ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯ ಇದರ ಆಶ್ರಯದಲ್ಲಿ “ಅಖಂಡ ಭಾರತ” ಸಂಕಲ್ಪ ದಿನವೂ ಶ್ರೀ ಶಾರದಾ ಸಭಾ ಭವನದಲ್ಲಿ ಆ.12 ರಂದು ನಡೆಯಿತು.
ಭಾರತ ಮಾತೆಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವುದರೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಅಖಂಡ ಭಾರತ ಸಂಕಲ್ಪ ದಿನದ ಪ್ರಮುಖ ಭಾಷಣಕಾರರಾಗಿ ಮಾತನಾಡಿದ, ಹಿಂ.ಜಾ.ವೇ.ಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ಭಾರತ ದೇಶದ ಅಖಂಡತೆಯ ಅವಶ್ಯಕತೆ, ದೇಶದ ಅಖಂಡತೆಗಾಗಿ ಹಿರಿಯರು ನಡೆಸಿದ ಹೋರಾಟ, ದೇಶ ವಿರೋಧಿ ಚಟುವಟಿಕೆ ವಿರುದ್ದ ಜನತೆಯ ಹೋರಾಟದ ಬಗ್ಗೆ ತಿಳಿಸಿದರು. ಉಳ್ಳಾಲದಲ್ಲಿ ಐ.ಸಿ.ಎಸ್ ಉಗ್ರ ಚಹರೆಗಳ ವಿರುದ್ಧ ಕಾಂಗ್ರೆಸ್ ಸೇರಿದಂತೆ ಬುದ್ಧಿಜೀವಿಗಳು ಮೌನವಾಗಿದ್ದಾರೇ ಅವರ ವಿರುದ್ಧ ಪ್ರಶ್ನಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಯೋಧ ಡೀಕೆಶ್ ಪೂಜಾರಿ, ಮುಂಡಾಜೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ಜ್ಯೋತಿಷಿ ಅನಿಲ್ ಪಂಡಿತ್ ವಹಿಸಿದ್ದರು. ಹಿಂದೂ ಜಾಗರಣಾ ವೇದಿಕೆ ತುಂಬೆ ವಲಯದ ಅಧ್ಯಕ್ಷ ವಿಜಯ್ ಕಜೆಕಂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಖಂಡ ಭಾರತದ ಪ್ರತಿಜ್ಞಾ ಸಂಕಲ್ಪದ ಬಳಿಕ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಮುಂದಾಳು ತಾರಾನಾಥ ಕೊಟ್ಟಾರಿ, ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ, ಪುರುಷೋತ್ತಮ ಗಟ್ಟಿ, ಮನೋಹರ್ ಕುಂಜತ್ತೂರು, ಪಂಚಾಯತ್ ಸದಸ್ಯರಾದ ಕಿಶೋರ್ ರಾಮಲ್ ಕಟ್ಟೆ, ಅರುಣ್ ಕುಮಾರ್ ಗಾಣದಲಚ್ಚಿಲು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.