Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಡಾ.ಸಜ್ಞಾಕೆ.ಸಿರವರಿಗೆ ಎಂಡಿಎಸ್‌ ಪದವಿಯಲ್ಲಿ 6ನೇ ರಾಂಕ್..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

    ಬೆಳ್ತಂಗಡಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 3.50 ಲಕ್ಷದ ಡಿಸೇಲ್‌ ಪತ್ತೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಪುತ್ತೂರು : ಜಾತ್ರೋತ್ಸವದ ಸಂದರ್ಭದಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳು ಕಡ್ಡಾಯ : ಜಾತ್ರೋತ್ಸವದ ವೇಳೆ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ

April 9, 2021
in ಧಾರ್ಮಿಕ, ಪುತ್ತೂರು
0
ಪುತ್ತೂರು : ಜಾತ್ರೋತ್ಸವದ ಸಂದರ್ಭದಲ್ಲಿ ಕೋವಿಡ್ ಮುನ್ನಚ್ಚರಿಕೆ ಕ್ರಮಗಳು ಕಡ್ಡಾಯ : ಜಾತ್ರೋತ್ಸವದ ವೇಳೆ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಸಮಯ ದೇವರ ಸವಾರಿ ಬರುವ ಸಂದರ್ಭದಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಜಿಲ್ಲಾಡಳಿತದಿಂದ ಆದೇಶವಿರುವ ಕಾರಣ ಕಟ್ಟೆ ಸಮಿತಿ/ಮಾಲಕರು ಕಟ್ಟೆಪೂಜಾ ಸಮಯ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕಾಗಿ ದೇವಳದ ವ್ಯವಸ್ಥಾಪನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement
Advertisement

ಪಾಲಿಸಬೇಕಾದ ನಿಯಾಮಾವಳಿಗಳು : ತಮ್ಮ ಕಟ್ಟೆಯಲ್ಲಿ ಕಟ್ಟೆಪೂಜೆ ಜರಗುವ ದಿನ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವಂತಿಲ್ಲ. ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಉಪಹಾರ ವಿತರಣೆಗೆ ಅವಕಾಶವಿಲ್ಲ. ಕಟ್ಟೆಯ ಬಳಿ ಸಂಬಂಧಿಸಿದವರು ಮಾತ್ರ ಇದ್ದು, ಹೆಚ್ಚು ಜನದಟ್ಟಣೆಯಾಗದಂತೆ ಜಾಗ್ರತೆ ವಹಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು, ಕಟ್ಟೆಯ ಸಮೀಪ ಸ್ಯಾನಿಟೈಸರ್ ಇಡಬೇಕು. ಯಾವುದೇ ನಿಯಮಗಳ ಉಲ್ಲಂಘನೆಯಾದಲ್ಲಿ ಇದಕ್ಕೆ ಸಂಬಂಧ ಪಟ್ಟವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜಾತ್ರೋತ್ಸವವನ್ನು ಯಶಸ್ವಿಯಾಗಿಸಬೇಕೆಂದು ತಿಳಿಸಿದ್ದಾರೆ.

ಜಾತ್ರೋತ್ಸವದ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳು : ಜಾತ್ರೋತ್ಸವದ ಸಲುವಾಗಿ ಏ.10 ರಂದು ಧ್ವಜಾರೋಹಣ ನಡೆಯಲಿರುವುದು. ಧ್ವಜಸ್ತಂಭಕ್ಕೆ ನೀಡುವ ಹೊರಕಾಣಿಕೆಯನ್ನು ಸಮರ್ಪಿಸುವವರು ದೇವಳದ ಒಳಗೆ 8 ಗಂಟೆಯ ಒಳಗಾಗಿ ನೀಡಬೇಕಾಗಿ ತಿಳಿಸಿದ್ದಾರೆ. ಪ್ರತಿದಿನ ದೇವರ ಬಲಿ ಉತ್ಸವದಲ್ಲಿ ಭಕ್ತಾಭಿಮಾನಿಗಳು ಕೋವಿಡ್ ನಿಯಾಮಾನುಸಾರ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಉಪಯೋಗಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ವಯಂ ಸೇವಕರ ಸೂಚನೆಗಳನ್ನು ಹಾಗೂ ಧ್ವನಿವರ್ಧಕ ಉದ್ಘೋಷಕರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

Advertisement
Advertisement

ಅಯ್ಯಪ್ಪ ಗುಡಿಯ ಬದಿಯಲ್ಲಿ ಶಾಮಿಯಾನ ಹಾಕಿರುವ ಸ್ಥಳದಲ್ಲಿ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯನ್ನು ಮಾಡಲಾಗುವುದು ಅಲ್ಲಿಂದ ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು, ಸಂಜೆ ದೇವರ ಪೇಟೆ ಸವಾರಿಯ ಸಂದರ್ಭದಲ್ಲಿಯೂ ದೇವರೊಂದಿಗೆ ನಿಯಾಮಾನುಸಾರ ನಿಗದಿತ ಸ್ವಯಂ ಸೇವಕರು, ದೇವರ ಧ್ವಜ ಪತಾಕೆ, ದೀವಟಿಗೆ, ಗ್ಯಾಸ್ ಲೈಟ್ ಹಾಗೂ ವ್ಯವಸ್ಥಾಪನಾ ಸಮಿತಿ ಪರಿವಾರ ಹೊರತು ಪಡಿಸಿ ಇತರರಿಗೆ ಅವಕಾಶವಿರುವುದಿಲ್ಲ.

ಏ.14 ರ ವಿಷು ಸಂಕ್ರಮಣದ ದಿನ ದೇವಸ್ಥಾನಕ್ಕೆ ಸರತಿಯ ಸಾಲಿನಲ್ಲಿ ಅಯ್ಯಪ್ಪ ಗುಡಿಯ ಬಲಭಾಗದಲ್ಲಿ ವ್ಯವಸ್ಥೆ ಮಾಡಿದ ಶಾಮಿಯಾನ ನೆರಳಿನಿಂದ ತೆರಳುವುದು, ಏ.16ರಂದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಬರುವ ಹೊತ್ತಿನಲ್ಲಿ ಭಕ್ತಾದಿಗಳು ಗುಂಪು ಸೇರದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಏ.17 ರಂದು ಶ್ರೀ ದೇವರ ದರ್ಶನ ಬಲಿ ಸಮಯದಲ್ಲಿ ನಿಯಾಮಾನುಸಾರ ದೇವಳದ ಒಳಗೆ ಬರಲು ಅವಕಾಶವಿರುವುದಿಲ್ಲ. ದೇವಳದ ಹೊರಗೆ ಹಾಕಿದ ಎಲ್ ಇಡಿ ಯಲ್ಲಿ ದೇವರ ದರ್ಶನಬಲಿಯನ್ನು ನೋಡಬಹುದಾಗಿದೆ. ಬಟ್ಟಲು ಕಾಣಿಕೆ ಸಮಯದಲ್ಲಿ ಸರತಿ ಸಾಲಿನಲ್ಲಿ ದೇವಳದ ಒಳಗೆ ಪ್ರವೇಶಿಸಿ ಬಟ್ಟಲು ಕಾಣಿಕೆ ಹಾಕಿ ಪ್ರಸಾದ ಸ್ವೀಕರಿಸಿದ ಸರತಿಯಂತೆ ಹೊರಗೆ ಹೋಗಬೇಕು. ಬ್ರಹ್ಮ ರಥೋತ್ಸವ ಸಮಯದಲ್ಲಿ ಬ್ಯಾರಿಕೇಡ್ ಮತ್ತು ಲೈಟ್ ಕಂಬದ ಮಧ್ಯ ಬಫರ್ ಝೋನ್ ಗೆ ಯಾರಿಗೂ ಪ್ರವೇಶವಿಲ್ಲ, ರಥ ಎಳೆಯುವ ಸೀಮಿತ ಸ್ವಯಂಸೇವಕರಿಗೆ ಮಾತ್ರ ಅವಕಾಶ.

ಏ.18 ರಂದು ವೀರಮಂಗಲ ಅವಭ್ರತ ಸ್ನಾನಕ್ಕೆ ದೇವರು ತೆರಳುವ ಸಂದರ್ಭ ಸವಾರಿಯಲ್ಲಿ ಭಾಗವಹಿಸಲು ಭಕ್ತಾದಿಗಳಿಗೆ ಅವಕಾಶವಿರುವುದಿಲ್ಲ.ಏ.19 ರಂದು ಧ್ವಜಾವರೋಹಣ ಸಂದರ್ಭದಲ್ಲಿಯೂ ದೇವಳದ ಒಳಗೆ ಪರಿಚಾರಕರನ್ನು ಹೊರತು ಪಡಿಸಿ ಭಕ್ತಾದಿಗಳಿಗೆ ಒಳ ಪ್ರವೇಶಕ್ಕೆ ಅವಕಾಶವಿಲ್ಲ. ಜಾತ್ರೋತ್ಸವ ವೇಳೆ ಮೊಬೈಲ್ ಚಿತ್ರೀಕರಣವನ್ನು ಮಾಡಬಾರದು, ದೇವಳದ ವತಿಯಿಂದ ಅಧಿಕೃತ ಪಾಸ್ ಪಡೆದವರಿಗೆ ಮಾತ್ರ ಚಿತ್ರೀಕರಣಕ್ಕೆ ಅವಕಾಶ. ಜಾತ್ರೋತ್ಸವ ಸಂದರ್ಭದಲ್ಲಿ ದೇವಳದ ಗದ್ದೆಯಲ್ಲಿ ಯಾವುದೇ ಸ್ಟಾಲ್ (ಅಂಗಡಿ)ಗಳಿಗೆ ಅವಕಾಶವಿರುವುದಿಲ್ಲ, ಅಂಗಡಿ (ಸ್ಟಾಲ್ ಗಳನ್ನು) ದೇವಸ್ಥಾನದ ಸಭಾವನದಲ್ಲಿ ಇಡುವ ಅವಕಾಶವಿದ್ದು ಅದರ ಹರಾಜು ಪ್ರಕ್ರಿಯೆಯು ಏ.11 ರಂದು ನಡೆಯಲಿದೆ.ದೇವಳಕ್ಕೆ ಸಮರ್ಪಿಸುವ ಹೊರಕಾಣಿಕೆಯನ್ನು ದೇವಳದ ಹೊರ ಆವರಣದಲ್ಲಿರುವ ಕೌಂಟರ್ ನಲ್ಲಿ ಒಪ್ಪಿಸಬೇಕು. ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ ಸರ್ಕಾರದ ಸೂಚನೆಗಳನ್ನು ಗೌರವಿಸಬೇಕು ಹಾಗೂ ಜಾತ್ರೋತ್ಸವವು ಯಶಸ್ವಿಯಾಗುವಲ್ಲಿ ಸಹಕರಿಸಬೇಕೆಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Previous Post

ಇಂದಿನಿಂದ ಐಪಿಎಲ್ ಹಂಗಾಮ : ಮೊದಲ ದಿನವೇ ನಾಯಕ – ಉಪನಾಯಕನ ಮಧ್ಯೆ ಫೈಟ್

Next Post

(ಏ.22) ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ : ಪುತ್ತೂರು ಪೇಟೆಯಲ್ಲಿ ಆಮಂತ್ರಣ ವಿತರಣೆ

OtherNews

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!
Featured

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

March 8, 2026
ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!
ಪುತ್ತೂರು

ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

March 8, 2026
ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!
Featured

ವಿಟ್ಲ: ಸೈಕಲ್‌ನಿಂದ ಬಿದ್ದು ಬಾಲಕ ಮೃತ್ಯು..!!

March 7, 2026
ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!
ಕ್ರೈಮ್

ವಿಟ್ಲ : ಅಕ್ರಮ ಸುಡುಮದ್ದು ತಯಾರಿಕಾ ಸ್ಥಳದಲ್ಲಿ ಸ್ಫೋಟ – ಆರೋಪಿತ ವಶಕ್ಕೆ..!!

March 7, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಕಾರು ತಾಗಿದ್ದಕ್ಕೆ ಹಲ್ಲೆ: ಆಸ್ಪತ್ರೆಗೆ ದಾಖಲು..!!

March 6, 2026

Leave a Reply Cancel reply

Your email address will not be published. Required fields are marked *

Recent News

ಗೆಳೆಯನಿಂದ ಕಿರುಕುಳ : ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ..!!

ಗೆಳೆಯನಿಂದ ಕಿರುಕುಳ : ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ..!!

March 11, 2026
ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

March 10, 2026
ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

ಬಂಟ್ವಾಳದಲ್ಲಿ ಚಿನ್ನಾಭರಣ ಕಳ್ಳತನ ಪ್ರಕರಣ ಭೇದನೆ: ಮಧ್ಯಪ್ರದೇಶದ ಆರೋಪಿ ಬಂಧನ, 20 ಲಕ್ಷ ಮೌಲ್ಯದ ಚಿನ್ನಾಭರಣ ವಶ…!!!

March 10, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page