ಕಳೆದ ಕೆಲವು ದಿನಗಳಿಂದ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕದ ಸಚಿವ ಸಂಪುಟ ವಿಸ್ತರಣೆಯೆ ಊಹಾಪೋಹಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಕೊನೆಗೂ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ನೂತನ ಸಚಿವರ ಪಟ್ಟಿ ಘೋಷಣೆ ಮಾಡಿದರು.
ಈ ಮೂಲಕ ಇಂದು ಒಟ್ಟು 29 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಬ್ರಿಗೇಡ್ನಲ್ಲಿ ಹಲವಾರು ಮಹತ್ತರದ ಬದಲಾವಣೆ ಮಾಡಲಾಗಿದೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಉಪ ಮುಖ್ಯಮಂತ್ರಿ ಸ್ಥಾನ ಈ ಬಾರಿ ಕ್ಯಾನ್ಸಲ್ ಮಾಡಲಾಗಿದೆ. ಬೊಮ್ಮಾಯಿ ಬ್ರಿಗೇಡ್ನಲ್ಲಿ ಯಾವುದೇ ಡಿಸಿಎಂಗಳು ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಬಿಎಸ್ವೈ ಸಂಪುಟದಲ್ಲಿ ಮೂರು ಡಿಸಿಎಂಗಳ ಹುದ್ದೆ ನಿರ್ಮಿಸಲಾಗಿತ್ತು. ಈ ಬಾರಿ ಈ ಸಂಖ್ಯೆ ಐದಕ್ಕೆ ಏರುವ ಸಾಧ್ಯತೆ ಇತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಊಹಾಪೋಹಕ್ಕೆ ಇದೀಗ ಬ್ರೇಕ್ ಬಿದ್ದಿದೆ.
6 ಸಚಿವರಿಗೆ ಕೋಕ್ .!
ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಪ್ರಮುಖ ಸ್ಥಾನಗಳನ್ನು ನಿರ್ವಹಿಸಿದ್ದ ಸಚಿವರುಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ಕೊಟ್ಟಿದ್ದಾರೆ. ಆರು ಮಂದಿ ಸಚಿವರುಗಳನ್ನು ಬೊಮ್ಮಾಯಿ ಸಚಿವ ಸಂಪುಟದಿಂದ ಕೈ ಬಿಡಲಾಗಿದೆ. ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಸಿಪಿ ಯೋಗೇಶ್ವರ್, ಲಕ್ಷ್ಮಣ ಸವದಿ, ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಆರ್ ಶಂಕರ್ಗೆ ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದೆ. ಇವರೆಲ್ಲ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರುಗಳಾಗಿದ್ದರು.
ಇನ್ನು ಬಿವೈ ವಿಜಯೇಂದ್ರ ಹೆಸರು ನೂತನ ಸಚಿವ ಸಂಪುಟದಲ್ಲಿರಲಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಈ ಊಹಾಪೋಹಕ್ಕೂ ನೂತನ ಸಚಿವರ ಪಟ್ಟಿ ಉತ್ತರ ಕೊಟ್ಟಿದೆ. ಬಿವೈ ವಿಜಯೇಂದ್ರಗೆ ಡಿಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಬಿಎಸ್ವೈ ಬಿಜೆಪಿ ಹೈ ಕಮಾಂಡ್ ಜೊತೆ ಲಾಬಿ ಮಾಡಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ವಿಜಯೇಂದ್ರ ಅವರಿಗೆ ಡಿಸಿಎಂ ಹಾಗೂ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ವಿಜಯೇಂದ್ರ ಅವರ ಹೆಸರು ಸಚಿವರ ಪಟ್ಟಿಯಲ್ಲಿ ಇಲ್ಲ. ಈ ಮೂಲಕ ಊಹಾಪೋಹಕ್ಕೆ ತೆರೆಬಿದ್ದಿದೆ.
ನೂತನ ಸಚಿವರು:
- ಭೈರತಿ ಬಸವರಾಜ್
- ಸೋಮಣ್ಣ
- ಬಿ ಸಿ ಪಾಟೀಲ್
- ಆನಂದ್ ಸಿಂಗ್
- ಗೋಪಾಲಯ್ಯ
- ಅರಗ ಜ್ಞಾನೇಂದ್ರ
- ಸುನಿಲ್ ಕುಮಾರ್
- ಹಾಲಪ್ಪ ಆಚಾರ್
- ಗೋವಿಂದ ಕಾರಜೋಳ
- ಆರ್ ಅಶೋಕ್
- ಸುಧಾಕರ್
- ಎಂ ಟಿ ಬಿ ನಾಗರಾಜ್
- ಅಂಗಾರ
- ಮಾಧುಸ್ವಾಮಿ
- ಎಸ್ ಟಿ ಸೋಮಶೇಖರ್
- ಈಶ್ವರಪ್ಪ
- ಬಿಸಿ ನಾಗೇಶ್
- ಶಿವರಾಮ ಹೆಬ್ಬಾರ್
- ಪ್ರಭು ಚೌಹಾಣ್
- ಮುರುಗೇಶ್ ನಿರಾಣಿ
- ಉಮೇಶ್ ಕತ್ತಿ
- ಸಿಸಿ ಪಾಟೀಲ್
- ಶಂಕರ್ ಪಾಟೀಲ್ ಮುನೇನಕೊಪ್ಪ
- ಶಶಿಕಲಾ ಜೊಲ್ಲೆ
- ನಾರಾಯಣ ಗೌಡ
- ಅಶ್ವತ್ಥ ನಾರಾಯಣ
- ಮುನಿರತ್ನ
- ಕೋಟಾ ಶ್ರೀನಿವಾಸ ಪೂಜಾರಿ
- ಶ್ರೀರಾಮುಲು