ಪುತ್ತೂರು: ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ದೋಷ ಪ್ರಾಯಶ್ಚಿತ ಕಾರ್ಯಕ್ರಮ ಸೆ.20 ರಂದು ಶ್ರೀ ಮೃತ್ಯುಂಜಯೇಶ್ವರ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಶ್ರೀರಾಮ ಗೆಳೆಯರ ಬಳಗದ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ದೇವಾಲಯದ ಸುತ್ತಮುತ್ತ ಸ್ವಚ್ಛತೆ ಮಾಡಿ ದೇವಾಲಯದ ವಠಾರ ನೀರು ಹಾಕಿ ತೊಳೆದು ತಳಿರು ತೋರಣದಿಂದ ದೇವಾಲಯವನ್ನು ಶೃಂಗರಿಸಲಾಯಿತು.ದೇವಾಲಯದ ಒಳಗೊ ನೀರು ಹಾಕಿ ತೊಳೆದು ಸ್ವಚ್ಚಗೊಳಿಸಿದರು.
ಶ್ರಮದಾನದಲ್ಲಿ ಮತ್ಯುಂಜಯೇಶ್ವರ ದೇವಾಲಯದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅರುಣಕುಮಾರ್ ಪುತ್ತಿಲ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಲಚಂದ್ರ ಕಡ್ಯ, ನಾಗೇಶ್,ಅವಿನಾಶ್, ಪಂಚಾಯತ್ ಸದಸ್ಯ ಅಶೋಕ್ ಪುತ್ತಿಲ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿಕೆ, ಕಾರ್ಯದರ್ಶಿ ದಿನೇಶ್ ಸೇರಿದಂತೆ ಸುಮಾರು 50 ಕ್ಕಿಂತಲೂ ಮಿಕ್ಕಿದ ಸದಸ್ಯರು ಭಾಗವಹಿಸಿದ್ದರು. ಗೆಳೆಯರ ಬಳಗದ ಧನಂಜಯ ಸ್ವಾಗತಿಸಿ, ಶ್ರೀಧರ ನಾಯ್ಕ್ ವಂದಿಸಿದರು.