ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿರುವ, ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರನ್ನಾಗಿ ಪುತ್ತೂರಿನ ಸಾಹಿತಿ, ಕವಿ ಮತ್ತು ಹಾಡುಗಾರ, ಕಮರುದ್ದೀನ್ ಸಾಲ್ಮರ ರವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ರಹೀಮ್ ಉಚ್ಚಿಲ್ ರವರು ನೇಮಕಗೊಳಿಸಿ ಆದೇಶಿಸಿದ್ದಾರೆ.
ಕಮರುದ್ದಿನ್ ಸಾಲ್ಮರ ರವರು ಹಲವಾರು ವರ್ಷಗಳಿಂದ ಸಾಹಿತ್ಯರಂಗದಲ್ಲಿ ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುತ್ತಾ ಭಾವನಾತ್ಮಕ ಹಾಗೂ ಸೌಹಾರ್ದ ಹಾಡುಗಳು ಮೂಲಕ ಪ್ರಸಿದ್ಧ ರಾಗಿರುತ್ತಾರೆ. ಇವರು ರಚಿಸಿ ಹಾಡಿದ “ಎವು ಡೆ ವುಳ್ಳೆ ನೀ” ಎಂಬ ಬ್ಯಾರಿ ಹಾಡುಗಳನ್ನು ಒಳಗೊಂಡ ಕ್ಯಾಸೆಟ್ ಈಗಲೂ ಜನಪ್ರಿಯವಾಗಿದೆ.
ಇವರು ಪುತ್ತೂರು ಸಾಲ್ಮರ ನಿವಾಸಿಯಾಗಿದ್ದು, ಸಾಲ್ಮರ ಮನೆತನದ ದಿವಂಗತ ಅಬ್ದುಲ್ ರಹಿಮಾನ್ ಹಾಗೂ ನಫೀಸಾ ದಂಪತಿಗಳ ಸುಪುತ್ರರಾಗಿರುತ್ತಾರೆ.