ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಮೌಲಾನ ಶಾಫಿ ಸಅದಿ ಆಯ್ಕೆ ವಿಚಾರ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ…
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಶಾಫಿ ಸಾಅದಿ ಆಯ್ಕೆಯಾಗಿದ್ದಾರೆ. ಶಾಫಿ ಸಾಅದಿ ಆಯ್ಕೆ ಬಗ್ಗೆ ಅಸಮಾಧಾನಗೊಂಡಿರುವ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದು, ಕಳೆದ ಚುನಾವಣೆಯಲ್ಲಿ ಸಂಘಪರಿವಾರದ ಚರ್ಮ ಸುಳಿಯಲು ಹೊರಟ ಎಸ್ ಎಸ್ ಎಫ್ ಮತಾಂಧ ಶಾಫಿ ಸಾದಿ ಇವತ್ತು ಬಿಜೆಪಿ ಸರಕಾರದಲ್ಲಿ ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಎಂಬುದಾಗೆಲ್ಲಾ ಬರೆದು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ..
ಕೆಲ ನೆಟ್ಟಿಗರು ಶಾಫಿ ಸಅದಿ ಸಂಘ ಪರಿವಾರದ ಸಿಪ್ಪೆ ಸುಲಿಯುತ್ತೇನೆ ಎಂದಿದ್ದಾರೆ ಎನ್ನಲಾದ ವಿಡಿಯೋ ವೊಂದನ್ನು ಹಂಚಿಕೊಂಡಿದ್ದಾರೆ. ಎಸ್ ಎಸ್ ಎಫ್ ಕಾರ್ಯಕ್ರಮವೊಂದರಲ್ಲಿ ಎನ್ನಲಾದ ಆ ವಿಡೀಯೋದಲ್ಲಿ ಶಾಫಿ ಸಅಧಿ ಅವರು ಸಂಘ ಪರಿವಾರದವರ ಸಿಪ್ಪೆ ಸುಳಿಯುತ್ತೇನೆ ಎಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಜನಗಣತಿಯಾದರೇ ರಾಜ್ಯದ ಬಹುದೊಡ್ಡ ಜನಸಂಖ್ಯೆ ಮುಸ್ಲಿಂಮರದಾಗುತ್ತದೆ ಅವರಿಗೆ 35 ಶಾಸಕರು 5 ಎಂಪಿ ಬೇಕಾಗುತ್ತದೆ ಎಂದು ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದ್ದರು ಎನ್ನಲಾದ ವಿಡಿಯೋವು ಜಾಲಾತಾಣದಲ್ಲಿ ವೈರಲ್ ಆಗಿದ್ದು ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ…
ವಕ್ಫ್ ಮಂಡಳಿ ಬಗ್ಗೆ:
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ವಕ್ಪ್ ಕಾಯ್ದೆ 1995ರ ಅಡಿಯಲ್ಲಿ ರಚಿಸಲಾದ ಶಾಸನ ಬದ್ಧ ಸಂಸ್ಥೆ. ವಕ್ಫ್ ಮಂಡಳಿಯು ವಿವಿಧ ವಿಭಾಗಗಳಿಂದ ನಾಮ ನಿರ್ದೇಶಿತ ಮತ್ತು ಚುನಾಯಿತ ಸದಸ್ಯರನ್ನು ಹೊಂದಿದೆ. ಮಂಡಳಿಯ ಅಧ್ಯಕ್ಷರನ್ನು ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ.
ಮಂಡಳಿಯ ಸಿಬ್ಬಂದಿಯ ನೇತೃತ್ವವನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಹಿಸಿಕೊಳ್ಳುತ್ತಾರೆ. ಈ ಹುದ್ದೆಗೆ ಹಿರಿಯ ಕೆಎಎಸ್ ಅಧಿಕಾರಿ ನೇಮಕವಾಗಿರುತ್ತಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಇದೆ.
ವಕ್ಪ್ ಮಂಡಳಿಯು ಎಲ್ಲಾ ವಕ್ಫ್ ಸಂಸ್ಥೆಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವನ್ನು ಹೊಂದಿರುತ್ತದೆ. ಕಾಲಕಾಲಕ್ಕೆ ವಕ್ಫ್ ಸಂಸ್ಥೆಗಳಿಗೆ ಚುನಾಯಿತ ಅಥವಾ ನಾಮ ನಿರ್ದೇಶನದ ನಂತರ ತಮ್ಮ ನಿರ್ವಹಣಾ ಯೋಜನೆಯ ಪ್ರಕಾರ ಜಮಾತ್ನಿಂದ ಮುತವಾಲೀಗಳು ಮತ್ತು ವ್ಯವಸ್ಥಾಪನಾ ಸಮಿತಿಗಳನ್ನು ನೇಮಿಸುತ್ತದೆ. ಎಲ್ಲಾ ವಕ್ಫ್ ಸಂಸ್ಥೆಗಳು ತಮ್ಮ ಬಜೆಟ್ ಅಂದಾಜು ಮತ್ತು ಹಣಕಾಸು ಖಾತೆಗಳನ್ನು ಮಂಡಳಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಮಂಡಳಿಯು ಪ್ರಮುಖ ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ಮಾಡುತ್ತದೆ.