ಪುತ್ತೂರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಸೆ.10 ರಂದು ನಡೆಯಲಿರುವ ಅರ್ಧ ಏಕಹಾ ಭಜನೆ ಮತ್ತು ಶನಿಶ್ವರ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಆಮಂತ್ರಣ ಪತ್ರ ಬಿಡುಗಡೆಯನ್ನು ಶನಿ ಪೂಜಾ ಸಮಿತಿ ಅಧ್ಯಕ್ಷ ಅನಿಲ್ ಕಣ್ಣರ್ನೂಜಿ ಮತ್ತು ಉತ್ಸವ ಸಮಿತಿ ಅಧ್ಯಕ್ಷ ಸುಂದರ ಗೌಡ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ನಾಯ್ಕ್ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು. ಸುಮಾರು 2000ಕ್ಕಿಂತ ಹೆಚ್ಚು ಶನಿ ಪೂಜಾ ಸೇವೆ ಆಗಬೇಕು ಎಂದು ಗುರಿ ನಿಗದಿ ಮಾಡಿ ಅದಕ್ಕೆ ಬೇಕಾದ ಬೈಲ್ವಾರ್ ಸಮಿತಿ ಮಾಡಿ ಅದಕ್ಕೆ ಕಾರ್ಯಕರ್ತರನ್ನು ಜೋಡಿಸಲಾಯಿತು. ಸುಮಾರು 10 ತಂಡಗಳನ್ನು ರಚಿಸಿ ಪೂಜಾ ರಶೀದಿ ಮತ್ತು ಆಮಂತ್ರಣ ಪತ್ರಿಕೆ ವಿತರಿಸಲಾಗಿದೆ ಎಂದರು.
ಸುಂದರ ಗೌಡರು ಕೆಲವು ಸಲಹೆ ಗಳನ್ನು ನೀಡಿದರು. ಚಂದ್ರ ಶೇಖರ್ ಕುರೆಮಜಲು ಸ್ವಾಗತಿಸಿ ದಿನೇಶ್ ಬಿಕೆ ವಂದಿಸಿದರು. ಸಭೆಯಲ್ಲಿ ಪಂಚಾಯತ್ ಸದಸ್ಯರು, ಭಕ್ತಾದಿಗಳು, ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಭಾಗವಹಿಸಿದ್ದರು.