ಲೋಕೋಪಯೋಗಿ ಇಲಾಖೆಯ 2020-21 ನೇ ಸಾಲಿನ ಲೆಕ್ಕಶೀರ್ಷಿಕೆ ಡಿಸ್ಟ್ರಿಕ್ಟ್ & ಅದರ್ ರೋಡ್ಸ್ ವಿಶೇಷ ಘಟಕ ಎಸ್.ಸಿ.ಪಿ. ಯೋಜನೆಯಡಿ ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಪರಿಶಿಷ್ಟ ಪಂಗಡ ರೂ.10ಲಕ್ಷ ಅನುದಾನದ ರಸ್ತೆ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮವನ್ನು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ನೆರವೇರಿಸಿದರು.
![](https://zoomintv.online/wp-content/uploads/2021/01/IMG-20210125-WA0023-1024x768.jpg)
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನಾ ಜಯಾನಂದ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್, ಪಂಚಾಯತ್ ಸದಸ್ಯರುಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಊರು ನಾಗರೀಕರು ಉಪಸ್ಥಿತರಿದ್ದರು.