ಪುತ್ತೂರು: ಸದಾ ತುರ್ತು ಸೇವೆಯ ನಡುವೆಯೂ ಕೋವಿಡ್ ಸಂಕಷ್ಟಕ್ಕೆ ಒಳಗಾದವರ ಹಸಿವು ನೀಗಿಸುತ್ತಿರುವ ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಪಿ ಅವರು ಜೂ.೧೮ರಂದು ನರಿಮೊಗರು ಗ್ರಾಮದ ೧೨ ಕುಟುಂಬಗಳಿಗೆ ನಿತ್ಯ ಅಗತ್ಯದ ಬಳಕೆಯ ದಿನಸಿ ಸಾಮಾಗ್ರಿ ಒದಗಿಸಿದ್ದಾರೆ.
ಈಗಾಗಲೇ ಪ್ರಥಮ ಹಂತದಲ್ಲಿ ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ೧೨, ದ್ವಿತೀಯ ಹಂತದಲ್ಲಿ ಮತ್ತೆ ೧೨ ಕುಟುಂಬಗಳನ್ನು ಗುರುತಿಸಿ ಆಹಾರದ ವಸ್ತುಗಳನ್ನು ಪೂರೈಸಿದ ದಯಾನಂದ ಪಿ ಅವರು ಜೂ. ೧೮ರಂದು ನರಿಮೊಗರು ಗ್ರಾಮದ ಮುಕ್ವೆ, ಮಣಿಯ, ನಡುಗುಡ್ಡೆ, ಮುಗೆರಡ್ಕ ಪರಿರದಲ್ಲಿ ಕಡು ಬಡತನದಲ್ಲಿರುವ ೧೨ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿ ಒದಗಿಸಿದರು. ಈ ಸಂದರ್ಭದಲ್ಲಿ ನರಿಮೊಗರು ಗ್ರಾ.ಪಂ ಸದಸ್ಯ ಉಮೇಶ್, ರವಿ, ಸ್ಥಳಿಯರಾದ ರಮೇಶ್ ಅವರು ಸಹಕಾರ ನೀಡಿದರು.