ಸರಕಾರ ಲಾಕ್ ಡೌನ್ ಜಾರಿಗೊಳಿಸಿರುವುದು ಉತ್ತಮ ನಿರ್ಧಾರ. ಪ್ರಸ್ತುತ ಸಂದರ್ಭದಲ್ಲಿ ಅದರ ಅನಿವಾರ್ಯತೆಯಿದೆ. ಆದರೂ ಲಾಕ್ ಡೌನ್ ಜಾರಿಯಿಂದ ಜನ ಸಾಮಾನ್ಯರಿಗಾಗುವ ತೊಂದರೆಗಳ ಕುರಿತು ಸಮಾಲೋಚನೆ ನಡೆಸಿ ಜಾರಿಗೊಳಿಸಬೇಕಿತ್ತು.
ಕೃಷಿಕರು, ಕೃಷಿ ಕಾರ್ಮಿಕರು, ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಆಲೋಚಿಸಿ ಜಾರಿಗೊಳಿಸಿದರೆ ಜನರಿಗೆ ಅನುಕೂಲವಾಗುತ್ತಿತ್ತು. ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿದೆ. ಕೋವಿಡ್ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದರ ಜೊತೆಗೆ ಅವಶ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಹೋಗಬೇಕು. ಕೊರೊನಾಕ್ಕೆ ಭಯ ಪಡಬೇಕಾದ ಅವಶ್ಯಕತೆಯಿಲ್ಲ, ಇದಕ್ಕಿಂತ ದೊಡ್ಡ ಮಾರಕ ಕಾಯಿಲೆಗಳು ಈ ಹಿಂದೆ ಬಂದು ಹೋಗಿವೆ. ನಾವು ಜಾಗ್ರತರಾಗಬೇಕಾಗಿರುವುದು ಅವಶ್ಯಕ, ಸರಕಾರದ ಜೊತೆಗೆ ನಾವು ಸ್ಪಂದಿಸಬೇಕು.
✒️. ಸಂತೋಷ್ ಭಂಡಾರಿ, ಸಂಚಾಲಕರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ