ಪುತ್ತೂರು: ಡಿವೈಎಸ್ಪಿ ಕಚೇರಿಯ ಹೆಡ್ಕಾನ್ಸ್ಟೆಬಲ್ ಲಕ್ಷ್ಮೀನಾರಾಯಣ ಅವರ ತಾಯಿ ಜಿಡಕಲ್ಲು ನಿವಾಸಿ ಗೌರಿ(75 ವ)ರವರು ಆ.17 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಗೌರಿ ಅವರ ಕೋವಿಡ್ ವರದಿ ಪಾಸಿಟಿವ್ ಆಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಗೌರಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು.
ಮೃತರು ಪುತ್ರ ಲಕ್ಷ್ಮೀನಾರಾಯಣ, ಪುತ್ರಿಯರಾದ ಶ್ರೀದೇವಿ, ಮಂಜುಳಾ, ಜಯಲಕ್ಷ್ಮಿ, ಜಯಂತಿ ಅವರನ್ನು ಅಗಲಿದ್ದಾರೆ.
ಶಾಸಕರ ವಾರ್ರೂಮ್ ಮೂಲಕ ಅಂತ್ಯಕ್ರಿಯೆ: ಗೌರಿ ಅವರ ಮೃತದೇಹವನ್ನು ಪುತ್ತೂರು ಮಡಿವಾಳಕಟ್ಟೆ ಸ್ಮಶಾನದಲ್ಲಿ ಶಾಸಕರ ವಾರ್ ರೂಮ್ ಮೂಲಕ ಅಂತ್ಯಸಂಸ್ಕಾರ ಮಾಡಲಾಯಿತು. ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ಅವರ ನೇತೃತ್ವದಲ್ಲಿ ಸ್ಥಾನ ಮೇಲ್ವಿಚಾರಕ ಸತೀಶ್ರವರು ಪಿಪಿಇ ಕಿಟ್ ಧರಿಸಿ ಸಹಕರಿಸಿದರು. ಮೃತರ ಮೈದುನ ಬಾಲಕೃಷ್ಣ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ಸಂದರ್ಭದಲ್ಲಿ ಮೃತರ ಅಳಿಯಂದಿರಾದ
ಸತೀಶ್, ನಾರಾಯಣ, ರಮೇಶ್ ಮತ್ತು ಮೃತರ ಸಹೋದರರಾದ ವೆಂಕಪ್ಪ ನಾಯ್ಕ, ಮೋನಪ್ಪನಾಯ್ಕ ಉಪಸ್ಥಿತರಿದ್ದರು.