ಮಂಗಳೂರು : ನಗರದ ಹಂಪನಕಟ್ಟೆಯಲ್ಲಿರುವ ಆಭರಣ ಮಳಿಗೆಯಲ್ಲಿ ನೌಕರನನ್ನು ಇರಿದು ಕೊಂದ ದುಷ್ಕರ್ಮಿಯ ಇನ್ನಷ್ಟು ಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
![](https://zoomintv.online/wp-content/uploads/2023/02/1-ab-465x465-1.jpg)
“ಚಿನ್ನ ಖರೀದಿಸುವವರ ಸೋಗಿನಲ್ಲಿ ಬಂದು ಆಭರಣ ಅಂಗಡಿಯೊಳಗಿನ ಸಿಬಂದಿ ರಾಘವೇಂದ್ರ ಆಚಾರ್ ಅವರನ್ನು ಇರಿದು ಕೊಲೆ ಮಾಡಿದ್ದಾರೆ. ವ್ಯಕ್ತಿಯ ಭಾವಚಿತ್ರವು ಸಿಸಿಟಿವಿಗಳಲ್ಲಿ ದಾಖಲಾಗಿರುವ ಚಿತ್ರಗಳಲ್ಲಿ ಕಂಡುಬಂದಿದ್ದು, ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಲ್ಲಿ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿಗಳ ಮೊಬೈಲ್ ಫೋನ್ ಸಂಖ್ಯೆಗೆ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.
ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು’ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
![](https://zoomintv.online/wp-content/uploads/2023/02/pro-1.webp)
ಮಾಹಿತಿದಾರರು ಈ ಕೆಳಗಿನ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ:
ಎಸಿಪಿ ಸಿಸಿಬಿ, ಮಂಗಳೂರು ನಗರ – ಪಿ ಎ ಹೆಗ್ಡೆ (9945054333)
ಎಸಿಪಿ ಕೇಂದ್ರ ಉಪ ವಿಭಾಗ, ಮಂಗಳೂರು ನಗರ, ಮಹೇಶ್ ಕುಮಾರ್ – (9480805320)