇಂಗ್ಲೀಷ್ ಅಧ್ಯಾಪಕರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿದರು. ನಿವೃತ್ತಿಯ ಬಳಿಕ ಈಶ್ವರಮಂಗಲ ಗಜಾನನ ಪ್ರೌಢಶಾಲೆಯಲ್ಲಿ ಕೆಲ ವರ್ಷ ಸೇವೆಸಲ್ಲಿಸಿದ್ದರು. ಸಂಗೀತದ ಬಗ್ಗೆ ಅಪಾರ ಜ್ಞಾನವಿದ್ದ ಇವರು ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ ದರ್ಬೆ ಸಂತ ಫಿಲೋಮಿನಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕಿ ಶಾಂತ ಕುಮಾರಿ, ಪುತ್ರ ಚರಣ, ಮಗಳು ಪಲ್ಲವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.