ವಿಟ್ಲ: ಆರು ತಿಂಗಳ ಮಗುವಿನಿಂದ ಇಂದಿನವರೆಗೂ ತಲಸೇಮಿಯಾ ಮೇಜರ್ ಎನ್ನುವ ರೋಗದಿಂದ ಬಳಲುತ್ತಿರುವ ದಿಗಂತ್ ಎಂಬ ಬಾಲಕನ ಚಿಕಿತ್ಸೆಗಾಗಿ ಯುವ ಉದ್ಯಮಿಯಾದ ಪ್ರಶಾಂತ್ ಗೌಡ ಬನ ಮತ್ತು ಅವರ ಸ್ನೇಹಿತರು ಧನ ಸಹಾಯ ಮಾಡುವ ಮೂಲಕ ಸಹಾಯಹಸ್ತ ಚಾಚಿದ್ದಾರೆ.
ಈ ಸಂದರ್ಭದಲ್ಲಿ ಷಣ್ಮುಖ ಪೂಜಾರಿ, ರವಿ ಕುಲಾಲ್, ಚೇತನ್ ಕಡಂಬು, ಸಾಕೇತ್ ಬನ, ಜಯಪ್ರಕಾಶ್, ವಿಜಯ ಕಲ್ಲಡ್ಕ ಉಪಸ್ಥಿತರಿದ್ದರು.
ದಿಗಂತ್ ತಲಸೇಮಿಯಾ ಮೇಜರ್ ಎನ್ನುವ ರೋಗದಿಂದ ಬಳಲುತ್ತಿದ್ದು, ಆತನಿಗೆ ಆರು ತಿಂಗಳ ಮಗುವಿನಿಂದ ಇಂದಿನವರೆಗೂ ರಕ್ತ ವರ್ಗಾವಣೆ ನಡೆಯುತ್ತಿದ್ದು, ಈತ ಗುಣಮುಖನಾಗಲು ಕೊನೆಯ ಆಯ್ಕೆಯಾಗಿರುವ ಮೂಳೆ ಮಜ್ಜೆಯ ಕಸಿ(Bone Marow Transplantation) ಮಾಡಬೇಕಾಗಿದ್ದು, ದಿಗಂತ್ ಸಹೋದರಿಯ ಮೂಳೆ ಮಜ್ಜೆ ಸೂಕ್ತವಾಗಿ ಹೊಂದಿಕೆಯಾಗುತ್ತಿದ್ದು, ಈ ಕಸಿಯನ್ನು ಯಾವುದೇ ಲಾಭವಿಲ್ಲದೆ ದಾನವಾಗಿ ಸಂಕಲ್ಪ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಮಾಡಲಾಗುತ್ತಿದ್ದು, ಇದರ ಒಟ್ಟು ವೆಚ್ಚ ಸುಮಾರು 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದು ಒಂದು ಪ್ಯಾಕೇಜ್ ವೆಚ್ಚವಾಗಿದ್ದು, ಒಂದು ವೇಳೆ ಚಿಕಿತ್ಸೆಯ ಸಮಯದಲ್ಲಿ ಅಥವಾ ನಂತರ ಯಾವುದೇ ಸೋಂಕು ತಗುಲಿದರೆ, ಅದರ ಚಿಕಿತ್ಸೆಯಿಂದಾಗಿ, ವೆಚ್ಚ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ದಾನಿಗಳ ನೆರವು ಬೇಕಾಗಿದೆ.
ಮಗುವಿನ ಕಸಿಗಾಗಿ ಧನಸಹಾಯವನ್ನು ನೀಡಲು ಇಚ್ಚಿಸುವ ದಾನಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಬಹುದಾಗಿದೆ.
Name – Diganth
Bank – Union Bank Of India
Branch – Vitla
Account Number – 520101029665775
IFSC Code- UBIN0912000