ಬೆಂಗಳೂರು: ಕಾಂತಾರ ಸಿನಿಮಾದ ವರಾಹ ರೂಪಂ ಹಾಡಿಗೆ ನೃತ್ಯ ಮಾಡುತ್ತಿದ್ದಾಗ ವಿದ್ಯಾರ್ಥಿ ಮೇಲೆ ಪಂಜುರ್ಲಿ ದೈವ ಆವಾಹನೆ ಆದಂತಹ ಘಟನೆ ಹೊಂಬೇಗೌಡ ಕಾಲೇಜು ವಾರ್ಷಿಕೋತ್ಸವದಲ್ಲಿ ನಡೆದಿದೆ.
ನೃತ್ಯ ಮಾಡುತ್ತಿದ್ದ ವಿದ್ಯಾರ್ಥಿ ವೇದಿಕೆ ಮೇಲಿಂದ ಕೆಳಗೆ ಬಂದು ಆರ್ಭಟಿಸಿದಾಗ ಎಲ್ಲರೂ ದಂಗಾಗಿದ್ದಾರೆ.
ಗಾಯಿತ್ರಿ ನಗರದಲ್ಲಿರುವ ಹೊಂಬೇಗೌಡ ಕಾಲೇಜಿನಲ್ಲಿ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದ್ವಿತೀಯ ಪಿಯು ವಿದ್ಯಾರ್ಥಿ ವಿಶಾಲ್ ಕಾಂತಾರ ಸಿನಿಮಾದ ಹಾಡಿಗೆ ನೃತ್ಯ ಮಾಡಲು ಬಂದಿದ್ದಾರೆ. ವರಾಹ ರೂಪಂ ಹಾಡು ಶುರುವಾಗುತ್ತಿದ್ದಂತೆ ಪಂಜುರ್ಲಿ ದೈವ ಆವಾಹನೆ ಆದಂತೆ ಕಂಡು ಬಂದರು.
ಪಂಜುರ್ಲಿ ದೈವದ ವೇಷ ಧರಿಸಿದ್ದ ವಿಶಾಲ್ ವೇದಿಕೆ ಮೇಲಿಂದ ಕೆಳಗೆ ಬಂದು ಕಾಂತಾರ ಸಿನಿಮಾದ ರೀತಿಯಲ್ಲೇ ನರ್ತಿಸಿದ್ದಾರೆ. ಕೂಡಲೇ ಅಲ್ಲಿದ್ದ ನಾಲ್ಕೈದು ಜನ ವಿಶಾಲ್ನನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ.
ಕೊನೆಗೆ ವರಾಹ ರೂಪಂ ಹಾಡನ್ನೇ ಆಯೋಜಕರು ನಿಲ್ಲಿಸಿದ್ದಾರೆ. ವಿದ್ಯಾರ್ಥಿ ವಿಶಾಲ್ನ ಆರ್ಭಟಕ್ಕೆ ಕಾಲೇಜು ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಶಾಕ್ ಆಗಿದ್ದಾರೆ..