ಪುತ್ತೂರು: ತಾಲೂಕು ನಿಡ್ಪಳ್ಳಿ ಗ್ರಾಮದ ತಂಬುತ್ತಡ ಗುಡ್ಡ ಸ್ಥಳದಲ್ಲಿ ಅಕ್ರಮವಾಗಿ ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಮಾಹಿತಿಯಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಸೊತ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಲೊಕೇಶ್ ಅನಂತಾಡಿ, ಹೇಮನಾಥ ಆರ್ಲಪದವು, ಸಂತೋಷ ಕೌಡಿಚ್ಚಾರು, ಸದಾನಂದ ಅರಿಯಡ್ಕ, ಉಮೇಶ ನಿಡ್ಪಳ್ಳಿ, ಸತೀಶ್ ಶೆಟ್ಟಿ ಸಾಲೆತ್ತೂರು ಬಂಧಿತರು.
ಆರೋಪಿಗಳಿಂದ ಸ್ಯಾಮ್ಸಂಗ್ ಕಂಪನಿಯ 2 ಫೋನ್ಗಳು, ಅಂದಾಜು ಮೌಲ್ಯ 5000/-ಒಪ್ಪೋ ಕಂಪನಿಯ ಫೋನ್ 1, ಒಪ್ಪೋ ಕಂಪನಿಯ ಫೋನ್ 1, ವಿವೋ ಕಂಪನಿಯ ಮೊಬೈಲ್ 01, ಮೈಕ್ರೋ ಕಂಪನಿಯ ಮೊಬೈಲ್ 01 ಹಾಗೂ 35710/- ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ..