ಪುತ್ತೂರು: ಗ್ರೀನ್ ವ್ಯೂ ಪ್ರಾಥಮಿಕ ಶಾಲೆ ಮತ್ತು ನೂರುಲಾ ಹುದಾ ಅರಬಿಕ್ ಶಾಲೆಯ ಬಪ್ಪಳಿಗೆ ಇದರ ವತಿಯಿಂದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಮಜಿಮುನ್ನೂರು ಮಸೀದಿ ಖತೀಬರು ಬಹು ಫರೂಕ್ ಸ್ವಾತಂತ್ರೋತ್ಸವದ ಬಗ್ಗೆ ವಿಚಾರಧಾರೆಯನ್ನು ತಿಳಿಸಿದರು. ಜಮಾತ್ ಅಧ್ಯಕ್ಷರಾದ ಬಿ.ಎಚ್. ಮಹಮ್ಮದ್ ಹಾಜಿ ಯವರು ಧ್ವಜಾರೋಹಣ ಮಾಡಿದರು.
ಸಭಾ ಅಧ್ಯಕ್ಷತೆಯನ್ನು ಗ್ರೀನ್ ವ್ಯೂ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಹಮೀದ್ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರೀನ್ ವ್ಯೂ ಟ್ರಸ್ಟ್ ನ ಕಾರ್ಯದರ್ಶಿ ಅನ್ಸಾರುಲ್, ಗ್ರೀನ್ ವ್ಯೂ ಕೋಶಾಧಿಕಾರಿ ನಝಿರ್ ಅಹ್ಮದ್, ಉಪಾಧ್ಯಕ್ಷರಾದ ಉಮ್ಮರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಮೆಡಲ್ ನೀಡಲಾಯಿತು.