ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಹೋದರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹರ್ಷೇಂದ್ರ ಹೆಗ್ಗಡೆ ಆ.13 ರಂದು ಭೇಟಿ ನೀಡಿದರು.
ಮರದ ಕೆತ್ತನೆ ಸತ್ಯಧರ್ಮ ಚಾವಡಿ ವಿನ್ಯಾಸಗಳನ್ನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತುತ್ತ ತುದಿಯ ಶಿಖರಾಗ್ರೆಯಲ್ಲಿರುವ ಕೋಟಿ-ಚೆನ್ನಯ ಮೂಲಸ್ಥಾನ ಗರಡಿಗೆ ಮತ್ತು ಬೆರ್ಮೆರ ಗುಡಿ ಸಂದರ್ಶಿಸಿ ಶಿಲಾಮಯವಾಗಿ ನಿರ್ಮಾಣದ ಗರಡಿಯ ಕೆಲಸ ಉತ್ತಮ ಗುಣಮಟ್ಟದಲ್ಲಿರುವುದಾಗಿ ತಿಳಿಸಿದರು.ಕ್ಷೇತ್ರದ ಪ್ರತಿ ಸ್ಥಳಗಳನ್ನ ಸೂಕ್ಷ್ಮವಾಗಿ ಗಮನಿಸಿದರು ದೇಯಿ ಮಾತೆಯ ಮಹಾಸಮಾಧಿ,ಕೊಡಿಮರ, ಧೂಮಾವತಿ ದೈವಸ್ಥಾನ ವೀಕ್ಷಿಸಿ ತಾನು ಕಂಡ ಹಲವು ಉತ್ತಮ ವಾಸ್ತು ಶಿಲ್ಪದ ದೇವಾಲಯಗಳಲ್ಲಿ ಇದೂ ಒಂದಾಗಿದೆ ಎಂದರು. ಕ್ಷೇತ್ರದ ಮುಂದಿನ ನಿರ್ವಹಣಾ ಕ್ರಮಗಳ ಬಗ್ಗೆ ಸಲಹೆ ಸೂಚನೆಗಳನ್ನ ನೀಡಿದರು. ಕ್ಷೇತ್ರದ ವತಿಯಿಂದ ಪ್ರಸಾದ, ಫಲಪುಷ್ಪ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಬಾಲಕೃಷ್ಣ ಪೂಜಾರಿ,ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು .ಕ್ಷೇತ್ರದ ವ್ಯವಸ್ಥಾಪಕರಾದ ದೀಪಕ್ ಕೋಟ್ಯಾನ್ ಮತ್ತು ಸಿಬ್ಬಂದಿ ಬಳಗ ಹರ್ಷೇಂದ್ರ ಹೆಗ್ಗಡೆರವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.