ಮಂಗಳೂರು: ಕುತ್ತಿಗೆ ಭಾಗದಲ್ಲಿ ನೋವು ಮತ್ತು ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 28 ವರ್ಷದ ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆಯ ವೈದ್ಯರು ಶ್ವಾಸನಾಳದಲ್ಲಿದ್ದ ಸ್ಕಾರ್ಫ್ ಪಿನ್ ಹೊರತೆಗೆದಿದ್ದಾರೆ.
ಬುರ್ಖಾ ಧರಿಸುವ ವೇಳೆ ಬಾಯಲ್ಲಿ ಕಚ್ಚಿದ್ದ ಪಿನ್ ಬಾಯಿ ಮೂಲಕ ದೇಹದೊಳಗೆ ಹೋಗಿ ನೋವಿನ ಹಿನ್ನೆಲೆಯಲ್ಲಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಮಹಿಳೆಯ ದಾಖಲಿಸಲಾಗಿತ್ತು.
ಇಎನ್ಟಿ ವಿಭಾಗದ ಹಿರಿಯ ವೈದ್ಯ ದೀಕ್ಷಿತ್ ರಾಜಮೋಹನ್ ಮತ್ತು ಕಿರಿಯ ವೈದ್ಯೆ ಅಮೃತಾ ಮತ್ತು ಡಾ.ಜಾಸಿಮ್ ಶಸ್ತ್ರಚಿಕಿತ್ಸೆ ಮೂಲಕ ಪಿನ್ ಹೊರತೆಗೆದಿದ್ದಾರೆ. ಚಿಕಿತ್ಸಾ ಕ್ರಮ ಅನಸ್ತೇಶಿಯಾ ಮತ್ತು ಸರ್ಜರಿ ಮಾಡುವ ವೈದ್ಯರಿಗೆ ಸವಾಲಾಗಿತ್ತು ಎಂದು ಡಾ.ದೀಕ್ಷಿತ್ ರಾಜ್ಮೋಹನ್ ತಿಳಿಸಿದ್ದಾರೆ.