Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

    ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

    ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಗೋಳ್ತಮಜಲು: ಸರಕಾರಿ ಪ್ರೌಢಶಾಲೆಯಲ್ಲಿ ‘ಕಲಿಕಾಹಬ್ಬ’

    ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ

    ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಮಂಗಳೂರು

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ..! ಟೀಕೆಗಳ ಎದುರಿಸಿ ಸಾಧಿಸುವ ಕಿಚ್ಚು ಬರಲಿ…

April 21, 2021
in ಮಂಗಳೂರು
0
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ..! ಟೀಕೆಗಳ ಎದುರಿಸಿ ಸಾಧಿಸುವ ಕಿಚ್ಚು ಬರಲಿ…
Share on WhatsAppShare on FacebookShare on Twitter

ಚಳಿಗಾಲ ಬಂದಾಗ, ‘ಎಷ್ಟು ಚಳಿ’ ಎಂದರು,
ಬಂತಲ್ಲ ಬೇಸಿಗೆ, ‘ಕೆಟ್ಟ ಬಿಸಿಲೆಂ’ದರು,
ಮಳೆ ಬಿತ್ತೊ, ‘ಬಿಡದಲ್ಲ ಶನಿ !’ ಎಂಬ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ!

Advertisement
Advertisement

ಚಿಗುರ ಚಿನ್ನದ ನಡುವೆ ಹೂವ ಬಯಸುವರು,
ಹೂಗಳ ಕಾಲದಲಿ ಹಣ್ಣ ಹೊಗಳುವರು,
‘ಹಣ್ಣಿನ ಗಾತ್ರ ಪೀಚು’ ಎಂದಿವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !

Advertisement

ನಿಂತರೆ ಕೇಳುವರು, ನೀನೇಕೆ ನಿಂತೆ?
ಮಲಗಿದರೆ ಗೊಣಗುವರು, ನಿನಗಿಲ್ಲ ಚಿಂತೆ!
ಓಡಿದರೆ ಬೆನ್ನ ಹಿಂದೆಯೇ ಇವರ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ, ಜೋಕೆ !

ಓದಿದರೆ ಹೇಳುವರು, ಮತ್ತೊಮ್ಮೆ ಬರೆಯೊ!
ಬರೆದಿಡಲು ಬೆದಕುವರು, ಬರವಣಿಗೆ ಸರಿಯೊ?
ಇವರ ಬಯಕೆಗಳೇನೋ ಇವರದೇ ಟೀಕೆ,
ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ !!! ಕೆ ಎಸ್ ನರಸಿಂಹಸ್ವಾಮಿ…

ಆಹಾ! ಈ ಸಾಲುಗಳನ್ನು ಗಮನವಿಟ್ಟು ಓದೋಣ.. ಬಹುಶಃ ಜೀವನ ಅಂದ್ರೆ ಇದೇ ಅಲ್ವಾ?.. ಏನೇ ಮಾಡೋಣ, ಅಲ್ಲೊಂದು ಮಾತು ಇದ್ದೇ ಇರುತ್ತೆ.. ಎಲ್ಲರೂ ಹೊಗಳಿಕೆ ಬಯಸೋದಿಲ್ಲ ಆದರೆ ಪ್ರತಿಯೊಬ್ಬರ ಕಾರ್ಯದಲ್ಲೂ ಏನೋ ಒಂದು ರೀತಿಯ ಕನಸು ಇದ್ದೇ ಇರುತ್ತದೆ.. ಆ ಕನಸು ಬೆಳೆಯಬೇಕೆಂಬ ಆಸೆಯೂ ಇರುತ್ತೆ.. ಆದ್ರೆ ಸಾಮಾಜಿಕವಾಗಿ ನೋಡಿದರೆ ಇಲ್ಲಿ ಟೀಕೆಗಳೇ ಬಲವಾಗಿರುತ್ತದೆ..ಈಗಂತೂ ನೋಡಿದಕ್ಕೊಂದು ಕಮೆಂಟ್ ಮಾಡಿಬಿಡಬೇಕೆನ್ನುವ ಧಾವಂತ.. ಅದರಲ್ಲೂ ನೆಗೆಟಿವ್ ಆಗಿ ಕಮೆಂಟ್ ಮಾಡಿದರೆ ಎಲ್ಲರ ಮುಂದೆ ಹೀರೋಗಳಾಗುತ್ತೇವೆ ಅನ್ನುವ ಭಂಡ ಧೈರ್ಯ ಇರುತ್ತದೋ ಏನೋ? ಅದೂ ಗೊತ್ತಿಲ್ಲ… ಧನಾತ್ಮಕ ಭಾವಕ್ಕಿಂತ ಇರುವ ಪುಟ್ಟ ತಪ್ಪನ್ನೇ ಹಿಡಿದು ಕಮೆಂಟ್ ಮಾಡಿಬಿಡುವ ಕೆಟ್ಟ ಅಭ್ಯಾಸ ಆವರಿಸಿಬಿಟ್ಟಿದೆ…

ತಪ್ಪು ಮನುಷ್ಯ ಮಾಡದೆ ಬೇರಾರು ಮಾಡಲು ಸಾಧ್ಯವಿಲ್ಲ.. ಹಾಗಂತ ಮನುಷ್ಯನ ಉತ್ತಮತೆಯನ್ನು ಎತ್ತಿ ಹಿಡಿದು, ಆದ ತಪ್ಪುಗಳನ್ನು ಮೆಲುದನಿಯಿಂದಲೇ ಹೇಳಿ ಸರಿಪಡಿಸುವ ನೈಪುಣ್ಯತೆ ಇರಬೇಕೇ ಹೊರತು ಅದನ್ನೇ ಹೇಳಿ ಹೇಳಿ, ಅದಕ್ಕೊಂದಷ್ಟು ತಾನೇ ಮೇಧಾವಿ ಅನ್ನುತ್ತಾ ಟೀಕೆ ಮಾಡಿದರೇನು ಫಲ? ಇದು ಅಕ್ಷರಸ್ಥರ ಕಾಲ.. ಧಮ್ಕಿ ಹಾಕಿದಾಕ್ಷಣ ಅದನ್ನೇ ಕೇಳಿಕೊಂಡು ಮರುಮಾತಾಡದೆ ಕೈ ಕಟ್ಟಿ ಕೂರುವವರಂತೂ ಯಾರೂ ಇಲ್ಲಿಲ್ಲ.. ಪ್ರತಿಯೊಬ್ಬರಿಗೂ ಆತ್ಮಾಭಿಮಾನ-ಆತ್ಮಗೌರವ ಮುಖ್ಯವಾಗುತ್ತದೆ.. ಹಾ…. ಕಮೆಂಟ್ ಮಾಡೋರಿಗೂ ಕೂಡಾ ಒಮ್ಮೆಗೆ ಕಮೆಂಟ್ ಮಾಡಿಬಿಡೋದು ಸುಲಭ.. ಆದರೆ ಅಂತಹದೇ ವಿಚಾರ, ಅಂತಹದೇ ಸಂದರ್ಭ ತಮ್ಮ ಬುಡಕ್ಕೆ ಬಂದಾಗಲಷ್ಟೇ ಆ ಕಮೆಂಟ್ ಹಿಂದಿನ ಸತ್ಯ, ನೋವುಗಳು ಏನು ಎಂಬುದು ಅರ್ಥವಾಗುವಂಥದ್ಧು..

ಈಗಂತೂ ಬಹಳಷ್ಟು ಜನರು ಸೋಶಿಯಲ್ ಮೀಡಿಯಾ ಮೂಲಕ ಯಾರದ್ದೋ ಬದುಕನ್ನು ನಾಶ ಮಾಡೋಕೂ ಹೇಸುವವರಿಲ್ಲ.. ಆದರೆ ಸೋಶಿಯಲ್ ಮೀಡಿಯಾ ಉತ್ತಮತೆಯನ್ನು ಬಿತ್ತರಿಸುವ ಮಾಧ್ಯಮವಾಗಬೇಕೇ ಹೊರತು ಯಾರದ್ದೋ ಬದುಕಿನ ಸಂತಸವನ್ನು ಕಿತ್ತುಕೊಳ್ಳುವಂತಾಗಬಾರದು.. ಅರೆ! ಈ ಮಾತು ಯಾಕೆ ಅನ್ನೋ ಪ್ರಶ್ನೆ ಬಂದ್ರೆ ಸಹಜಾನೇ ಬಿಡಿ.. ಯಾಕಂದ್ರೆ ಈಗ ಟ್ರೆಂಡ್ ಇಲ್ಲೇ ಇರೋದು.. ವ್ಯಕ್ತಿ ತನ್ನ ಸಂತಸ, ತನ್ನ ಕಾರ್ಯ, ತನ್ನ ಸಾಧನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಬಿತ್ತರಿಸುತ್ತಾನೆ.. ಆದರೆ ಕೆಲಸವಿಲ್ಲದವರೋ ಅಥವಾ ಕೆಲಸವಿದ್ದೂ ಯಾರದ್ದಾದರೂ ಕಾಲೆಳೆಯಬೇಕು ಅನ್ನೋ ಮನಸಿರೋರೋ ಎಷ್ಟೇ ಚೆನ್ನಾಗಿದ್ದರೂ ಅಲ್ಲಿ ತಪ್ಪು ಹುಡುಕಿಯೇ ಸಿದ್ದ ಅನ್ನೋ ಧೋರಣೆ… ಅವರಾಸೆಯಂತೆ ತಪ್ಪೇನೋ ಹುಡುಕಿ, ಅದನ್ನ ಪಬ್ಲಿಕ್ ಆಗಿ ಬರೆದು ಹಾಕಿ, ಆ ಮೂಲಕ ತಾನೇನೋ ಮೇಧಾವಿ ಆಗೋಕೆ ಹೊರಡ್ತಾರೆ.. ಇನ್ನೊಬ್ಬರಿಗೆ ಸಂಸ್ಕೃತಿ ಪಾಠ ಮಾಡೋದು ಅಂತಾರೆ.. ಆದರೆ ಈ ರೀತಿ ಅಸಂಬದ್ಧವಾಗಿ ಇನ್ನೊಬ್ಬರ ಕಾರ್ಯವನ್ನು ಟೀಕಿಸುವ ಅಧಿಕಾರ ನಮ್ಮ ಸುಸಂಸ್ಕೃತ ಸಮಾಜ ಕೊಟ್ಟಿಲ್ಲ ಅನ್ನೋದು ಅವರಿಗೂ ಗೊತ್ತಿಲ್ಲ🤗😊..

ಇನ್ನೊಬ್ಬರ ಬಟ್ಟೆ, ಇನ್ನೊಬ್ಬರ ಮಾತು, ಇನ್ನೊಬ್ಬರ ನಗು ನೋಡಿ ಇನ್ನೇನೋ ಹೇಳೋದು, ಯಾರೋ ಸೈಲೆಂಟ್ ಇರ್ತಾರೆ ಅಂದ ಕೂಡಲೇ ಅವರಿಗೆ ಅಹಂ ಅನ್ನೋದು, ಯಾರೋ ಜೀವನದಲ್ಲಿ ತನ್ನ ಪಾಡಿಗೆ ಇರಬೇಕು ಅನ್ಕೊಳ್ಳೋರಿಗೆ ‘ಹಿಂದಿದ್ದಂತೆ ಈಗ ಇಲ್ಲ- ತಲೆಯಲ್ಲಿ ಬೇಜಾನ್ ತುಂಬ್ಕೊಂಡಿದೆ’ ಅನ್ನೋದು, ಎಲ್ಲಿಗಾದರೂ ಹೋದರೆ ಅಲ್ಲೂ ಕಮೆಂಟ್, ದಪ್ಪ ಇದ್ದರೆ “ಡುಮ್ಮಿ”, ತೆಳ್ಳಗಿದ್ದರೆ “ಇವಳಿಗೇನು ಊಟ ಹಾಕಲ್ವಾ” ಹೀಗೆ ಒಂದಷ್ಟು ಶಾರೀರಿಕ ಅಭಿಪ್ರಾಯ, ಯಾರನ್ನೋ ಹೋಗಿ “ಅವಳು ಹೇಗೆ” ಅಂತ ಪ್ರಶ್ನಿಸಿದಾಗ “ಹೋ ಅವಳಾ? ಅಹಂಕಾರಿ, ಸರಿ ಇಲ್ಲ” ಅನ್ನೋದು.ಇನ್ನೂ ಒಂದು “ಅವಳನ್ನು ಸಾಕೋದೇ ಕಷ್ಟ ಮಾರ್ರೆ” ಅಂದು ಬಿಡೋದು.. ಹೀಗೆ ಪಟ್ಟಿ ಮಾಡಿದ್ರೆ ಇಲ್ಲಿ ಯಾವುದಕ್ಕೆ ಕಮೆಂಟ್ ಇಲ್ಲ ಹೇಳಿ..ಕೊರತೆಗಳ ಸಾಲು ಎದ್ದು ಕಾಣುತ್ತದೆ…

ಹಾಗ್ ನೋಡೋಕ್ ಹೋದರೆ ಪರ್ಫೆಕ್ಟ್ ಆಗಿರಬೇಕು ಅಂತ ಎಷ್ಟೇ ಅಂನ್ಕೊಂಡ್ರೂ ತಪ್ಪುಗಳು ಆಗೇ ಆಗುತ್ತೇ. ನಾನು ತಪ್ಪೇ ಮಾಡಿಲ್ಲ ಅಂದ್ರೆ ಏನನ್ನೂ ಕಲಿಯುವುದು ಇಲ್ಲ.. ಈ ಥರ ಇದ್ರೆ ಜೀವನದ ಅನುಭವವೂ ಇಲ್ಲ.. ಇನ್ನೊಬ್ಬರ ಖರ್ಚು, ಇನ್ನೊಬ್ಬರ ಫ್ಯಾಶನ್, ಇನ್ನೊಬ್ಬರ ವ್ಯಕ್ತಿತ್ವ ಅಳತೆ ಮಾಡುವ ಅಧಿಕಾರ ಇಲ್ಲ.. ನಾವೇನೂ ಅನ್ನೋದನ್ನ ನೋಡ್ಕೊಂಡ್ರೆ ನಮ್ಮ ತಪ್ಪುಗಳನ್ನು ತಿದ್ಕೊಬೋದು.. ಅದು ಬಿಟ್ಟು ಇನ್ನೊಬ್ಬರು ಅವಳನ್ನು ಸಾಕೋದ್ ಕಷ್ಟ ಅನ್ನೋಕೆ ಸಾಕೋರು ಅವಳ ಮನೆಯವರಾಗಿರ್ತಾರೆಯೇ ಹೊರತು ಹೊರಗಿನವರಲ್ಲ.. ಅವಳು ಅಥವಾ ಅವನು ದುಡಿದದ್ದರಲ್ಲಿ ಬದುಕು ಸಾಗಿಸುತ್ತಾರೆಯೇ ಹೊರತು ಹೊರಗಿನಿಂದಲ್ಲ.. ಸಾಧ್ಯವಾದರೆ ಇನ್ನೊಬ್ಬರಿಗೆ ಖುಷಿ ನೀಡುವವರಾಗಬೇಕು, ಬದಲಾಗಬೇಕಾಗಿರುವುದು ಇಂತಹ ವಿಚಾರಗಳಲ್ಲೇ.. ಎಷ್ಟೇ ವಿದ್ಯಾವಂತರಾದರೂ ಇವತ್ತಿಗೂ ಇನ್ನೊಬ್ಬರ ಬಗ್ಗೆ ಕಮೆಂಟ್ ಪಾಸಿಂಗ್, ಕಾಲ್ ಮಾಡಿ ‘ಲೇ ಅವನು ಹಾಗಂತೆ, ಇವಳ ಕಥೆ ಹೀಗಂತೆ’ ಅಂತೆಲ್ಲಾ ಅಂದು ಹುಳಿ ಹಿಂಡುವ ಕೆಲಸಕ್ಕೆ ಪೂರ್ಣವಿರಾಮ ಬಿದ್ದಿಲ್ಲ.. ಈ ಅಂತೆ ಕಂತೆಗಳ ನಡುವೆ ಜೀವನ ಪೂರ್ತಿ ಕಳೆದೇ ಹೋಗುತ್ತೆ..

ಜೀವನ ಯಾನ ಸಿಹಿಕಹಿಗಳ ಮಿಶ್ರಣ.. ಪ್ರತಿ ಹೆಜ್ಜೆಯಲ್ಲೂ ನೆಗೆಟಿವ್ ಪಾಸಿಟಿವ್ ವಿಚಾರಗಳ ಸಮ್ಮಿಲನ.. ಹಾಗಂತ ನೆಗೆಟಿವಿಟಿ ಬದಲಾಗೋಕೆ ಸಾಧ್ಯ ಇಲ್ಲ ಅನ್ಕೊಂಡ್ರೆ ತಪ್ಪು ಕಲ್ಪನೆ.. ಪ್ರತಿಯೊಬ್ಬರೂ ಇನ್ನೊಬ್ಬರ ಬಗ್ಗೆ ಟೀಕಿಸುವ ಬದಲಾಗಿ ತನ್ನತನವನ್ನು ನೋಡಿಕೊಂಡಾಗ ಸರ್ವರೂ ಸರ್ವವೂ ಬದಲಾಗಲೇಬೇಕಲ್ಲ… ಇಷ್ಟು ಪೀಟಿಕೆಗಿಂತ ಕೆ ಎಸ್ ನರಸಿಂಹಸ್ವಾಮಿಯವರ ಕವನ ಅರ್ಥವಾಗುವವರಿಗೆ ಸಾಕೆನಿಸುತ್ತೆ.. ಯಾರೂ ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ.. ಹಾಗಂತ ಟೀಕೆಗಳಿಗೆ ಕಿವಿಗೊಡದೆ ಮುಂದೆ ಸಾಗಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ.ಯಾರೆಷ್ಟೇ ಗೋಗರೆದರೂ, ಕವನ, ಲೇಖನ ಬರೆದರೂ ಟೀಕೆ ನಿಲ್ಲೋದಿಲ್ಲ, ಹಾಗಾಗಿ ಸಾಧಿಸುವ ಮೂಲಕ ಟೀಕೆಗೆ ವಿದಾಯ ಹೇಳೋಕೆ ಸಾಧ್ಯವಿದೆ………

🖋️🖋️ಪ್ರಜ್ಞಾ ಓಡಿಲ್ನಾಳ

Advertisement
Advertisement
Advertisement
Advertisement
Previous Post

ಆನ್​ಲೈನ್​ ಆರ್ಡರ್​ ಮಾಡಿ ಪಿಜ್ಜಾ ಸವಿದವರ ಡೇಟಾ ಸೋರಿಕೆ

Next Post

(ಎ.28) ಪುತ್ತೂರು : ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ

OtherNews

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು
ಮಂಗಳೂರು

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

February 1, 2023
ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!
ಮಂಗಳೂರು

ಮಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ವಿಶೇಷಚೇತನ ಯುವತಿಯ ಮೃತದೇಹ ಪತ್ತೆ : ಕೊಲೆ ಶಂಕೆ..!!

February 1, 2023
ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸೋ ಅಧಿಕಾರ ಸರ್ಕಾರಕ್ಕೆ ಇಲ್ಲ- ಹೈಕೋರ್ಟ್​ ಆದೇಶ
ಮಂಗಳೂರು

ಸುಳ್ಯದ ಉದ್ಯಮಿಯ ಕೊಲೆ ಪ್ರಕರಣ: ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸಮನ್ಸ್‌

February 1, 2023
ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು..!!? ಅಧ್ಯಯನಕ್ಕೆ ಸಮಿತಿ ರಚನೆ
ಮಂಗಳೂರು

ರಾಜ್ಯದ ಎರಡನೇ ಅಧಿಕೃತ ಭಾಷೆಯಾಗುತ್ತಾ ತುಳು..!!? ಅಧ್ಯಯನಕ್ಕೆ ಸಮಿತಿ ರಚನೆ

February 1, 2023
ಮಂಗಳೂರು: ಮೊಬೈಲ್ ನೋಡಲು ಬಿಡಲಿಲ್ಲವೆಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಬಾಲಕ..!!
ನಿಧನ

ಮಂಗಳೂರು: ಮೊಬೈಲ್ ನೋಡಲು ಬಿಡಲಿಲ್ಲವೆಂದು ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಬಾಲಕ..!!

February 1, 2023
ದ.ಕ. : ಪುತ್ತೂರು, ಬಂಟ್ವಾಳ, ವಿಟ್ಲ ಸೇರಿದಂತೆ ಹಲವು ಕಡೆ ಕಾರ್ಯನಿರ್ವಹಿಸುತ್ತಿರುವ ಪಿ.ಎಸ್.ಐ ಗಳ ವರ್ಗಾವಣೆ..!!
ಪುತ್ತೂರು

ದ.ಕ. : ಪುತ್ತೂರು, ಬಂಟ್ವಾಳ, ವಿಟ್ಲ ಸೇರಿದಂತೆ ಹಲವು ಕಡೆ ಕಾರ್ಯನಿರ್ವಹಿಸುತ್ತಿರುವ ಪಿ.ಎಸ್.ಐ ಗಳ ವರ್ಗಾವಣೆ..!!

February 1, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

February 1, 2023
ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

February 1, 2023
ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

February 1, 2023
ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

February 1, 2023

Recent News

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

ಪುತ್ತೂರು: ಕೇಂದ್ರ ಸಚಿವ ಅಮಿತ್ ಶಾ ರವರಿಗೆ ಸ್ವಾಗತ ಕೋರಿ ಬೃಹತ್ ಫ್ಲೆಕ್ಸ್ ಅಳವಡಿಕೆ : ಅರುಣ್ ಕುಮಾರ್ ಪುತ್ತಿಲ ರವರ ಹೆಸರಿನಲ್ಲಿ ಫ್ಲೆಕ್ಸ್ ಅಳವಡಿಸಿದ ಅಭಿಮಾನಿಗಳು

February 1, 2023
ಜಾಲ್ಸೂರು : ದಾರಿ ಮಧ್ಯೆ ಕಾರು ತಡೆದು ಮಹಿಳೆಯ ಮೇಲೆ ಹಲ್ಲೆಗೆ ಯತ್ನಿಸಿದ ಪತಿ : ಪೊಲೀಸ್ ಆಗಮಿಸುತ್ತಿದ್ದಂತೆ ಪರಾರಿ..!!

ವಿಟ್ಲ ಮೂಲದ ಬಿಜೆಪಿ ಮುಖಂಡನಿಗೆ ಪತ್ನಿ ಜೊತೆ ಅನೈತಿಕ ಸಂಬಂಧ ಆರೋಪ ; ಪತಿಯಿಂದ ಡಿವೈಎಸ್ಪಿ ಗೆ ದೂರು

February 1, 2023
ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

ಪ್ರಚೋದನಕಾರಿ ಭಾಷಣ ಆರೋಪ: ಶರಣ್ ಪಂಪ್ವೆಲ್ ವಿರುದ್ದ ಎಫ್​ಐಆರ್​ ದಾಖಲು

February 1, 2023
ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

ಕೊಲೆಯಲ್ಲಿ ಅಂತ್ಯವಾಯ್ತು ಪ್ರೀತಿ : ಬೆಂಗಳೂರಲ್ಲಿ ಕಿಡ್ನಾಪ್, ಮರ್ಡರ್ ; ಚಾರ್ಮಾಡಿ ಘಾಟ್ ನಲ್ಲಿ ಮೃತದೇಹ..!!

February 1, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page