ಪುತ್ತೂರು: ಬ್ಲಾಕ್ ಎಸ್ಸಿ ಘಟಕದ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪುತ್ತೂರು ಬ್ಲಾಕ್ ನ ಎಸ್ಸಿ ಘಟಕದ ಅಧ್ಯಕ್ಷರಾಗಿ ಕೇಶವ ಪಡೀಲ್ ರವರು ಈಗಾಗಲೇ ನೇಮಕಗೊಂಡಿದ್ದು,ಬ್ಲಾಕ್ ಎಸ್ಸಿ ಘಟಕಕ್ಕೆ ಪದಾಧಿಕಾರಿಗಳು ನೇಮಕವಾಗ ಬೇಕಾಗಿದ್ದು, ಇದರ ಬಗ್ಗೆ ಹಾಗೂ ಬ್ಲಾಕ್ ಎಸ್ಸಿ ಘಟಕದ ಪದಗ್ರಹಣ ಮತ್ತು ಸಮಾವೇಶ ನಡೆಸುವ ಬಗ್ಗೆ ಸಮಾಲೋಚನೆ ಸಭೆ ನಡೆಯಿತು.
ಸಭೆಯಲ್ಲಿ ಬ್ಲಾಕ್ ಮಟ್ಟದಲ್ಲಿ ಎಸ್ಸಿ ಘಟಕವನ್ನು ಸಂಘಟಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಮಹಮ್ಮದ್ ಬಡಗನ್ನೂರು,ನಗರ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಮಹಮ್ಮದ್ ಅಲಿ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಐತಪ್ಪ ಪೇರಲತಡ್ಕ, ಮಾಜಿ ನಗರ ಸಭಾ ಸದಸ್ಯರಾದ ಮುಕೇಶ್ ಕೆಮ್ಮಿಂಜೆ. ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್ ಮೊದಲಾದವರು ಸಂಘಟನೆಯ ರೂಪುರೇಷೆ ಬಗ್ಗೆ ಚರ್ಚೆ ನಡೆಸಿದರು.ಈ ಸಭೆಯಲ್ಲಿ ಪ್ರಹಲಾದ್ ಬೆಳ್ಳಿಪ್ಪಾಡಿ, ಬಾಬು ಕಲ್ಲಗುಡ್ಡೆ, ನಿವೃತ್ತ ಅಧಿಕಾರಿ ಮಣಿ ಆನೆಮಜಲು,ಬಾಲಕೃಷ್ಣ ಕೂರ್ನಡ್ಕ ಶ್ರೀಮತಿ ವಿಜಯಲಕ್ಷ್ಮಿ ಕೂರ್ನಡ್ಕ ದಿನೇಶ್ ಭಕ್ತಕೋಡಿ, ಅಶೋಕ ಪಡೀಲ್, ಸತೀಶ್ ಪಡೀಲ್, ಶರತ್ ಪಡೀಲ್,ಆಮುಣಿ ಬೆಟ್ಟಂಪಾಡಿ, ಅಚ್ಚುತ ಬೆಟ್ಟಂಪಾಡಿ, ಶೇಖರ ಅರಿಯಡ್ಕ, ಗಣೇಶ ಆರ್ಯಾಪು, ಮಹೇಶ್ ಕುಮಾರ್, ಮುದ್ದು, ಗಣೇಶ ನೇರಲ್ತಡ್ಕ, ಪದ್ಮನಾಭ, ರವಿ, ಭವಿತ್ ಜೆ ಹಾಗೂ ಹಲವು ದಲಿತ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಮೌರಿಸ್ ಮಸ್ಕರೇನಸ್,ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಬಂಡಾರಿ, ಬ್ಲಾಕ್ ಕಾರ್ಯದರ್ಶಿ ಮನಮೋಹನ ರೈ, ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕೂಬು ದರ್ಬೆ ಮೊದಲಾದವರು ಉಪಸ್ಥಿತರಿದ್ದರು.