ಪುತ್ತೂರು : ಮನೆಯೊಂದರ ಬೀಗ ಮುರಿದು ಹಾಡಹಗಲೇ ಕಳ್ಳತನ ನಡೆಸಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ.
![](https://zoomintv.online/wp-content/uploads/2023/05/IMG-20230529-WA0057-768x1024.jpg)
ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೌನಿಶ್ ಎಂಬವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.
![](https://zoomintv.online/wp-content/uploads/2023/05/IMG-20230529-WA0056-768x1024.jpg)
ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.
ಬೆಳಿಗ್ಗೆ ಮನೆಯವರು ಬೀಗ ಹಾಕಿ ಕೆಲಸದ ನಿಮಿತ್ತ ಹೊರ ಹೋಗಿದ್ದು, ಮನೆ ಮಂದಿ ತಿರುಗಿ ಬಂದಾಗ ಮನೆ ಹಿಂಭಾಗ ಬೀಗ ಮುರಿದು ಕಳ್ಳರು ಒಳಹೊಕ್ಕು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ.
![](https://zoomintv.online/wp-content/uploads/2023/05/IMG-20230529-WA0058-1024x576.jpg)
ಮನೆಯ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಯುತ್ತಿದೆ.
![](https://zoomintv.online/wp-content/uploads/2023/05/IMG-20230529-WA0054-768x1024.jpg)
![](https://zoomintv.online/wp-content/uploads/2023/05/IMG-20230529-WA0055.jpg)
![](https://zoomintv.online/wp-content/uploads/2023/05/IMG-20230529-WA0058-1-1024x576.jpg)