ವಿಟ್ಲ: ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್. ರವರ ನೇತೃತ್ವದಲ್ಲಿ, 12ನೇ ವಾರ್ಡ್ ಬಿಜೆಪಿ ಬೂತ್ ಅಧ್ಯಕ್ಷರಾದ ಜಗದೀಶ್ ಅನ್ನಮೂಲೆ ಹಾಗೂ ಅಯೋಧ್ಯ ಫ್ರೆಂಡ್ಸ್ ಅನ್ನಮೂಲೆ ಸಹಕಾರದೊಂದಿಗೆ ಸೆ.11 ರಂದು ಪಳಿಕೆ-ಅನ್ನಮೂಲೆ ರಸ್ತೆಯನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.
![](https://zoomintv.online/wp-content/uploads/2022/09/IMG-20220911-WA0018-1024x462.jpg)
ರಸ್ತೆ ಬದಿಯ ಗಿಡ, ಪೊದೆಗಂಟಿಗಳನ್ನು ತೆಗೆಯುವುದರ ಮೂಲಕ ರಸ್ತೆ ಬದಿಯನ್ನು ಸ್ವಚ್ಚಗೊಳಿಸಲಾಯಿತು.
![](https://zoomintv.online/wp-content/uploads/2022/09/IMG-20220911-WA0017-1024x462.jpg)
12ನೇ ವಾರ್ಡ್ ಬಿಜೆಪಿ ಕಾರ್ಯಕರ್ತರು ಹಾಗೂ ಅಯೋಧ್ಯ ಫ್ರೆಂಡ್ಸ್ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
![](https://zoomintv.online/wp-content/uploads/2022/09/IMG-20220911-WA0015-462x1024.jpg)
ಪಟ್ಟಣ ಪಂಚಾಯತ್ ಸದಸ್ಯರಾದ ಹರೀಶ್ ಸಿ. ಎಚ್ ರವರು ತಮ್ಮ ಸ್ವಂತ ಹಣದಿಂದಲೇ ಸ್ವಚ್ಛತಾ ಕಾರ್ಯ ಹಾಗೂ ಇನ್ನಿತರ ಜನಪರ ಕಾರ್ಯಗಳನ್ನು ನೆರವೇರಿಸುತ್ತಿದ್ದು, ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
![](https://zoomintv.online/wp-content/uploads/2022/09/IMG-20220911-WA0023.jpg)
![](https://zoomintv.online/wp-content/uploads/2022/09/IMG-20220911-WA0014-1024x462.jpg)
![](https://zoomintv.online/wp-content/uploads/2022/09/IMG_20220911_142720.jpg)
![](https://zoomintv.online/wp-content/uploads/2022/09/IMG_20220911_142635.jpg)