ಪುತ್ತೂರು: ಕೊರೊನಾದಿಂದಾಗಿ ಮೃತ ಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಸ್ವತಃ ಶಾಸಕರೇ ಪಿಪಿಇ ಕಿಟ್ ಧರಿಸಿ ನಡೆಸಿದ ಘಟನೆ ಪುತ್ತೂರಿನಲ್ಲಿ ಜೂ.14 ರಂದು ನಡೆದಿದೆ.
ಚಿಕ್ಕಪುತ್ತೂರು ನಿವಾಸಿ ಕಾಂಚನ (52ವ) ಎಂಬವರು ಕೋವಿಡ್ ನಿಂದ ಜೂ.13 ರಂದು ರಾತ್ರಿ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು, ಅವರ ಅಂತ್ಯಸಂಸ್ಕಾರವನ್ನು ಇಂದು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ರವರು ಬಜರಂಗದಳದ ಕಾರ್ಯಕರ್ತರ ಜೊತೆಗೆ ತಾವು ಕೂಡ ಪಿಪಿಇ ಕಿಟ್ ಧರಿಸಿ ನೆರವೇರಿಸಿದರು.
ಕೊರೊನಾದಿಂದಾಗಿ ಸಾವನ್ನಪ್ಪಿದರೆ ಕುಟುಂಬಸ್ಥರೆ ದೂರ ಉಳಿಯುವಂತಹ ಈ ಸಂದರ್ಭದಲ್ಲಿ ಶಾಸಕರು ತಾವೇ ಅಂತ್ಯಸಂಸ್ಕಾರ ನೆರವೇರಿಸಿರುವುದು ಶ್ಲಾಘನೀಯವಾಗಿದೆ.