ಪುತ್ತೂರು: ಸೆಕ್ಯುಲರ್ ಯೂತ್ ಫಾರಂ (ರಿ) ಸಾಲ್ಮರ ವಲಯ, ಯುವ ಕಾಂಗ್ರೆಸ್ ಸಾಲ್ಮರ ವಲಯ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಸಹಯೋಗದೊಂದಿಗೆ ಕೆ.ಎಂ.ಸಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಕಾರದೊಂದಿಗೆ ಸಾಲ್ಮರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಪಾಣಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಸುದೀರ್ಘ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಲ್ಮರ ಇಲ್ಲಿನ ಶಿಕ್ಷಕರಾಗಿದ್ದ ಶಿವಾನಂದ್ ಮೇಷ್ಟ್ರು ಹಾಗೂ ಮೌಂಟೆನ್ ವ್ಯೂ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಾಪಕರಾಗಿದ್ದ ಭಾಸ್ಕರ್ ರೈ ಇವರನ್ನು ಸನ್ಮಾನಿಸಲಾಯಿತು.
ಕೋವಿಡ್ ವಾರಿಯರ್ಸ್ ಗಳಾದ ಯು.ಟಿ.ಕೆ ಹೆಲ್ಪ್ ಲೈನ್ ,ಬ್ಲಡ್ ಡೋನರ್ಸ್ ಮಂಗಳೂರು (ರಿ) ಯು.ಎ.ಇ ಘಟಕದ ಅಧ್ಯಕ್ಷ ನಝೀರ್ ಅಹ್ಮದ್ ಹಾಗೂ ಉಳ್ಳಾಲ ಬ್ಲಾಕ್ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವೂಫ್ ಸಿ.ಎಂ ಇವರನ್ನು ಸನ್ಮಾನಿಸಲಾಯಿತು. ಒಟ್ಟು 60 ಮಂದಿ ಜೀವದಾನಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಯೂತ್ ಕಾಂಗ್ರೇಸ್ ಜಿಲ್ಲಾ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ ,ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ ,ಕೆ.ಪಿ.ಸಿ.ಸಿ ಅಲ್ಪ ಸಂಖ್ಯಾತ ಘಟಕ ಸಂಯೋಜಕರಾಗಿರುವ ನ್ಯಾಯವಾದಿ ನೂರುದ್ದೀನ್ ಸಾಲ್ಮರ ,ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ನವಾಝ್ ನರಿಂಗಾನ ,ಬ್ಲಡ್ ಡೋನರ್ಸ್ ದಮ್ಮಾಂ ಕಾರ್ಯ ನಿರ್ವಾಹಕರಾಗಿರುವ ಫರ್ಝಾನ್ ಸಿದ್ದಕಟ್ಟೆ ,ಹಿರಿಯ ಕಾಂಗ್ರೆಸಿಗರಾದ ಸೂತ್ರಬೆಟ್ಟು ಜಗನ್ನಾಥ್ ರೈ ,ಮುಂಡಪ್ಪ ಜಿಡೆಕಲ್ಲು ,ಯೂಸುಫ್ ತಾರಿಗುಡ್ಡೆ ,ಇಕ್ಬಾಲ್ ಬಾಳಿಲ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಶೀರ್ ಸಾಲ್ಮರ ಹಾಗೂ ಎಸ್.ವೈ.ಎಫ್ ಹಾಗೂ ಯೂತ್ ಕಾಂಗ್ರೆಸ್ ನ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಬಿರದ ಆಯೋಜಕರಾಗಿರುವ ಇರ್ಷಾದ್ ಸಾಲ್ಮರ ,ರಹೀಂ ಕೆರೆಮೂಲೆ,ಜುನೈದ್ ತಾರಿಗುಡ್ಡೆ ,ಝುಬೈರ್ ಅಸ್ಕರ್ ,ಸತ್ತಾರ್ ಜನತಾ ,ಶರೀಫ್ ಹಾಗೂ ಖಲಂದರ್ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ನ್ಯಾಯವಾದಿ ಗಝ್ಝಾಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.