ಲಖನೌ: ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲೇ ಇರೋ ಜ್ಯಾನವ್ಯಾಪಿ ಮಸೀದಿಯಲ್ಲಿ ನಡೆಯುತ್ತಿರುವ ಸರ್ವೇ ಕಾರ್ಯ ಅಂತ್ಯವಾಗಿದೆ. ಜಿಲ್ಲಾ ನ್ಯಾಯಾಲಯ ನೀಡಿದ ಆದೇಶದ ಮೇರೆಗೆ ಮಸೀದಿಯ ಆವರಣದಲ್ಲಿ ಅಡ್ವೋಕೆಟ್ ಕಮಿಷನರ್ ಸರ್ವೇ ಕಾರ್ಯ ನಡೆಸಿದ್ದಾರೆ.
ಸರ್ವೇ ಕಾರ್ಯ ನಡೆಸುವ ವೇಳೆ ಗ್ಯಾನವಾಪಿ ಮಸೀದಿಯಲ್ಲಿ ಹಿಂದೂ ದೇಗುಲದ ಕುರುಹುಗಳೂ ಹಾಗೂ ಶಿವಲಿಂಗ ಪತ್ತೆಯಾಗಿದೆ. ಇನ್ನು ಶಿವಲಿಂಗ ಪತ್ತೆಯಾಗಿರೋ ಪ್ರದೇಶವನ್ನು ಸೀಲ್ ಮಾಡಲು ಕೋರ್ಟ್ ಸೂಚನೆ ನೀಡಿದೆ. ಜೊತೆಗೆ ಸಿಆರ್ಪಿಎಫ್ನಿಂದ ರಕ್ಷಣೆಗೂ ಆದೇಶ ನೀಡಿದೆ.
ಏನಿದು ಮಸೀದಿ ವಿವಾದ..?
ಗ್ಯಾನವಾಪಿ ಮಸೀದಿ ವಿಚಾರದಲ್ಲಿ ಮೊದಲಿನಿಂದಲೂ ವಿವಾದವಿದೆ. 14ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶ್ವನಾಥ ದೇವಾಲಯದ ಒಂದು ಭಾಗವನ್ನು ಧ್ವಂಸ ಮಾಡಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಕೆಲವು ಇತಿಹಾಸಕಾರರು ವಾದ ಮಂಡಿಸಿದ್ದಾರೆ. 1809ರಲ್ಲಿಯೇ ಇಲ್ಲಿ ಧಾರ್ಮಿಕ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಘರ್ಷಣೆಗಳು ನಡೆದಿತ್ತು.
ದೆಹಲಿ ಮೂಲದ ಐವರು ಮಹಿಳೆಯರು ರಾಖಿ ಸಿಂಗ್, ಲಕ್ಷ್ಮೀ ದೇವಿ, ಸೀತ ಸಾಹು ಸೇರಿದಂತೆ ಹಲವರು 2021ರ ಏ.18 ರಂದು ಮಸೀದಿ ಕುರಿತಂತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಮಸೀದಿಯ ಹೊರ ಭಾಗದ ಗೋಡೆಗಳ ಮೇಲಿರೋಓ ವಿಗ್ರಹಗಳಿಗೆ ಪೂಜೆ ಸಲ್ಲಿಕೆ ಮಾಡಲು ಅನುಮತಿಗಾಗಿ ಮನವಿ ಮಾಡಿ ವಿಗ್ರಹಗಳಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ನೀಡಲು ಕೋರಿದ್ದರು.
ಕೋರ್ಟ್ ಆದೇಶದಂತೆ ಸರ್ವೇ ಕಾರ್ಯ ನಡೆಸಲಾಗಿದೆ. ಇದಕ್ಕೂ ಮುನ್ನ ನಾವು ಎಲ್ಲರೊಂದಿಗೂ ಮಾತನಾಡಿದ್ದೇವು. ಆ ವೇಳೆ ನ್ಯಾಯಾಲಯ ಆದೇಶವನ್ನು ಅನುಸರಿಸುವುದು ಮುಖ್ಯ ಎಂದು ತಿಳಿಸಿದ್ದೇವು. ಆ ಮೂಲಕ ಜನರ ತಪ್ಪು ನಂಬಿಕೆಯನ್ನು ಹೋಗಲಾಡಿಸಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದೇವೆ. ಮೂರು ದಿನಗಳ ಸಮೀಕ್ಷೆ ಕೊನೆಗೊಂಡಿದೆ. ಸಹಕಾರ ನೀಡಿದ ಎಲ್ಲಾ ಜನತೆಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇವೆ ಎಂದು ವಾರಣಾಸಿ ಪೊಲೀಸ್ ಕಮಿಷನರ್ ಸತೀಶ್ ಗಣೇಶ್ ಹೇಳಿದ್ದಾರೆ.