ಮೈಸೂರಿನ ನಂಜನಗೂಡಿನಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದ್ದನ್ನು ಅತ್ಯಂತ ಕಟುವಾಗಿ ಖಂಡಿಸುತ್ತೇನೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ ಹೇಳಿದರು.
ಒಬ್ಬನೇ ದೇವರನ್ನು ನೂರಾರು ರೂಪ ನಾಮಗಳಲ್ಲಿ ಆರಾಧಿಸುವ ಹಿಂದೂಗಳ ಅತ್ಯಂತ ಪವಿತ್ರ ಶ್ರದ್ಧಾ ಕೇಂದ್ರ ದೇವಸ್ಥಾನಗಳು, ಕೋಟ್ಯಾಂತರ ಹಿಂದೂಗಳ ಆಧ್ಯಾತ್ಮ ಮಂದಿರ, ಧ್ಯಾನ ದೇಗುಲ, ಭಕ್ತಿಯ ಕೇಂದ್ರ, ನೆಮ್ಮದಿ ತಾಣವದು.ಎರಡು ಸಾವಿರ ವರ್ಷಗಳ ಕಾಲ ವಿದೇಶಿ ಆಕ್ರಮಣಕಾರಿಗಳ ವಿರುದ್ಧ ಹೋರಾಡಿ ಹಿಂದೂ ಸಮಾಜವನ್ನು ರಾಷ್ಟ್ರವನ್ನು ರಕ್ಷಿಸಲು ಸಾಧ್ಯವಾಗಿರುವುದು ಇದೇ ದೇವಾಲಯಗಳ ಸಾನಿಧ್ಯದಿಂದ. ಹಿಂದೂ ಸಮಾಜದ, ಭಾರತದ ಉಳಿವಿಗೆ ಕಾರಣವಾದ ದೇವ ಮಂದಿರಗಳನ್ನು ಧ್ವಂಸಗೊಳಿಸುವುದು ಅಪರಾಧ.
ಇಂತಹ ನೀಚ ಕೃತ್ಯ ನಂಜನಗೂಡಿನಲ್ಲಿ ನಡೆದಿದೆ. ‘ಈ ಹೇಯ ಕೃತ್ಯ ನಡೆಸಿದ ದೇವ ವಿರೋಧಿ ಮಾನಸಿಕತೆಯ, ಕಮ್ಯುನಿಸ್ಟ್ ಮಾನಸಿಕತೆಯ ದುಷ್ಟ ಅಧಿಕಾರಿಗಳನ್ನು ವಜಾಗೊಳಿಸಿ ದೇವಸ್ಥಾನದ ಪುನರ್ ನಿರ್ಮಾಣ ಮಾಡಿ ನೀವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಕೈ ಗೊಳ್ಳಿ, ಇಲ್ಲವಾದಲ್ಲಿ ಹಿಂದೂ ಸಮಾಜದ ಶಾಪಕ್ಕೆ, ಹಿಂದೂ ಸಮಾಜದ ಆಕ್ರೋಶಕ್ಕೆ ನೀವು ಧೂಳಿಪಟವಾಗುತ್ತೀರಿ’ ಎಂದು ಎಚ್ಚರಿಕೆ ನೀಡಿದರು.
‘ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ನಿಮ್ಮ ಆಳ್ವಿಕೆಯಲ್ಲಿ ಇಂತಹ ಹಿಂದೂ ವಿರೋಧಿ ನೀಚ ಕೃತ್ಯ ನಡೆಯುತ್ತದೆ ಎಂದಾದರೇ ಹಿಂದೂ ಸಮಾಜ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ’, ‘ನಿಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿ ಕಳುಹಿಸಿದ್ದು, ಡೋಂಗಿ ಸೆಕ್ಯೂಲರ್ ವಾದಿಗಳಂತೆ ಹಿಂದೂ ಸಮಾಜಕ್ಕೆ ದ್ರೋಹವೆಸಗಲು ಅಲ್ಲ, ಹಿಂದೂ ಧರ್ಮವನ್ನು, ಹಿಂದೂ ಸಂಸ್ಕೃತಿಯನ್ನು, ಹಿಂದೂ ಮಾತೆಯರನ್ನು, ಗೋ ಮಾತೆಯನ್ನಾ ರಕ್ಷಣೆ ಮಾಡುವುದಕ್ಕಾಗಿ’ ನಿಮ್ಮನ್ನು ಗೆಲ್ಲಿಸಿ ಕಳುಹಿಸಿದ್ದು, ಅಧಿಕಾರದಲ್ಲಿ ಕುಳಿತು ಮಜಾ ಮಾಡುವುದಕ್ಕೆ ಅಲ್ಲಾ ಎಂಬುದನ್ನು ನೆನಪು ಮಾಡುತ್ತಿದ್ದೇವೆ ಎಂದರು.