ಪುತ್ತೂರು : ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರವು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದು, ಕೊರೋನ ಹರಡುವಿಕೆ ಹೆಚ್ಚಾಗಿದ್ದರೂ ಜನ ಇನ್ನೂ ಕ್ಯಾರೇ ಎನ್ನದೆ ಬೇಕಾ ಬಿಟ್ಟಿಯಾಗಿ ಪೇಟೆಗೆ ಬರುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಗೆ ಬರುವ ಜನರನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪುತ್ತೂರು ಪೇಟೆಯಲ್ಲಿ ಪೊಲೀಸರು ಬ್ಯಾರಿಕೇಡ್ ಇಟ್ಟು ವಾಹನಗಳಲ್ಲಿ ಪೇಟೆಗೆ ಬರುವವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಪುತ್ತೂರಿನಲ್ಲಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. 12 ಆಟೋ,9 ಬೈಕ್, 2 ಕಾರ್ ಗಳನ್ನು ಸೀಜ್ ಮಾಡಲಾಗಿದೆ.
ಅನಗತ್ಯ ಓಡಾಟ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಿನ್ನೆ ಪೊಲೀಸರು ಪ್ರಕಟಣೆ ನೀಡಿದ್ದರು ಆದರೆ ಇಂದು ಜನ ಅದನ್ನು ಕ್ಯಾರೇ ಅನ್ನದೇ ಪೇಟೆಗೆ ಬಂದಿದ್ದು, ಪೇಟೆಯಲ್ಲಿ ಅಧಿಕ ವಾಹನ ಸಂಚಾರವೂ ಕಂಡು ಬಂದಿತು.
ರಿಕ್ಷಾ ಬಾಡಿಗೆ ಮಾಡುವಂತಿಲ್ಲ:
ಆಟೋ ರಿಕ್ಷಾಗಳು ತುರ್ತು ಸೇವೆ ಹೊರತು ಇತರ ಬಾಡಿಗೆ ಮಾಡುವಂತಿಲ್ಲ. ಬಾಡಿಗೆಗಾಗಿ ಪಾರ್ಕ್ನಲ್ಲಿ ನಿಲ್ಲಿಸುವಂತಿಲ್ಲ. ಹಾಗಾಗಿ ಸುಮಾರು 12 ಆಟೋ ರಿಕ್ಷಾಗಳನ್ನು ಪೊಲೀಸರು ಮುಟ್ಟುಗೋಲು ಹಾಕಿದ್ದರು. ಬಳಿಕ ಠಾಣೆಯಲ್ಲಿ ದಂಡ ವಸೂಲಿ ಪ್ರಕ್ರಿಯೆ ಮಾಡಿ ಬಿಡುಗಡೆಗೊಳಿಸಿದ್ದಾರೆ.