Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

    ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!

    ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಬೆಳ್ತಂಗಡಿ: ವಿಚಾರಣೆಗೆ ಗೈರು: ಹಿಂದೂ ಸಂಘಟನೆಯ ಪುನೀತ್ ಕೆರೆಹಳ್ಳಿ ಬಂಧನ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

    ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

    ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!

    ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಕೇಸರಿ ಅಲೆಯಲ್ಲಿ ಮಿಂದೆದ್ದ ಪುತ್ತೂರು ಬೃಹತ್ “ಹಿಂದೂ ಐಕ್ಯತಾ ಸಮಾವೇಶ” : ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿ

March 22, 2021
in Featured, ಧಾರ್ಮಿಕ, ಪುತ್ತೂರು
0
ಕೇಸರಿ ಅಲೆಯಲ್ಲಿ ಮಿಂದೆದ್ದ ಪುತ್ತೂರು ಬೃಹತ್ “ಹಿಂದೂ ಐಕ್ಯತಾ ಸಮಾವೇಶ” : ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗಿ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಸಮಾಜವನ್ನು ಕಾಯುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಈ ನಿಟ್ಟಿನಲ್ಲಿ ಹಿಂದೂ ಅನ್ನುವುದು ಕೇವಲ ಘೋಷಣೆ ಅಲ್ಲ.ಹಿಂದೂ ಅನ್ನುವುದು ಆಚರಣೆ ಆಗಬೇಕು. ಅದಕ್ಕೆಹಿಂದೂ ಸಮಾಜ ಬದ್ಧವಾಗಬೇಕು ಎಂದು ಹಿಂದು ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಹೇಳಿದರು. ಹಿಂದು ಜಾಗರಣ ವೇದಿಕೆಯ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಮಾ.21ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಡೆದ ಬೃಹತ್ ಹಿಂದೂ ಐಕ್ಯತಾ ಸಮಾವೇಶದ ಧರ್ಮಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

Advertisement
Advertisement

ಕಲಿಯುಗದಲ್ಲಿ ಭಗವಂತನ ಅವತಾರ ಇಲ್ಲ ಎಂದು ಸಾಕ್ಷಾತ್ ಭಗವಂತನೇ ಸಾರಿ ಹೇಳಿದಾಗ ಸಂಘಟಿತ ಶಕ್ತಿಯೇ ಧರ್ಮವನ್ನು ರಕ್ಷಿಸಬೇಕು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಬಲ ಜಾತಿಗಳನ್ನೇ ಶಕ್ತಿಗಳನ್ನಾಗಿ ಎತ್ತಿ ಕಟ್ಟುವ ಕುತಂತ್ರ ಇವತ್ತು ತಿಳಿದಿದೆ. ಜಾತಿ ಅಭಿಮಾನ ತಪ್ಪಲ್ಲ. ಆದರೆ ದುರಭಿಮಾನ ತಪ್ಪು, ನಮ್ಮ ನಮ್ಮಲ್ಲಿ ಸಾಮರಸ್ಯ, ಸಮನ್ವಯ, ಇದನ್ನು ಸಾಧಿಸುವುದು ನಮ್ಮ ನಿತ್ಯದ ವ್ಯವಹಾರದ ಭಾಗವಾಗಬೇಕು.ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಘೋಷಣೆ ಆಗಬಾರದು. ಅದು ಆಚರಣೆ ಆಗಬೇಕು. ದೋಷಗಳನ್ನು ಕಿತ್ತು ಎಸೆಯಬೇಕು ಎಂದ ಅವರು ಡಿಜೆ ಹಳ್ಳಿ, ಕೆಜೆ ಹಳ್ಳಿ, ಮಂಗಳೂರು ಸಿಎಎ ಪ್ರತಿಭಟನೆ, ಪಾದರಾಯನಪುರ, ಸಾದಿಕ್‍ಪಾಲ್ಯ, ಬೂಪಸಂದ್ರದ ಗಲಭೆಗಳು ನಿನ್ನೆಯ ತನಕ ಮಾತ್ರ ಆಗಿತ್ತು. ನಾಳೆಗೆ ಅಲ್ಲ. ಅಕಸ್ಮಾತ್ ತಮ್ಮ ಬೇಡಿಕೆ ಇಟ್ಟು ಯುದ್ದವನ್ನು ಸಮಾಜದ ವಿರುದ್ಧ ಸಾರಿದ್ದೇ ಆದರೆ ಅದು ಪುತ್ತೂರಿನಲ್ಲಿ ಅಥವಾ ಇತರ ಕಡೆಯಲ್ಲೂ ಆಗಬಹುದು. ಆದರೆ ಅದುವೇ ಫಸ್ಟ್ ಮತ್ತು ಲಾಸ್ಟ್ ಆಗಬೇಕು ಎಂದು ಜಗದೀಶ್ ಕಾರಂತ್ ಹೇಳಿದರು.

ಹಿಂದೂ ಭಾವನೆಗಳನ್ನು ಕೆಣಕಿದರೆ ನೀನ್ ತಾಂಟ್ರೆ ಬಾ ತಾಂಟ್ ಸವಾಲು: ಬ್ರಹ್ಮಶ್ರೀ ವೇದಮೂರ್ತಿ ಕುಂಟಾರು ರವೀಶ ತಂತ್ರಿಯವರು ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದೂ ಸಮಾಜದ ವಿರುದ್ಧ ಮಾತನಾಡುವವರು ವೇದಿಕೆಯಲ್ಲಿ ಬೊಗಳಿದ್ರೆ ಸಾಲದು ಅದನ್ನು ಅನುಷ್ಠಾನಕ್ಕೆ ತರುವ ತಾಕತ್ತುಬೇಕು. ಇವತ್ತು ಎಲ್ಲವನ್ನು ಹಿಂದೂ ಸಮಾಜ ಸಹಿಸಿದೆ.ಮುಂದೆ ನಮ್ಮ ಭಾವನೆಗಳನ್ನು ಕೆಣಕಿದರೆ, ನಮ್ಮನ್ನು ಕೆರಳಿಸುವ ಪ್ರಯತ್ನ ಮಾಡಿದರೆ ನಿಮಗೆ ಮಾತ್ರ ಗೊತ್ತಿರುವುದಲ್ಲ. ನಮಗೂ ಗೊತ್ತಿದೆ. ನೀನ್ ತಾಂಟ್ರೆ ಬಾ ತಾಂಟ್ ಎಂದು ಸವಾಲು ಹಾಕಿದರು.

Advertisement

ಕುಹಕ ದಾರಿಗಳಿಂದ ಹಿಂದೂ ಹೆಣ್ಣು ಮಕ್ಕಳನ್ನು ಪೆನ್ನಾನಿಗೆ ಕರೆದುಕೊಂಡು ಹೋಗಿ ಮತಾಂತರ ಕೇಂದ್ರದಲ್ಲಿ ಇರಿಸಿ ಅಲ್ಲಿ ಮತಾಂತರಗೊಳಿಸುವಿಕೆಗೆ ಪ್ರಯತ್ನಿಸುವಾಗ ಅಲ್ಲಿಂದಲೇ ವಾಪಾಸು ಕರೆದುಕೊಂಡು ಬಂದಂತಹ ಗಂಡು ಮಕ್ಕಳಿಗೆ ಪುತ್ತೂರಿನ ಮಣ್ಣಿನಲ್ಲಿ ಗಟ್ಟಿಯಾಗಿ ಮಾತನಾಡಲು ದಮ್ಮಿದೆ ಎಂದು ಸಾರಿ ಸಾರಿ ಹೇಳುತ್ತೇನೆ ಎಂದು, ಸಮಾವೇಶದ ಲೈವ್ ಕಾರ್ಯಕ್ರಮದಲ್ಲಿ ಬಂದ ಸವಾಲಿನ ಸಂದೇಶಕ್ಕೆ ಅವರು ಎದುರುತ್ತರ ನೀಡಿದರು.

ತುರ್ತು ಚಿಕಿತ್ಸೆಗಾಗಿ ಅಗತ್ಯ ಇರುವವರಿಗೆ ಆಂಬುಲೆನ್ಸ್ ಸೇವೆಯನ್ನು ಹಿಂದು ಜಾಗರಣ ವೇದಿಕೆ ವತಿಯಿಂದ ನೀಡಲಾಗುತ್ತಿದ್ದು, ಅದನ್ನು ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನೆ ಕಾರ್ಯದರ್ಶಿ ಜಗದೀಶ್ ಕಾರಂತ್ ಮತ್ತು ಸಾಧು ಸಂತರು ತೆಂಗಿನ ಕಾಯಿ ಒಡೆದು ಲೋಕಾರ್ಪಣೆಗೊಳಿಸಿದರು. ಲೋಕಾರ್ಪಣೆಗೊಂಡ ಆಂಬುಲೆನ್ಸ್ ಹಿಂಜಾವೇ ಈಶ್ವರಮಂಗಲ ಘಟಕದ ನಿರ್ವಹಣೆಯಲ್ಲಿ ಈಶ್ವರಮಂಗಲದಲ್ಲಿ ಸೇವೆಗೆ ಲಭ್ಯವಾಗಲಿದೆ. ಕೊಳ್ತಿಗೆ, ಸುಳ್ಯಪದವು, ಈಶ್ವರಮಂಗಲ, ಪಡುಮಲೆ, ಕೌಡಿಚ್ಚಾರು, ಕಾವು ಭಾಗಗಳಲ್ಲಿ ಈ ನೂತನ ಆಂಬುಲೆನ್ಸ್ ಸೇವೆ ದೊರಕಲಿದೆ. ಆಂಬುಲೆನ್ಸ್ ಸೇವೆ ತೀರಾ ಅಶಕ್ತರಿಗೆ ಉಚಿತವಾಗಿದ್ದು, ಉಳಿದವರಿಗೆ ಮಿತದರದಲ್ಲಿ ಸೇವೆ ನೀಡಲಿದೆ. ಹಿಂದು ಜಾಗರಣ ವೇದಿಕೆ ರಕ್ತ ಸಹಾಯವಾಣಿಯಿಂದ ಹಲವು ಸೇವೆ ನೀಡಿದೆ. ಕೊರೋನಾ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಪೂರೈಕೆ, ಶವ ಸಂಸ್ಕಾರವನ್ನು ನಡೆಸಿದೆ ಎಂದು ಉದ್ಘೋಷಕರು ತಿಳಿಸಿದರು.

ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆ ತಾಲೂಕು ಗೌರವಾಧ್ಯಕ್ಷ ಡಾ.ಎಮ್.ಕೆ.ಪ್ರಸಾದ್, ನಗರ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಕುಂಜಾಡಿ ಹಿಂದು ಜಾಗರಣ ವೇದಿಕೆ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ ನಿರಾಣಿ, ಉದ್ಯಮಿ ರೈ ಎಸ್ಟೇಟ್‌ನ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಬೆಂಗಳೂರಿನ ಶ್ರೀ ವಿದ್ಯಾಮಾನ ವಿದ್ಯಾಕೇಂದ್ರ ಮತ್ತು ಅಂಬಿಕಾ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಸೊಸೈಟಿ ನಿರ್ದೇಶಕ ಭರತ್ ಸೌಂದರ್ಯ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಜಗದೀಶ ನೆತ್ತರಕೆರೆ, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ ಉಪಸ್ಥಿತರಿದ್ದರು. ಹಿಂಜಾವೇ ನಗರ ಕಾರ್ಯದರ್ಶಿ ರಾಜು ಕೋರ್ಟು ರಸ್ತೆ, ಪದ್ಮಶ್ರೀ ಗ್ರೂಪ್ಸ್ ಮಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ರೈ ಈಶ್ವರಮಂಗಲ, ಹಿಂಜಾವೆ ತಾಲೂಕು ಅಧ್ಯಕ್ಷ ಶಶಿಕಾಂತ್, ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ಪುತ್ತೂರು ನಗರ ಉಪಾಧ್ಯಕ್ಷ ಗಿತೇಶ್ ಮಡಪ್ಪಾಡಿ, ತಾಲೂಕು ಮಾತೃ ಸುರಕ್ಷಾ ಸಹ ಸಂಯೋಜಕ ಗಣೇಶ್ ಬೆದ್ರಾಳ, ಹಿಂಜಾವೇ ಬನ್ನೂರು ಅಧ್ಯಕ್ಷ ಮನೀಶ್ ಕುಲಾಲ್, ಕಾರ್ಯದರ್ಶಿ ಮನೀಶ್ ಬಿರ್ವ, ಮಾತೃ ಸುರಕ್ಷಾ ಜಿಲ್ಲಾ ಸಂಯೋಜಕ ರಾಜೇಶ್ ಪಂಚೋಡಿ ಪುತ್ತೂರು ನಗರದ ಸಂಪರ್ಕ ಪ್ರಮುಖ್ ರಾಕೇಶ್ ಓಜಾಲ, ತಾಲೂಕು ಸಂಪರ್ಕ ಪ್ರಮುಖ್ ದಿನೇಶ್ ಪಂಜಿಗ, ಪ್ರಧಾನ ಕಾರ್ಯದರ್ಶಿ ಅವಿನಾಶ್ ಸಾಧು ಸಂತರಿಗೆ ಫಲಪುಷ್ಪ ನೀಡಿ ಗೌರವಿಸಿದರು.

ಮಾತೃಸುರಕ್ಷಾ ತಾಲೂಕು ಮಾತೃ ಸಂಯೋಜಕ ಸ್ವಸ್ತಿಕ್ ಸರ್ವೆ, ಈಶ್ವರಮಂಗಲ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಮಡ್ಯಲಮಜಲು, ಕಾರ್ಯಕರ್ತ ಅನಂತಕೃಷ್ಣ, ಪೆರ್ಲಂಪಾಡಿ ಪ್ರಧಾನ ಕಾರ್ಯದರ್ಶಿ ಜಯಂತ್ ಪೆರ್ಲಂಪಾಡಿ, ನಗರ ಕಾರ್ಯದರ್ಶಿ ಪ್ರತೀಕ್ ಪುತ್ತೂರು, ಪ್ರಚಾರ ಪ್ರಮುಖ್ ಭರತ್ ಆನಡ್ಕ, ನಗರ ಕಾರ್ಯದರ್ಶಿ ವಿನೋದ್ ಸಾಲ್ಯಾನ್, ಆನಡ್ಕ ಪ್ರಧಾನ ಕಾರ್ಯದರ್ಶಿ ಸಂದೀಪ್ ಕರ್ಗಲ್, ಕಾರ್ಯಕರ್ತ ಕೌಶಿಕ್ ಉರಮಾಲ್, ಸುನಿಲ್ ಕುಮಾರ್ ಪೆರ್ಲಂಪಾಡಿ ಅತಿಥಿಗಳನ್ನು ಗೌರವಿಸಿದರು.ಗುರುಪ್ರಿಯ ಪ್ರಾರ್ಥಿಸಿದರು. ವಿದ್ಯಾಶ್ರೀ ಕಲ್ಲಡ್ಕ ವೈಯುಕ್ತಿಕ ಗೀತೆ ಹಾಡಿದರು. ಹಿಂದು ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜನಗರ ಸ್ವಾಗತಿಸಿದರು. ನಗರ ಅಧ್ಯಕ್ಷ ಪುಷ್ಪರಾಜ್ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.ಸಭೆಯ ಆರಂಭದಲ್ಲಿ ನಾಸಿಕ್ ಬ್ಯಾಂಡ್‌ನಲ್ಲಿ ಎಸ್.ಆರ್.ಕೆ. ಕೆದಿಲ, ಶಬರಿ ಪುತ್ತೂರು, ಸ್ತಬ್ದ ಚಿತ್ರದ ಕಲ್ಲೇಗ ಟೈಗರ್‍ಸ್, ಸಿಂಗಾರಿ ಮೇಳದಲ್ಲಿ ಸಹಕರಿಸಿದ ಶ್ರೀಶಾಸ್ತಂ ದೇಲಂಪಾಡಿ, ವೈಯುಕ್ತಿಕ ಗೀತೆ ಹಾಡಿದ ವಿದ್ಯಾಶ್ರೀ ಕಲ್ಲಡ್ಕ, ವಂದೇ ಮಾತರಂ ಹಾಡಿದ ಗುರುಪ್ರಿಯಾ ನಾಯಕ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹಿಂಜಾವೇ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಸಚಿನ್ ರೈ ಪಾಪೆಮಜಲು, ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ್ ಶೆಟ್ಟಿ ಕಡಬ ಸೇರಿದಂತೆ ಹಲವಾರು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯರಾದ ಪಿ.ಜಿ ಜಗನ್ನಿವಾಸ ರಾವ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ಕಾರ್‍ಯದರ್ಶಿ ಯತೀಶ್, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಸದಸ್ಯರಾದ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾ.ಪಂ.ಸದಸ್ಯ ಕರುಣಾಕರ ಎಲಿಯ, ಉದ್ಯಮಿ ರತ್ನಾಕರ ರೈ ಕೆದಂಬಾಡಿಗುತ್ತು, ಮೋಹನ್ ರೈ ನರಿಮೊಗರು, ನ್ಯಾಯವಾದಿ ಮಹೇಶ್ ಕಜೆ, ಭವೀನ್ ಶೆಟ್,ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಐತ್ತಪ್ಪ ನಾಯ್ಕ್, ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್,ಡಾ.ದೀಪಕ್ ರೈ, ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ, ತಾ.ಪಂ ಸದಸ್ಯ ಹರೀಶ್ ಬಿಜತ್ರೆ, ರಾಮ್‌ದಾಸ್ ಆಚಾರ್ಯ, ಡಾ.ಸುರೇಶ್ ಪುತ್ತೂರಾಯ,ವೆಂಕಟ್ರಮಣ ಗೌಡ ಕಳುವಾಜೆ ಸೇರಿದಂತೆ ಹಲವು ಪ್ರಮುಖರು ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದರು.

Advertisement
Advertisement
Previous Post

ಕಾಸರಗೋಡು: ಮಣಿಯಂಪಾರೆ ಸೈಂಟ್ ಲಾರೆನ್ಸ್‌ ಚರ್ಚ್‌ನ ಪ್ರತಿಮೆಗೆ ದುಷ್ಕರ್ಮಿಗಳಿಂದ ಹಾನಿ

Next Post

ಬೇಸಿಗೆ ಕಾಲ ಆರಂಭ : ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

OtherNews

ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!
Featured

ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

April 16, 2026
ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!
Featured

ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

April 15, 2026
ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!
ಪುತ್ತೂರು

ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

April 15, 2026
ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!
Featured

ಪುತ್ತೂರು ಜಾತ್ರೋತ್ಸವ: ನಾಳೆ ಬಲ್ನಾಡು ದೈವಸ್ಥಾನದಲ್ಲಿ ಬೆಳಗ್ಗಿನಿಂದಲೇ ಮಲ್ಲಿಗೆ ಹರಕೆ ಅರ್ಪಿಸಲು ಅವಕಾಶ..!!

April 15, 2026
ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!
Featured

ಉಪ್ಪಿನಂಗಡಿ: ಗ್ರಾ.ಪಂ. ವಾಣಿಜ್ಯ ಸಂಕೀರ್ಣ ಕೊಠಡಿಗಳ ಕಂತು ಬಾಕಿ: 20 ಅಂಗಡಿಗಳಿಗೆ ಪಂಚಾಯತ್‌ನಿಂದ ಬೀಗ..!!

April 15, 2026
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 1090 ಕೋಟಿ ರೂ.ಗಳ ವ್ಯವಹಾರ ನಡೆಸಿ, 4.05 ಕೋಟಿ ರೂ ನಿವ್ವಳ ಲಾಭ ಗಳಿಸಿದೆ: ಎಚ್. ಜಗನ್ನಾಥ ಸಾಲಿಯಾನ್
ಪುತ್ತೂರು

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 1090 ಕೋಟಿ ರೂ.ಗಳ ವ್ಯವಹಾರ ನಡೆಸಿ, 4.05 ಕೋಟಿ ರೂ ನಿವ್ವಳ ಲಾಭ ಗಳಿಸಿದೆ: ಎಚ್. ಜಗನ್ನಾಥ ಸಾಲಿಯಾನ್

April 15, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

ಪುತ್ತೂರು: ಒಮ್ನಿ ಕಾರುಗಳ ನಡುವೆ ಡಿಕ್ಕಿ..!!

April 16, 2026
ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

ವಿಟ್ಲ : ಆಪೆ ರಿಕ್ಷಾ-ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು..!!

April 15, 2026
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ..!!

ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಮಹಡಿ ಮೇಲಿಂದ ತಳ್ಳಿ ಕೊಂದ ಮಗ..!!

April 15, 2026
ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

ನಾಳೆ ಉಳ್ಳಾಲ್ತಿ, ದಂಡನಾಯಕ ದೈವಗಳ ಆಗಮನ : ಬಿರುವೆರ್ ಕುಡ್ಲದಿಂದ ಭಕ್ತರಿಗೆ ತಂಪು ಪಾನೀಯ ಸೇವೆ..!!

April 15, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.