ಪುತ್ತೂರು: ಪ್ರತಿಷ್ಠಿತ ಯಳ್ತಿಮಾರ್ ಇಂಡಸ್ಟ್ರೀಸ್ನ ಮಾಲಕ ಹಿರಿಯ ಉದ್ಯಮಿ ರಘುರಾಮ ಶೆಣೈ(60ವ)ರವರು ಫೆ. 22ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
![](https://zoomintv.online/wp-content/uploads/2021/02/WhatsApp-Image-2021-02-22-at-10.37.35-AM.jpeg)
ಕಲ್ಲಾರೆ ನಿವಾಸಿ ರಘುರಾಮ ಶೆಣೈ ಅವರು ಪುತ್ತೂರಿನಲ್ಲಿ ಹಲವಾರು ವರ್ಷಗಳಿಂದ ಪ್ರಸಿದ್ಧ ಉದ್ಯಮಿಯಾಗಿದ್ದು, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಫೆ. 22ರಂದು ಬೆಳಿಗ್ಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಮೃತರು ಪತ್ನಿ ಜಯಲಕ್ಷ್ಮೀ ಶೆಣೈ, ಪುತ್ರ ಇಂಜಿನಿಯರ್ ಸೂರಜ್ ಶೆಣೈ ಅವರನ್ನು ಅಗಲಿದ್ದಾರೆ.