ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಪೂರ್ವ ಸಂಪ್ರದಾಯದಂತೆ ನಾಳೆ, ಏಪ್ರಿಲ್ 16, 2026ರಂದು ಗುರುವಾರ ಸಂಜೆ 4:30ಕ್ಕೆ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಭಂಡಾರವು ಬಲ್ನಾಡು ದೈವಸ್ಥಾನದಿಂದ ಹೊರಡಲಿದೆ.
ಈ ಹಿನ್ನೆಲೆಯಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಬಲ್ನಾಡು ದೈವಸ್ಥಾನದಲ್ಲಿ ನಾಳೆ ವಿಶೇಷವಾಗಿ ಮಲ್ಲಿಗೆ ಹಾಗೂ ಹರಕೆ ಅರ್ಪಿಸಲು ಬೆಳಗ್ಗಿನಿಂದಲೇ ಅವಕಾಶ ಕಲ್ಪಿಸಲಾಗಿದೆ.
ಅರ್ಪಣೆ ಸಮಯಗಳು:
- ಬೆಳಿಗ್ಗೆ: 9:00 ರಿಂದ ಮಧ್ಯಾಹ್ನ 1:00ರವರೆಗೆ
- ಸಂಜೆ: 3:00 ರಿಂದ 5:00ರವರೆಗೆ
ಈ ಅವಧಿಯಲ್ಲಿ ಭಕ್ತರು ಮಲ್ಲಿಗೆ ಹರಕೆ ಅರ್ಪಿಸಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.
ಭಕ್ತಾದಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.




























