ಪುತ್ತೂರು: ಗಣೇಶ ಚತುರ್ಥಿ ಮತ್ತು ಗಾಂಧಿಜಯಂತಿ ಯಂದು ಮಾಂಸ ರಹಿತ ದಿನವಾಗಿ ಆಚರಿಸುವಂತೆ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ರವರಿಗೇ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರದ 11 ದಿನಗಳನ್ನು ಮಾಂಸಾಹಾರ ರಹಿತ ದಿನಗಳಾಗಿ ಆಚರಿಸುವಂತೆ( ಆದೇಶ ಸಂಖ್ಯೆ – HUD, 65 CGL-78 ತಾರೀಕು -08.01.1979) ಆದೇಶ ನೀಡಿದ್ದು, ಆ ಆದೇಶದಂತೆ ಬರುವ ಸೆ.10 ರ ಗಣೇಶ ಚತುರ್ಥಿಯಂದು ಮತ್ತು ಒ.2 ರ ಗಾಂಧಿ ಜಯಂತಿಯಂದು ತಮ್ಮ ವ್ಯಾಪ್ತಿಯಲ್ಲಿ ಮಾಂಸಹಾರ ರಹಿತ ದಿನಗಳಾಗಿ ಆಚರಿಸುವಂತೆ ಹಾಗೂ ಆ ದಿನದಂದು ಕಸಾಯಿಖಾನೆಗಳನ್ನು ಮತ್ತು ಎಲ್ಲಾ ಮಾಂಸದ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.