ವಿಟ್ಲ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ನೀರ್ಕಜೆ ಕೃಷ್ಣ ಭಟ್ ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು.
![](https://zoomintv.online/wp-content/uploads/2021/07/WhatsApp-Image-2021-07-21-at-3.31.40-PM.jpeg)
ಮೃತರು ಬ್ರಹ್ಮಚರ್ಯವನ್ನು ಸ್ವೀಕರಿಸಿದ್ದರು, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನೇಕ ಹೋರಾಟಗಳನ್ನು ಮಾಡಿ ಸೇವೆಗೈದಿದ್ದರು. ಸಂಘದ ಅನೇಕ ಹಿರಿಯ ನಾಯಕರ ಸಂಪರ್ಕವನ್ನು ಹೊಂದಿದ್ದ ಕೃಷ್ಣಭಟ್ಟರು ಅಂದಿನ ಕಾಲದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.