ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮನೆ ಗೊಂದು ಬಿಲ್ವಗಿಡ ವಿತರಣಾ ಕಾರ್ಯಕ್ರಮದ ಅಂಗವಾಗಿ ವಾರ್ಡ್ ಸಂಖ್ಯೆ 19 ರ ನಗರಸಭಾ ಸದಸ್ಯೆಯಾದ ವಿದ್ಯಾಗೌರಿ ಅವರಿಗೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮುಂಡ್ಯತ್ತಾಯ ದೈವಸ್ಥಾನದಲ್ಲಿ ಗಿಡಗಳನ್ನು ಹಸ್ತಾಂತರಿಸಿ ಬಿಲ್ವಗಿಡದ ಮಹತ್ವ ಹಾಗೂ ಗಿಡ ನೆಡುವ ವಿಧಾನವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಗೌರಿ ಸ್ವಾಗತಿಸಿದರು. ಮುಂಡ್ಯತ್ತಾಯ ದೈವಸ್ಥಾನದ ಉಪಾಧ್ಯಕ್ಷರು ವಂದಿಸಿದರು.