ವಿಟ್ಲ: ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿವಾದ ಹೇಳಿದಕ್ಕೆ, ಅಕ್ಕನ ಮಗ ಹಲ್ಲೆಗೈದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆಯೋರ್ವರು ಠಾಣೆಗೆ ದೂರು ನೀಡಿದ ಘಟನೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ತಚ್ಚಮೆಯಲ್ಲಿ ನಡೆದಿದೆ.
ಹಲ್ಲೆಗೈದವನನ್ನುಪೆರುವಾಯಿ ಗ್ರಾಮದ ತಚ್ಚಮೆ ನಿವಾಸಿ ಯಜ್ಞೇಶ ಎನ್ನಲಾಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಪೆರುವಾಯಿ ಗ್ರಾಮದ ತಚ್ಚಮೆ ನಿವಾಸಿ ಮುರಳೀಧರ ಮಣಿಯಾಣಿ ಯವರ ಪತ್ನಿ ಲತಾ ಎನ್ನಲಾಗಿದೆ.
ಲತಾ ರವರ ಮನೆಯ ಪಕ್ಕದಲ್ಲೇ ಆಕೆಯ ಅಕ್ಕ ಜಾನಕಿ ಮತ್ತು ಆಕೆಯ ಮಗ ಯಜ್ಞೇಶ ವಾಸಿಸುತ್ತಿದ್ದು, ಜಾನಕೀ ರವರಿಗೆ ಅನಾರೋಗ್ಯದ ಸಮಸ್ಯೆಯಿಂದಾಗಿ ಪ್ರಸ್ತುತ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಲತಾ ರವರೇ ಜಾನಕಿ ರವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದು, ಅ.31 ರಂದು ಲತಾ ಅಕ್ಕ ಜಾನಕಿಗೆ ತಿಂಡಿ ಕೊಡಲು ಹೋದಾಗ ಮನೆಯಂಗಳದಲ್ಲಿದ್ದ ಯಜ್ಞೇಶನಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೋ ಎಂದಾಗ ಆತ ಅಲ್ಲೇ ಬಿದ್ದಿದ್ದ ಮರದ ತುಂಡು ತೆಗೆದುಕೊಂಡು ತಲೆಗೆ ಹೊಡೆದಿದ್ದು, ಅಷ್ಟೇ ಅಲ್ಲದೇ ಇನ್ನೂ ಮುಂದೆ ನನಗೆ ಬುದ್ಧಿ ಹೇಳಲು ಬಂದರೆ ನಿಮ್ಮನ್ನು ಕೊಂದು ಹಾಕುವುದಾಗಿದೆ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 141/2021 ಕಲಂ:324,506 ರಂತೆ ಪ್ರಕರಣ ದಾಖಲಾಗಿದೆ.