Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಹೊಸ ವರುಷದ ಆರಂಭವೇ ‘ಯುಗಾದಿ’ : ಕೊರೋನಾವೆಂಬ ಮಹಾಮಾರಿ ಭೂಮಿಯಿಂದ ತೊಲಗಿ ಸರ್ವರೂ ನೆಮ್ಮದಿಯ ಬದುಕುವಂತಾಗಲಿ..

April 13, 2021
in ಧಾರ್ಮಿಕ
0
ಹೊಸ ವರುಷದ ಆರಂಭವೇ ‘ಯುಗಾದಿ’ : ಕೊರೋನಾವೆಂಬ ಮಹಾಮಾರಿ ಭೂಮಿಯಿಂದ ತೊಲಗಿ ಸರ್ವರೂ ನೆಮ್ಮದಿಯ ಬದುಕುವಂತಾಗಲಿ..
Share on WhatsAppShare on FacebookShare on Twitter

“ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ-ಹೊಸಹರುಷವ ಹೊಸತು ಹೊಸತು ತರುತಿದೆ” – ದ.ರಾ.ಬೇಂದ್ರೆ , ಹೌದು.. ಪ್ರಕೃತಿಯು ತನ್ನ ಹಳೆಯ ತೊಗಲನ್ನು ಬಿಟ್ಟು ಹೊಸತೊಗಲನ್ನು ಮೈವೆತ್ತುತ್ತಾ ಬರುವ ಈ ಸುಸಮಯದಲ್ಲಿ ಇಡೀ ನಾಡು ಹೊಸತನದ ಗೆಟಪ್ಪಿನಲ್ಲಿದೆ. ಗಿಡ-ಮರ-ಬಳ್ಳಿಗಳು ತಮ್ಮ ಹಳೆಯ ರೂಪವನ್ನು ಬದಲಾಯಿಸಿಕೊಂಡು ಹೊಂಬಣ್ಣದ ಚಿಗುರೆಲೆಯನ್ನು ಹೊದ್ದು ಚಿನ್ನಾಟವಾಡುತ್ತಾ ತೂಗಾಡುತ್ತಿವೆ. ಸಂತನ ಆಗಮನದಿಂದ ಪುಳಕಿತರಾದಂತೆ ಇಡೀ ನಾಡು ತೋರುತ್ತಿದೆ. ಇಂತಹ ಹೊತ್ತಲ್ಲಿ ಇದಕ್ಕೆ ಸೆಡ್ಡು ಹೊಡೆಯುವಂತೆ ಸೂರ್ಯನು ತನ್ನ ರಣಬಿಸಿಲಿನಝಳವನ್ನು ತೋರುತ್ತಾ ಕುಹಕವಾಡುವಂತೆ ಜನರು ಬೆವರಲ್ಲಿ ಮೀಯುತ್ತಾ ಬಸವಳಿದಿದ್ದಾರೆ.

Advertisement
Advertisement

ಆದರೂ ವಸಂತ ಋತುವಿನ ಚೆಲುವು, ಮೋಹಕತೆಗೆ ಆನಂದ ತುಂದಿಲರಾಗಿದ್ದಾರೆ. ಅಲ್ಲದೆ, ಬಿಸಿಲ ಬೇಗೆಯ ನಿವಾರಣೆಗೆ ಮದ್ದೆಂಬಂತೆ ಹೊಂಗೆಯ ನೆರಳು, ತುಂಗೆಯ ಕಂಪು, ಬೇವು-ಮಾವುಗಳ ಗೊಂಚಲು- ಗೊಂಚಲುಗಳ ತೊನೆದಾಟ ಬಸವಳಿದ ಮನಕ್ಕೆ ಉಲ್ಲಾಸ ನೀಡುವಂತಿದೆ. ಬಿಸಿಲ ಬೇಗೆಯನ್ನು ತುಂಗೆ ಹೂವಿನ ಕಂಪು, ಮರಿದುಂಬಿಗಳ ಝೇಂಕಾರ, ಹೊಂಗೆ ಮರದ ನೆರಳು ಕೊಂಚ ತಗ್ಗಿಸುವಂತಿವೆ… ಭಾರತೀಯ ಸಂಸ್ಕೃತಿಯಲ್ಲಿ ‘ಯುಗಾದಿ ಹಬ್ಬ’ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ.

Advertisement

ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣ ಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸ ವರುಷದ ದಿನವು ‘ಯುಗಾದಿ’ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಹೀಗೆ, ಯುಗಾದಿ ಹಬ್ಬವು ಜನರಲ್ಲಿ ಸಂಭ್ರಮ-ಸಡಗರ ನೀಡುವ ಜೊತೆಗೆ ಅವರ ಮನದಲ್ಲಿ ಹೊಸಭರವಸೆ, ಆಶಯ, ಗುರಿ, ಉದ್ದೇಶ, ಬಯಕೆ, ಕನಸನ್ನು ಚಿಗುರಿಸುತ್ತಾ ನವವರುಷಕ್ಕೆ ಆಶಾಕಿರಣವಾಗಿ ಬರುತ್ತಿದೆ; ಬಂದಿದೆ. ಗ್ರಾಮೀಣರ ಆಡುಮಾತಿನಲ್ಲಿ ಹೇಳುವುದಾದರೆ, ಯುಗಾದಿಯು “ಉಗಾದಿ” ಎನಿಸಿಕೊಳ್ಳುತ್ತದೆ. ಉಗಾದಿ ಹಬ್ಬವು ಶಿಶಿರ ಋತು ಕಳೆದು ವಸಂತನಾಗಮನದ ಮೊದಲ ಹಬ್ಬ. ಇದು ಭಾರತೀಯರ ಪಾಲಿಗೆ ‘ನವ ಮನ್ವಂತರ’. ಅಲ್ಲದೆ, ಇದು ಭಾರತೀಯರಾದ ನಮ್ಮ ಪಾಲಿಗೆ ‘ಹೊಸವರುಷ‘ದ ಮೊದಲ ದಿನ.

ಯುಗಾದಿಯಂದು ಹರಳೆಣ್ಣೆಯನ್ನು ಮೈ- ಕೈಗೆ ಹಚ್ಚಿಕೊಂಡು, ಸ್ನಾನಮಾಡಿ, ಹೊಸಬಟ್ಟೆ ತೊಟ್ಟು ಸಂಭ್ರಮಿಸುವುದು ವಾಡಿಕೆ. ಅಲ್ಲದೆ ಅಂದು ಜೀವನದ ಸಮನ್ವಯ ಸೂತ್ರದ ಸಂಕೇತವಾದ ‘ಬೇವು-ಬೆಲ್ಲ ತಿನ್ನುವುದು’ ಒಂದು ಸತ್ಸಂಪ್ರದಾಯಕ್ಕೆ ಬರೆದ ಮುನ್ನುಡಿಯಾಗುತ್ತದೆ. ಬೇವು-ಬೆಲ್ಲ ತಿನ್ನುವುದರ ಮೂಲ ಉದ್ದೇಶವಿಷ್ಟೆ; ಕಷ್ಟ-ಸುಖ, ನೋವು ನಲಿವು ಪ್ರತಿಯೊಬ್ಬರ ಬಾಳಲ್ಲಿ ಸಮನಾಗಿರಲಿ ಎಂಬುದು. ಇಂಥ ಸದ್ಭಾವನೆಯನ್ನು ಯುಗಾದಿ ಎಲ್ಲರಿಗೂ ತಿಳಿಸುತ್ತದೆ.

ನಲಿವಿನ ಧ್ಯೋತಕ-ಯುಗಾದಿ: ಭಾರತೀಯ ಸಂಸ್ಕೃತಿಯಲ್ಲಿ ‘ಯುಗಾದಿ ಹಬ್ಬ’ಕ್ಕೆ ತನ್ನದೇ ಆದ ಒಂದು ಅತ್ಯುನ್ನತವಾದ ಸಾಂಸ್ಕೃತಿಕ ಮಹತ್ವವಿದೆ. ಆದುದರಿಂದ ಭಾರತೀಯರು ಅದರಲ್ಲೂ ದಕ್ಷಿಣಭಾರತದವರಲ್ಲಿ ಕರ್ನಾಟಕದ ಜನರು ತಮ್ಮ ಹೊಸವರುಷದ ದಿನವು ‘ಯುಗಾದಿ’ಯ ದಿನದಿಂದಲೇ ಆರಂಭವಾಗುತ್ತದೆ ಎಂದು ನಂಬುತ್ತಾರೆ. ಅದಕ್ಕಾಗಿಯೇ ಅಂದು ತಮ್ಮ ನೆಂಟರಿಷ್ಟರು, ಬಂಧು- ಬಾಂಧವರು, ಕುಟುಂಬವರ್ಗದವರೆಲ್ಲರೂ ಒಂದೆಡೆ ಸೇರಿ ಯುಗಾದಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ತೊಡಗುತ್ತಾರೆ. ಅದಕ್ಕಾಗಿಯೇ ದೊಡ್ಡ ಮರಗಳಿಗೆ ಜೋಕಾಲಿಗಳನ್ನು ಕಟ್ಟಿ ಉಯ್ಯಾಲೆಯಾಡುತ್ತಾ ಕೇಕೆ ಹಾಕಿ ಸಂಭ್ರಮಿಸುತ್ತಾ, ಖುಷಿಪಡುತ್ತಾರೆ. ಇಂತಹ ಸಂಭ್ರಮದ ನೋಟಗಳನ್ನು ಕಾಣಬೇಕಾದರೆ ಗ್ರಾಮೀಣ ಭಾಗಕ್ಕೇ ಹೋಗಬೇಕು. ಆದರೆ, ಶುದ್ಧ ಮನರಂಜನಾತ್ಮಕವಾದ ಇಂಥ ಸಂಭ್ರಮದ ನೋಟಗಳು ನೋಡಲು ಇಂದು ವಿರಳವಾಗಿವೆ.

ಒಲವು ವೃದ್ಧಿಯ ಯುಗಾದಿ: ನಾವು ಸಂಬಂಧಗಳನ್ನೇ ಅನುಮಾನದಿಂದ ನೋಡುವಂತಹ ಪರಿಸ್ಥಿತಿಯ ದಿನಮಾನದಲ್ಲಿ ಯುಗಾದಿ ಹಬ್ಬವು, ಪರಸ್ಪರರಲ್ಲಿ ಒಲವು ವೃದ್ಧಿಸುವಂತಹ ಆಚರಣೆಯಾಗಿದೆ. ಕೆಲಸ-ಕಾರ್ಯದ ಕಾರಣದಿಂದಲೋ ಮತ್ಯಾವುದೋ ಕಾರಣದಿಂದಲೋ ಅಪರೂಪಕ್ಕೆ ಒಂದೆಡೆ ಸೇರುವ, ವೈಮನಸ್ಸಿನ ಕಾರಣದಿಂದಲೋ ದೂರಾಗಿರುವ ಸಂಬಂಧಿಕರನ್ನು ಮತ್ತೆ ಒಂದೆಡೆ ಸೇರಿಸುವಲ್ಲಿ ಇಂತಹ ಹಬ್ಬ-ಆಚರಣೆಗಳು ಸಹಕಾರಿಯಾಗುತ್ತವೆ.


ಸಹಬಾಳ್ವೆ-ಸಮನ್ವಯಕ್ಕೆ ನಾಂದಿ: ಯುಗಾದಿ ಹಬ್ಬದಂದು ಬೇವು-ಬೆಲ್ಲ ತಿನ್ನುವ ಆಚರಣೆಯು ಒಂದು ವಿಶಿಷ್ಟ ಪರಿಕಲ್ಪನೆಯೇ ಸರಿ. ಸಿಹಿ-ಕಹಿ, ಸುಖ-ಕಷ್ಟ, ನಲಿವು-ನೋವು ಎಂಬ ಮಾತಿನಂತೆ, ಜೀವನದಲ್ಲಿ
ಇವೆರಡರ ಸಮಾನ ಇರುವಿಕೆ ಅಗತ್ಯವಾಗಿದೆ. ಆಗ ಮಾತ್ರ ಜೀವನ ಸುಗಮವಾಗಿ ಸಾಗಲು ಸಾಧ್ಯ. ಆದರೆ, ಕಷ್ಟಕ್ಕಿಂತ ಸುಖವೇ ಬೇಕು ಎಂದು ಬಯಸುವವರು ಹೆಚ್ಚಿರುವ ಪರಿಸ್ಥಿತಿಯಲ್ಲಿ ಕಷ್ಟವನ್ನು, ಕಹಿಯನ್ನು, ನೋವನ್ನು ಬಯಸುವವರೇ ಇಲ್ಲವೆನ್ನುವಂತಾಗಿದೆ. ಆದರೆ, ಜೀವನ ಎನ್ನುವುದು ಕಷ್ಟ-ಸುಖಗಳ ಸಂಯೋಜನೆಯಾಗಿದೆ. ಹಾಗಾಗಿ, ಇವೆರಡು ಒಂದನ್ನೊಂದು ಬಿಟ್ಟಿರಲಾರವು. ಇವು ಒಂಥರಾ ಕತ್ತಲು-ಬೆಳಕು, ರಾತ್ರಿ-ಹಗಲು ಹೇಗೆ ಒಂದನೊಂದು ಬಿಟ್ಟಿರಲಾರವೋ ಹಾಗೆಯೇ ಕಷ್ಟವಿಲ್ಲದೆ, ಸುಖವಿಲ್ಲ; ಸುಖವಿಲ್ಲದೆ ಕಷ್ಟವಿಲ್ಲ ಎಂಬುದು ಸತ್ಯವಾಗಿದೆ. ಈ ಆಶಯದಂತೆ ನಾವು ಯುಗಾದಿ ಹಬ್ಬದಲ್ಲಿ ಬೇವು- ಬೆಲ್ಲವನ್ನು ಹಂಚಿ ತಿನ್ನುತ್ತೇವೆ.

ಕೂಡಿ ಬಾಳಿದರೆ ಸ್ವರ್ಗಸುಖ ಎಂಬುದು ಯುಗಾದಿ ಹಬ್ಬದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ಜೀವನದಲ್ಲಿ ಏನೇ ಏರುಪೇರಾದರೂ ಸರ್ವರೂ ಸುಖದಿಂದ, ಸಮನ್ವಯದಿಂದ, ಒಟ್ಟಾಗಿ ಬಾಳಬೇಕೆನ್ನುವ ಆಶಯವೂ ಇದರಲ್ಲಿದೆ. ಆ ಮೂಲಕ ಸ್ವರ್ಗಕ್ಕೆ ಕಿಚ್ಚುಹಚ್ಚುತ್ತಾ ಬಾಳುವೆ ನಡೆಸಬೇಕು. ‘ಸುಖಜೀವನ’ ನಡೆಸುವುದೇ ಸ್ವರ್ಗದ ಹೋಲಿಕೆಗಿರುವ ಮತ್ತೊಂದು ಶಬ್ದ. ಇಂತಹ ಉತ್ತಮೋತ್ತಮ ನಡೆ, ಗುಣಗಳನ್ನು, ಬಿತ್ತುವುದಕ್ಕೆ ಯುಗಾದಿ ನಾಂದಿಯಾಗಲಿದೆ. ಜನರಲ್ಲಿ ಹಳತಾದುದರ ಕೊನೆಯೇ ಹೊಸತನಕ್ಕೆ ಆರಂಭ. ನಾವು ಯಾವುದೇ ಹೊಸದು ಬಂದಮೇಲೆ ಹಳೆಯದರ ಕುರಿತು ಅಸಡ್ಡೆ ಹೊಂದುವುದು ಸಾಮಾನ್ಯ. ಆದರೆ, ಹೊಸತಾದುದು ಬರಲು ಹಳೆಯದು ಅವಕಾಶ ಮಾಡಿಕೊಡದಿದ್ದರೆ ಹೊಸದು, ಹೊಸತನ ಬರಲು ಹೇಗೆ ಸಾಧ್ಯ? ಆದುದರಿಂದ ಹೊಸತನದ, ಹೊಸದರ ಆರಂಭವಾಗಲು ‘ಹಳೆಯದರ’ ಪಾಲು, ಸಹಾಯ, ಸಹಕಾರ ಪ್ರಮುಖವಾಗಿದೆ. ಹಾಗಾಗಿ, ಹೊಸತು-ಹಳತು ಎಂಬುವು ಪ್ರಕೃತಿಯ ಬದಲಾವಣೆಯ ಎರಡು ಮುಖಗಳು.

ಇವೆರಡರಲ್ಲಿ ಯಾವುದಿರದಿದ್ದರೂ ಮತ್ತೊಂದಕ್ಕೆ ಬೆಲೆಯಿರುವುದಿಲ್ಲ. ಈ ವಿಷಯವಾಗಿ ಯುಗಾದಿ ಹಬ್ಬವು ಮೌನವಾಗಿಯೇ ಜನರಲ್ಲಿ ಅರಿವನ್ನು ಮೂಡಿಸುತ್ತದೆ. ಅದಕ್ಕೆಂತಲೇ ಯುಗಾದಿ ಅಂದರೆ, ಮತ್ತೊಂದು ಯುಗದ ಆದಿ; ಆರಂಭ; ಮನ್ವಂತರದ ಬದಲಾವಣೆಯ ಕಾಲ. ಈ ನವಮನ್ವಂತರವು ಸಕಲ ಜೀವಾತ್ಮರಿಗೂ ಲೇಸನ್ನು ತರಲಿ ಎಂಬುದು ಎಲ್ಲರ ಆಶಯವಾಗಲಿ; ಅದು ಪ್ರತಿಯೋರ್ವರ ಆತ್ಮಸಿದ್ಧಿಯ ಭಾವಮಂತ್ರವಾಗಲಿ.

ಯುಗಾದಿ ಹಬ್ಬದ ಶುಭಾಶಯಗಳು…

Advertisement
Advertisement
Advertisement
Advertisement
Previous Post

ಪುತ್ತೂರು : ಶ್ರೀ ದೇವರ ಪೇಟೆ ಸವಾರಿಯಲ್ಲಿ ಶಾಸಕ ಸಂಜೀವ ಮಠಂದೂರು ಭಾಗಿ

Next Post

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ : (ಏ.22) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವರಮಾರು ಗದ್ದೆಯಿಂದ ಹಸಿರುವಾಣಿ ಹೊರಕಾಣಿಕೆ ಹಾಗೂ ನಾಗಬೆರ್ಮೆರ ಮೂರ್ತಿಯ ಭವ್ಯ ಮೆರವಣಿಗೆ

OtherNews

ಪುರುಷರಕಟ್ಟೆ: ಹಿಂ.ಜಾ.ವೇ.ಶಿವಾಜಿ ಶಾಖೆ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ
ಧಾರ್ಮಿಕ

ಪುರುಷರಕಟ್ಟೆ: ಹಿಂ.ಜಾ.ವೇ.ಶಿವಾಜಿ ಶಾಖೆ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ

January 30, 2023
ಪಡುಮಲೆ : ದೇವಿ ಸಾನಿಧ್ಯದಲ್ಲಿ ಬೆಳಕಿನ ವಿಸ್ಮಯ ; ತೆಂಗಿನ ನೀರು ಬಿದ್ದರೂ ಪ್ರಜ್ವಲಿಸಿದ ಆರತಿ
ಧಾರ್ಮಿಕ

ಪಡುಮಲೆ : ದೇವಿ ಸಾನಿಧ್ಯದಲ್ಲಿ ಬೆಳಕಿನ ವಿಸ್ಮಯ ; ತೆಂಗಿನ ನೀರು ಬಿದ್ದರೂ ಪ್ರಜ್ವಲಿಸಿದ ಆರತಿ

January 29, 2023
(ಜ.28) ಪುರುಷರಕಟ್ಟೆ: ಹಿಂ.ಜಾ.ವೇ.ಶಿವಾಜಿ ಶಾಖೆ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ
ಧಾರ್ಮಿಕ

(ಜ.28) ಪುರುಷರಕಟ್ಟೆ: ಹಿಂ.ಜಾ.ವೇ.ಶಿವಾಜಿ ಶಾಖೆ ವತಿಯಿಂದ ಸಾರ್ವಜನಿಕ ಶ್ರೀ ದುರ್ಗಾ ಪೂಜೆ ಮತ್ತು ಅನ್ನಸಂತರ್ಪಣೆ

January 27, 2023
ಶ್ರೀ ಶಾರದಾ ವನಿತಾ ಭಜನಾ ಮಂಡಳಿ ರಾಮನಗರದ ದಶಮಾನೋತ್ಸವ : ದಶಗೃಹ ಸಂಕೀರ್ತನಾ ಕಾರ್ಯಕ್ರಮದ ಅಂಗವಾಗಿ ಸಮಾರೋಪ ಸಮಾರಂಭ
ಧಾರ್ಮಿಕ

ಶ್ರೀ ಶಾರದಾ ವನಿತಾ ಭಜನಾ ಮಂಡಳಿ ರಾಮನಗರದ ದಶಮಾನೋತ್ಸವ : ದಶಗೃಹ ಸಂಕೀರ್ತನಾ ಕಾರ್ಯಕ್ರಮದ ಅಂಗವಾಗಿ ಸಮಾರೋಪ ಸಮಾರಂಭ

January 23, 2023
ವಿಟ್ಲ: ಜಾತ್ರೆಯಲ್ಲಿ ಅನ್ಯಮತೀಯ ವ್ಯಕ್ತಿಯಿಂದ ವ್ಯಾಪಾರಕ್ಕೆ ಯತ್ನ : ಹಿಂ.ಜಾ.ವೇ.ಯಿಂದ ತಡೆ
Featured

ವಿಟ್ಲ: ಜಾತ್ರೆಯಲ್ಲಿ ಅನ್ಯಮತೀಯ ವ್ಯಕ್ತಿಯಿಂದ ವ್ಯಾಪಾರಕ್ಕೆ ಯತ್ನ : ಹಿಂ.ಜಾ.ವೇ.ಯಿಂದ ತಡೆ

January 20, 2023
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಯಾಗ
ಧಾರ್ಮಿಕ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಯಾಗ

January 18, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

February 1, 2023
ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

February 1, 2023
ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

February 1, 2023
ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

February 1, 2023

Recent News

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

February 1, 2023
ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

February 1, 2023
ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

February 1, 2023
ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

February 1, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page