ಪಿಯುಸಿ ಓದಿ ಕರ್ನಾಟಕ ರಾಜ್ಯದಲ್ಲಿ ಸರಕಾರಿ ಉದ್ಯೋಗಕ್ಕೆ ಪ್ರಯತ್ನಿಸುವವರಿಗಾಗಿ KEA ಶುಭ ಸುದ್ದಿ ಒಂದನ್ನು ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 572 ಗ್ರಾಮಾಡಳಿತ ಅಧಿಕಾರಿ(VAO) ಹುದ್ದೆಗಳ ಬೃಹತ್ ನೇಮಕಾತಿಗಳಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದ್ದು,ಉದ್ಯೋಗ ಆಕಾಂಕ್ಷಿಗಳಲ್ಲಿ ಇದು ಹೊಸ ಸಂಚಲವನ್ನು ಮೂಡಿಸಿದೆ.
ದ್ವಿತೀಯ ಮುಗಿಸಿದ ಅಭ್ಯರ್ಥಿಗಳಿಗೆ ಇದು ಸರಕಾರಿ ಹುದ್ದೆಗೆ ಸೇರಲು ಅತ್ಯುತ್ತಮ ಸುವರ್ಣ ಅವಕಾಶವಾಗಿದೆ. ಪಿಯುಸಿ ಇಲ್ಲವೇ ತತ್ಸಮಾನ ವಿದ್ಯಾರ್ಹತೆ ಮುಗಿಸಿದವರಿಗೆ ಮಾತ್ರ ಅವಕಾಶವಿರುತ್ತದೆ .ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ 18 ವರ್ಷ ತುಂಬಿರಬೇಕು.
ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗ 40 ವರ್ಷಗಳು, OBCಯವರಿಗೆ 43 ವರ್ಷ ,SC/ST ಯವರಿಗೆ 45 ವರ್ಷಗಳು (ಮಾಜಿ ಸೈನಿಕರು/ ವಿಶೇಷ ಚೇತನರು /ವಿಧವೆಯರಿಗೆ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ)
ಅರ್ಜಿ ಸಲ್ಲಿಕೆಯ ಪ್ರಾರಂಭ ದಿನಾಂಕ 11-07-2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-07-2026
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾದ ಪುತ್ತೂರಿನಲ್ಲಿ ಇರುವ ವಿದ್ಯಾಮಾತ ಅಕಾಡೆಮಿಯ ನೇರ ಮತ್ತು ಆನ್ಲೈನ್ ತರಬೇತಿಯನ್ನು 05/08/2026 ರಿಂದ ಪ್ರಾರಂಭಿಸಲಿದ್ದು ಇವತ್ತಿನಿಂದಲೇ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ.
ಉದ್ಯೋಗಸ್ಥರಿಗೆ /ಗೃಹಿಣಿಯರಿಗೆ /ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾತ್ರಿ 8:00 ರಿಂದ 10:00ರ ವರೆಗೆ ಆನ್ಲೈನ್ ತರಬೇತಿಗಳನ್ನು ನೀಡಲಾಗುತ್ತದೆ .ನೇರ ತರಗತಿಗಳಿಗೆ ಹಾಜರಾಗುವವರು ಪುತ್ತೂರಿನ APMC ರಸ್ತೆಯಲ್ಲಿರುವ ವಿದ್ಯಾ ಮಾತಾ ಅಕಾಡೆಮಿಯಲ್ಲಿ ಬೆಳಿಗ್ಗೆ 9:30 ಯಿಂದ ಸಂಜೆ 4:00 ರವರೆಗೆ ಪಡೆದುಕೊಳ್ಳಬಹುದು. ವಾರಾಂತ್ಯ ತರಬೇತಿಗಳು ಕೂಡ ಲಭ್ಯವಿರುತ್ತದೆ .ಆಸಕ್ತರು ಹೆಚ್ಚಿನ ಮಾಹಿತಿಗಾಗಿ 9620468869 ಅಥವಾ 9945182516 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

























