Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

    ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪುತ್ತೂರು : ಹಾಲಿ ಶಾಸಕರಿಂದ ಶಿಷ್ಟಾಚಾರ ಉಲ್ಲಂಘನೆ, ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡಿಕೆ ಆರೋಪ ; ಸ್ಪಷ್ಟನೆ ನೀಡುವಂತೆ ಬಿಜೆಪಿ ಶಕ್ತಿ ಕೇಂದ್ರ ಆಗ್ರಹ

January 10, 2024
in ಪುತ್ತೂರು, ರಾಜಕೀಯ
0
ಪುತ್ತೂರು : ಹಾಲಿ ಶಾಸಕರಿಂದ ಶಿಷ್ಟಾಚಾರ ಉಲ್ಲಂಘನೆ, ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡಿಕೆ ಆರೋಪ ; ಸ್ಪಷ್ಟನೆ ನೀಡುವಂತೆ ಬಿಜೆಪಿ ಶಕ್ತಿ ಕೇಂದ್ರ ಆಗ್ರಹ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು : ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಶಾಂತಿಗೋಡು ಮತ್ತು ನರಿಮೊಗರು ಗ್ರಾಮದ ಸಂಪರ್ಕ ಕೊಂಡಿಯಾಗಿ ಅಂದ್ರಟ್ಟ ಎಂಬಲ್ಲಿ ಸೇತುವೆಗೆ ಮಾಜಿ ಶಾಸಕರು ಈ ಹಿಂದೆ ಅನುದಾನ ಇರಿಸಿ, ಟೆಂಡರ್ ಆಗಿ ಶಿಲಾನ್ಯಾಸ ಆಗಿದ್ದರೂ ಮತ್ತೊಮ್ಮೆ ಹಾಲಿ ಶಾಸಕರು ಅಲ್ಲಿ ಶಿಲಾನ್ಯಾಸ ಮಾಡುವ ಮೂಲಕ ಹಾಲಿ ಶಾಸಕರು ಶಿಲಾನ್ಯಾಸಗಳ ಹೈಜಾಕ್ ಮಾಡಿದ್ದಲ್ಲದೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡುವ ಮೂಲಕ ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ಶಕ್ತಿ ಕೇಂದ್ರ ಆರೋಪಿಸಿದೆ.

Advertisement
Advertisement

ಇದು ಖಾಸಗಿ ಕಾಯಕ್ರಮವೋ, ಸರಕಾರಿ ಕಾರ್ಯಕ್ರಮವೊ, ಅಥವಾ ನಿಮ್ಮ ಅನುದಾನದಿಂದ ಆಗುವ ಕಾಮಗಾರಿಯೋ ಎಂದು ಶಾಸಕರು ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಚಿಕ್ಕಮುಡ್ನೂರು ಮತ್ತು ಶಾಂತಿಗೋಡು ಹಾಗೂ ನರಿಮೊಗರು ಗ್ರಾಮದ ಶಕ್ತಿಕೇಂದ್ರದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

Advertisement

ಬಿಜೆಪಿ ಚಿಕ್ಕಮುಡ್ನೂರು ಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್‌. ಅವರು ಮಾತನಾಡಿ, ಅಂದ್ರಟ್ಟ ಭಾಗದಿಂದ ಜಿಡೆಕಲ್ಲು ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಹೋಗಲು ಮತ್ತು ಇತ್ತಿಂದತ್ತ ಹೋಗಲು ಒಂದು ಸಂಪರ್ಕ ರಸ್ತೆ ಇರಲಿಲ್ಲ. ಹಲಗೆ ಜೋಡಿಸಿ ನೀರು ಶೇಖರಣೆ ಮಾಡುವ ಹಳೆ ಕಿಂಡಿಅಣೆಕಟ್ಟು ಮಾತ್ರ ಇತ್ತು. ಅದು ಕೂಡಾ ಮಳೆಗಾಲದಲ್ಲಿ ಅಲ್ಲಿ ಅಪಾಯವಿತ್ತು. ಆ ಭಾಗದ ಜನರು ಚುನಾವಣೆ ಸಂದರ್ಭ ಮತಚಲಾಯಿಸಲು ಸುತ್ತಿ ಬಳಸಿ ಬರಬೇಕಾಗಿತ್ತು. ಈ ನಿಟ್ಟಿನಲ್ಲಿ ಆ ಭಾಗದ ಜನರು ಚುನಾವಣೆ ಬಹಿಷ್ಕಾರ ಕೂಡಾ ಹಾಕಿದ್ದರು. ಈ ನಡುವೆ ಕಿಂಡಿ ಅಣೆಕಟ್ಟುವಿನಲ್ಲಿ ಹಲವು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಕಾಲುಜಾರಿ ಬಿದ್ದು ನೀರು ಪಾಲಾಗಿ ಮೃತಪಟ್ಟಿದ್ದರು. ಅದಾದ ಬಳಿಕ ಈ ಭಾಗದ ಸಮಸ್ಯೆಗಳ ಬಗ್ಗೆ ವರದಿಯೂ ಬಂದಿತ್ತು.

ಬಿಜೆಪಿಯಿಂದ ನಾವೆಲ್ಲ ಆ ಭಾಗಕ್ಕೆ ಸೇತುವೆ ನಿರ್ಮಾಣ ಮಾಡುವ ಕುರಿತು ಆಗಿನ ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿ ಮಾಡಿದ್ದೆವು. ಆಗ ಅಲ್ಲಿ ರಸ್ತೆಗೆ ಸ್ಥಳೀಯರು ಜಮೀನು ಬಿಟ್ಟುಕೊಡುವಂತೆ ಅಲ್ಲಿನ ಪ್ರಮುಖ ಜನರ ಮನವೊಲಿಸಲಾಯಿತು.

ಕಾಕತಾಳೀಯವಾಗಿ ಮುಗೇರಡ್ಕ ತೂಗುಸೇತುವೆಯ ರೂ. 3 ಕೋಟಿ ಅನುದಾನವನ್ನು ಶಾಸಕ ಸಂಜೀವ ಮಠಂದೂರು ಅವರು ಅಂದ್ರಟ್ಟ ಮತ್ತು ಬಜತ್ತೂರು ಗ್ರಾಮದ ಕೂವೆಚ್ಚಾರಿಗೆ ಇರಿಸಿದ್ದರು. ಅನುದಾನದ ಟೆಂಡ‌ರ್ ಕೃಷ್ಣಮೂರ್ತಿ ಎಂಬವರಿಗೆ ಆಗಿತ್ತು. ಈ ನಿಟ್ಟಿನಲ್ಲಿ 2023ರ ಮಾರ್ಚ್ 19ಕ್ಕೆ ಸಂಜೀವ ಮಠಂದೂರು ಅವರ ಮೂಲಕ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಶಿಲಾನ್ಯಾಸವಾದ ಬಳಿಕ ಗುತ್ತಿಗೆದಾರರು ಕೂವೆಚ್ಚಾರು ಸೇತುವೆ ಪೂರ್ಣಗೊಳಿಸಿದ್ದಾರೆ. ಅಂದ್ರಟ್ಟ ಸೇತುವೆ ಕಾಮಗಾರಿ ವೇಳೆ ಮಳೆ ಬಂದ ಹಿನ್ನಲೆಯಲ್ಲಿ ಮತ್ತು ಅವರಿಗೆ ಮಾರ್ಚ್ ತಿಂಗಳ ಒಳಗೆ ಕಾಮಗಾರಿ ಮುಗಿಸುವ ಕಾಲಾವಕಾಶ ಇದ್ದರಿಂದ ಕಾಮಗಾರಿಯನ್ನು ಮಳೆ ಬಿಟ್ಟ ಮೇಲೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಕಾಮಗಾರಿ ಪ್ರಗತಿಯಲ್ಲಿದ್ದರೂ ಹಾಲಿ ಶಾಸಕರು ಮತ್ತೊಮ್ಮೆ ಅಂದ್ರಟ್ಟದಲ್ಲಿ ಶಿಲಾನ್ಯಾಸ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಮೂರು ಪಂಚಾಯತ್‌ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಈ ಸೇತುವೆ ಶಿಲಾನ್ಯಾಸ ಕಾರ್ಯಕ್ರಮ ಖಾಸಗಿಯೋ, ಸರಕಾರಿ ಕಾರ್ಯಕ್ರಮವೋ ಹಾಗೂ ಹಾಲಿ ಶಾಸಕರ ಅನುದಾನದಿಂದ ಆಗುವ ಕಾಮಗಾರಿಯೋ ಎಂದು ಸ್ಪಷ್ಟನೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಹಿಂದಿನ ಸರಕಾರ ಮಾಡಿದ ಕೆಲಸವನ್ನು ಹೈಜಾಕ್ ಮಾಡುವುದು ಬಿಟ್ಟು ಮೆಡಿಕಲ್ ಕಾಲೇಜು ತಿಂಗಳೊಳಗೆ ತರುತ್ತೇನೆಂದ ಶಾಸಕರು ಇನ್ನೂ ಅದರ ಬಗ್ಗೆ ಮಾತನಾಡಲಿ. ಶಿಲಾನ್ಯಾಸ ಮಾಡುವುದು ಬಿಟ್ಟು ಹಿಂದೆ ಮಾಡಿದ ಶಿಲ್ಯಾನ್ಯಾಸಕ್ಕೆ ಸಂಬಂಧಿಸಿ ಕಾಮಗಾರಿಗೆ ವೇಗ ಕೊಟ್ಟು ಅದರ ಉದ್ಘಾಟನೆ ಮಾಡಲಿ. ಆಗ ನಾವು ಅದಕ್ಕೆ ಬೆಂಬಲ ನೀಡುತ್ತೇವೆ ಎಂದು ನಾಗೇಶ್ ಟಿ.ಎಸ್ ಹೇಳಿದರು.

ಶಾಂತಿಗೋಡು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್ ಮಾತನಾಡಿ, ಶಿಲಾನ್ಯಾಸವನ್ನು ಮತ್ತೊಮ್ಮೆ ಮಾಡುವುದಾದರೆ ಅಲ್ಲಿ ಕಾಮಗಾರಿ ರೀ ಟೆಂಡ‌ರ್ ಆಗಿದ್ದರೆ ಮಾಹಿತಿ ನೀಡಿ. ಇಲ್ಲವಾದಲ್ಲಿ ಹಾಲಿ ಶಾಸಕರು ಮಾಡಿದ ಕೆಲಸವಾದರೂ ಏನು ಎಂಬುದನ್ನು ಮಾಹಿತಿ ನೀಡಲಿ ಎಂದು ಆಗ್ರಹಿಸಿದ್ದಾರೆ. ಈ ನಡುವೆ ಪುರುಷರಕಟ್ಟೆ ನರಿಮೊಗರು ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಗೆ ರೂ. 2.75 ಕೋಟಿ ಅನುದಾನ ತಂದಿದ್ದೇನೆ ಎಂದು ಬ್ಯಾನ‌ರ್ ಅಳವಡಿಸುತ್ತಿದ್ದಾರೆ. ಈ ಕುರಿತು ಕೂಡಾ ಅನುದಾನ ತಂದವರು ಯಾರು ಎಂದು ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನರಿಮೊಗರು ಪಂಚಾಯತ್‌ ಅಧ್ಯಕ್ಷೆ ಹರಿಣಿ, ನರಿಮೊಗರು ಪಂಚಾಯ್ ಸದಸ್ಯರು ಮತ್ತು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ರೈ ಶೇವಿರೆ, ಬನ್ನೂರು ಗ್ರಾ.ಪಂ ಸದಸ್ಯ ರಾಘವೆಂದ್ರ ಉಪಸ್ಥಿತರಿದ್ದರು.

Previous Post

ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್ ನಿಧನ

Next Post

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವರ ವಾರ್ಷಿಕ ಜಾತ್ರೆಗೆ ಗೊನೆ ಮುಹೂರ್ತ

OtherNews

ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!
Featured

ಉಪ್ಪಿನಂಗಡಿ:ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ: ಸವಾರ ಮೃತ್ಯು..!!

April 29, 2026
ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!
Featured

ಪುತ್ತೂರು : ಹಠಾತ್ ಆರೋಗ್ಯದಲ್ಲಿ ಏರುಪೇರು: ಮಹಿಳೆ ಮೃತ್ಯು..!!!

April 29, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ಮನೆಯ ಸಿಟೌಟ್‌ಗೆ ಬಂದು ಹಲ್ಲೆ : ಪ್ರಕರಣ ದಾಖಲು..!!

April 29, 2026
ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!
ಪುತ್ತೂರು

ಪುತ್ತೂರು: (ಎ.30) ವಿದ್ಯುತ್‌ ನಿಲುಗಡೆ..!!

April 29, 2026
ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!
Featured

ಪುತ್ತೂರು: ಕಾರಿಗೆ ನಕಲಿ ನಂಬರ್ : ಪ್ರಕರಣ ದಾಖಲು..!!

April 29, 2026
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Featured

ಪುತ್ತೂರು : ನಳ್ಳಿ ನೀರಿನ ವಿಚಾರದಲ್ಲಿ ಹಲ್ಲೆ ಆರೋಪ : ಪ್ರಕರಣ ದಾಖಲು..!!

April 29, 2026

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

ಬೆಳ್ತಂಗಡಿ : ಬೆಳಾಲು ವಿಷ ಸೇವಿಸಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೆ ಸಾವು

April 30, 2026
ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

ಮಾಣಿಲ : ಮಾತೃಭೂಮಿ ಯುವ ವೇದಿಕೆ ವತಿಯಿಂದ ಉಚಿತ ಪುಸ್ತಕ ವಿತರಣೆ ಮತ್ತು ಸನ್ಮಾನ ಸಮಾರಂಭ..!!

April 30, 2026
ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

ಪ್ರೀವೆಡ್ಡಿಂಗ್ ಶೂಟ್‌ಗೆ ಹೋಗುವಾಗ ಅಪಘಾತ : ಹಸೆಮಣೆ ಏರಬೇಕಿದ್ದ ವರ ಧಾರುಣ ಸಾವು..!!

April 30, 2026
(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

(ಮೇ.01): ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 22 ನೇ ವರ್ಷದ ನಿರಂತರ ಉಚಿತ ಮಾಸಿಕ ಆರೋಗ್ಯ ತಪಾಸಣಾ ಶಿಬಿರ

April 30, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.