ಪುತ್ತೂರು: ಮುಂಬರುವ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ದೃಷ್ಟಿಯಿಂದ ಶಾಸಕರಾದ ಸಂಜೀವ ಮಠಂದೂರು ರವರ ಅಧ್ಯಕ್ಷತೆಯಲ್ಲಿ ತಾಲೂಕಿನ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ನಡೆಯಿತು.
![](https://zoomintv.online/wp-content/uploads/2021/07/WhatsApp-Image-2021-07-13-at-3.51.18-PM-1024x484.jpeg)
ಈ ಬಾರಿ ಪರೀಕ್ಷೆಯು ವಿಭಿನ್ನವಾಗಿ ನಡೆಯುವುದರಿಂದ ಮಾಡಬೇಕಾದ ವ್ಯವಸ್ಥೆಗಳು,ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು,ಪರೀಕ್ಷಾ ಕೇಂದ್ರಗಳ ಮೂಲಭೂತ ಸೌಕರ್ಯಗಳು,ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆಯ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್,ತಾಲೂಕು ವೈದ್ಯಾಧಿಕಾರಿ ಡಾ.ದೀಪಕ್ ರೈ,ನಗರ ಸಭೆಯ ಆಯುಕ್ತರಾದ ಮಧುಮನೋಹರ್, ಶಿಕ್ಷಣ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
![](https://zoomintv.online/wp-content/uploads/2021/07/WhatsApp-Image-2021-07-13-at-3.51.28-PM-1-1024x484.jpeg)
![](https://zoomintv.online/wp-content/uploads/2021/07/WhatsApp-Image-2021-07-13-at-3.51.28-PM-1024x484.jpeg)