ಪುತ್ತೂರು: ಮೂಲದ ಹಿಂದೂ ಯುವತಿಯೋರ್ವಳು ಬೆಂಗಳೂರು ಮೂಲದ ಅನ್ಯಕೋಮಿನ ಯುವಕನನ್ನು ವಿವಾಹವಾಗಲು ನಿಶ್ಚಯಿಸಿರುವ ಬಗ್ಗೆ ವರದಿಯಾಗಿದೆ.
ಪುತ್ತೂರು ದರ್ಬೆ ಮೂಲದ ಅಕ್ಷತಾ ಕೆ (34) ಎಂಬ ಹಿಂದೂ ಯುವತಿ, ಬೆಂಗಳೂರು ನ್ಯಾನಪ್ಪನ ಹಳ್ಳಿ ನಿವಾಸಿ ಶೇಖ್ ಮೊಹಮ್ಮದ್ ಸಲೀಂ (44) ಎಂಬ ಅನ್ಯಕೋಮಿನ ಯುವಕನನ್ನು ವಿವಾಹವಾಗಲು ನಿಶ್ಚಯಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಕ್ಷತಾ ಮತ್ತು ಶೇಖ್ ಮೊಹಮ್ಮದ್ ಸಲೀಂ ನ.9 ರಂದು ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ರಿಜಿಸ್ಟರ್ ವಿವಾಹವಾಗಿದ್ದು, ವಿವಾಹ ಪತ್ರವು ದೃಢೀಕರಣಕ್ಕಾಗಿ ಪುತ್ತೂರು ರಿಜಿಸ್ಟರ್ ಆಫೀಸ್ ಗೆ ಬಂದಿದ್ದು, ಈ ವಿವಾಹಕ್ಕೆ ಸ್ಪೆಷಲ್ ಮ್ಯಾರೇಜ್ ಆಕ್ಟ್ ನಂತೆ ಆಕ್ಷೇಪಣೆ ಸಲ್ಲಿಸಲು 30 ದಿನಗಳ ಕಾಲವಧಿಯನ್ನು ನೀಡಲಾಗಿದೆ.
ಇವರ ಮದುವೆಯ ರಿಜಿಸ್ಟರ್ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್’ ಎಂದು ಆರೋಪಿಸಿದ್ದಾರೆ. ಹಿಂದೂ ಯುವತಿಯರನ್ನು ಪ್ರೀತಿಯ ಮೂಲಕ ತಮ್ಮ ಬಲೆಗೆ ಹಾಕಿಕೊಂಡು, ಮದುವೆಯಾಗುವ ಮೂಲಕ ಮತಾಂತರ ಮಾಡಿ ಅವರನ್ನು ಹಿಂದೂ ಧರ್ಮದಿಂದ ಅನ್ಯಮತಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿದ್ದು, ಇದೊಂದು ವ್ಯವಸ್ಥಿತ ‘ಲವ್ ಜಿಹಾದ್’ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.